<p><strong>ಉಡುಪಿ: </strong>ಬಿಸಿಲಿನ ದಗೆ ಹೆಚ್ಚಾಗುತ್ತಿದ್ದಂತೆ ಎಳನೀರು, ಕಲ್ಲಂಗಡಿ, ಜ್ಯೂಸ್ ಹಾಗೂ ಐಸ್ಕ್ರೀಂಗೆ ಬೇಡಿಕೆ ಹೆಚ್ಚಾಗಿದೆ. ಪ್ರತಿ ವರ್ಷಕ್ಕಿಂತ ಈ ಬಾರಿಯ ಬೇಸಗೆ ಹೆಚ್ಚು ತಾಪಮಾನದಿಂದ ಕೂಡಿದ್ದು ದಾಹ ತಣಿಸಿಕೊಳ್ಳಲು ಸಾರ್ವಜನಿಕರು ತಂಪು ಪಾನೀಯಗಳ ಮೊರೆ ಹೋಗಿದ್ದಾರೆ.</p>.<p>ನಗರದ ಬಹುತೇಕ ಎಳನೀರು ಅಂಗಡಿಗಳ ಮುಂದೆ ಗ್ರಾಹಕರು ಹೆಚ್ಚಾಗಿರುವ ದೃಶ್ಯಗಳು ಕಂಡು ಬರುತ್ತಿವೆ. ಬೊಂಡಕ್ಕೆ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಬೆಲೆಯೂ ಸ್ವಲ್ಪ ಹೆಚ್ಚಾಗಿದೆ. ಸಾಮಾನ್ಯವಾಗಿ 30 ರಿಂದ 35ಕ್ಕೆ ಸಿಗುತ್ತಿದ್ದ ಎಳನೀರು ₹ 40 ಮುಟ್ಟಿದೆ. ಬೆಲೆ ಸ್ವಲ್ಪ ಹೆಚ್ಚಾದರೂ ಬಿಸಿಲಿನ ಪ್ರಖರತೆ ತಾಳಲಾಗದೆ ನಾಗರಿಕರು ಖರೀದಿಯಲ್ಲಿ ತೊಡಗಿದ್ದಾರೆ.</p>.<p>ಮಾರಾಟ ಶೇ 40ರಷ್ಟು ಹೆಚ್ಚಳ:</p>.<p>ಸಾಮಾನ್ಯ ದಿನಗಳಲ್ಲಿ ಪ್ರತಿ ದಿನ 60 ರಿಂದ 70 ಬೊಂಡ ಖರ್ಚಾಗುತ್ತಿತ್ತು. ಬಿಸಿಲಿನ ತಾಪ ಹೆಚ್ಚಾದ ಬಳಿಕ ಶತಕದ ಗಡಿ ದಾಟಿದೆ ಎನ್ನುತ್ತಾರೆ ಎಳನೀರು ವ್ಯಾಪಾರಿ ಕೃಷ್ಣಮೂರ್ತಿ.</p>.<p>ಉಡುಪಿ ಜಿಲ್ಲೆಗೆ ನೆರೆಯ ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ ಜಿಲ್ಲೆಗಳಿಂದ ಹೆಚ್ಚಾಗಿ ಎಳನೀರು ಪೂರೈಕೆಯಾಗುತ್ತದೆ. ಬೇಡಿಕೆ ಹೆಚ್ಚಾಗಿರುವುದರಿಂದ ಪೂರೈಕೆ ಪ್ರಮಾಣವೂ ಕಡಿಮೆಯಾಗಿದೆ ಎನ್ನುತ್ತಾರೆ ಅವರು.</p>.<p>ಕಲ್ಲಂಗಡಿಗೆ ಬೇಡಿಕೆ:</p>.<p>ಅತಿ ಹೆಚ್ಚು ದ್ರವದ ಪ್ರಮಾಣ ಹೊಂದಿರುವ ದೇಹಕ್ಕೆ ಹಿತ ಹಾಗೂ ಆರೋಗ್ಯಯುತವಾದ ಕಲ್ಲಂಗಡಿಗೆ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಸೃಷ್ಟಿಯಾಗಿದೆ. ಪೂರ್ಣ ಕಡು ಹಸಿರು ಬಣ್ಣದ ಕಲ್ಲಂಗಡಿ ಕೆ.