ಅನ್ನಸಂತರ್ಪಣೆ ಮುಗಿದ ನಂತರ ಮಠದ ಸಿಬ್ಬಂದಿ ‘ಸೂರೆ’ಗೆ ಸೂಚನೆ ಸಿಗುತ್ತಿದ್ದಂತೆ ಪಾಕಶಾಲೆಗೆ ನುಗ್ಗುವ ಭಕ್ತರು ಉಳಿದ ಅನ್ನ, ಸಾರು, ಹುಳಿ, ಪಾಯಸ ಸೇರಿದಂತೆ ಇತರ ಭಕ್ಷ್ಯಗಳನ್ನು ತುಂಬಿಕೊಳ್ಳಲು ಶುರುಮಾಡುತ್ತಾರೆ. ದೊಡ್ಡ ದೊಡ್ಡ ಪಾತ್ರೆ, ಕಡಾಯಿ, ಬಕೆಟ್, ಕ್ಯಾನ್ ಹೀಗೆ ಸಿಕ್ಕಸಿಕ್ಕ ವಸ್ತುಗಳಲ್ಲಿ ತುಂಬಿಸಿ ಮನೆಗೆ ಸಾಗಿಸುತ್ತಾರೆ.