ಭೂಮಿ ಮಾರಾಟ, ಕ್ರಯ, ದಾನಪತ್ರ, ವಿಭಾಗಪಟ್ಟಿ, ಭೂಮಿ ಪರಿವರ್ತನೆ, ನಕ್ಷೆ ಸೇರಿದಂತೆ ಭೂಮಿಗೆ ಸಂಬಂಧಿಸಿದ ಎಲ್ಲ ಕೆಲಸಗಳಿಗೆ ಸರ್ವೆ ಅಗತ್ಯವಾಗಿದೆ. 2 ತಿಂಗಳುಗಳಿಂದ ಸರ್ವೆಯರ್ಗಳು ಮುಷ್ಕರ ನಡೆಸುತ್ತಿರುವುದರಿಂದ ಸರ್ವೆ ಕಾರ್ಯ ನಡೆಯದೆ ಜನಸಾಮಾನ್ಯರಿಗೆ ತೀವ್ರ ಸಮಸ್ಯೆಯಾಗಿದೆ. ಮತ್ತೆ ಸರ್ವೆ ಕಾರ್ಯ ಆರಂಭವಾದರೆ ಮಾತ್ರ ಸಮಸ್ಯೆ ಬಗೆಹರಿಯುತ್ತದೆ ಎಂದರು.