ಜಿಗೆ ₹ 20 ರಿಂದ ₹ 25 ಇದ್ದರೆ, ಹಸಿರು ಬಣ್ಣದ ಮಧ್ಯೆ ಗೆರೆ ಹೊಂದಿರುವ ದೊಡ್ಡ ಗಾತ್ರದ ಕಲ್ಲಂಗಡಿಗೆ ಕೆ.ಜಿಗೆ ₹ 25 ರಿಂದ ₹30 ದರ ಇದೆ. ಸಾಮಾನ್ಯವಾಗಿ ಎರಡೂ ತಳಿಯ ಕಲ್ಲಂಗಡಿ ಕೆ.ಜಿಗೆ 15 ರಿಂದ 20ಕ್ಕೆ ಲಭ್ಯವಾಗುತ್ತಿತ್ತು.</p>.<p>ಚಳಿಗಾಲದಲ್ಲಿ ಗ್ರಾಹಕರ ಬರ ಎದುರಿಸುತ್ತಿದ್ದ ಐಸ್ಕ್ರೀಂ ಹಾಗೂ ಜ್ಯೂಸ್ ಅಂಗಡಿಗಳಲ್ಲಿ ಗ್ರಾಹಕರು ಗಿಜಿಗುಡುತ್ತಿದ್ದಾರೆ. ಕಬ್ಬಿನ ಹಾಲು ಮಾರಾಟವೂ ಜೋರಾಗಿದೆ. </p>.<p>ತರಕಾರಿ ದರ:</p>.<p>ಕಳೆದ ವಾರದ ದರಕ್ಕೆ ಹೋಲಿಸಿದರೆ ಕೆಲವು ತರಕಾರಿಗಳ ಬೆಲೆ ಸ್ವಲ್ಪ ಹೆಚ್ಚಾಗಿದ್ದು ಕೆಲವು ಇಳಿಕೆಯಾಗಿವೆ. ತೀವ್ರ ಕುಸಿತ ಕಂಡಿದ್ದ ಈರುಳ್ಳಿಯ ದರ 20 ರಿಂದ 25ಕ್ಕೆ ಹೆಚ್ಚಾಗಿದೆ. ಕಳೆದವಾರ ₹ 60 ಇದ್ದ ಬೀನ್ಸ್ ದರ ಈ ವಾರ ₹ 80 ಮುಟ್ಟಿದೆ. ಟೊಮೆಟೊ 25 ರಿಂದ 30 ತಲುಪಿದೆ.</p>.<p>ಕ್ಯಾರೆಟ್ ದರ ಸ್ಥಿರವಾಗಿದ್ದು ಕೆ.ಜಿಗೆ 25 ರಿಂದ 35ಕ್ಕೆ ಸಿಗುತ್ತಿದೆ. ಈರೇಕಾಯಿ ದರ 50 ರಿಂದ 55 ಇದ್ದರೆ, ಬೆಂಡೆಕಾಯಿ ಬೆಲೆ ಗಗನಮುಖಿಯಾಗಿದ್ದು 60 ದಾಟಿದೆ. ಕ್ಯಾಪ್ಸಿಕಂ ದರವೂ 70ರಿಂದ 80ಕ್ಕೆ ಏರಿಕೆಯಾಗಿದೆ. ಸೋರೆಕಾಯಿ ₹ 30, ಎಲೆಕೋಸು ಕೆ.ಜಿಗೆ 20, ಆಲೂಗಡ್ಡೆ 30, ಬದನೆಕಾಯಿ 30, ಸಾಂಬಾರ್ ಸೌತೆ 20 ರಿಂದ 25, ಹೂಕೋಸು ₹ 30, ಹಸಿರು ಬಟಾಣಿ 60 ದರ ಇದೆ.</p>.<p>ಕಳೆದವಾರ 40 ಇದ್ದ ತೊಂಡೆಕಾಯಿ ಈ ವಾರ 60 ಮುಟ್ಟಿದೆ. ಕ್ಯಾಪ್ಸಿಕಂ ದರವೂ 60 ರಿಂದ 70 ತಲುಪಿದೆ. ಬೀಟ್ರೂಟ್ 30, ಕುಂಬಳಕಾಯಿ 20, ಬೂದು ಕುಂಬಳ 30 ದರ ಇದೆ. ಬೆಳ್ಳುಳ್ಳಿ ₹ 100. ಸಿಹಿ ಗೆಣಸು 40, ಮೂಲಂಗಿ 35, ಸೌತೆಕಾಯಿ 35, ನವಿಲುಕೋಸು 30, ಪಡವಲಕಾಯಿ 30, ಹಸಿ ಮೆಣಸಿನಕಾಯಿ 60, ಶುಂಠಿ 70 ಬೆಲೆ ಇತ್ತು.</p>.<p>ಬಾಳೆಹಣ್ಣು ಏರಿಕೆ:</p>.<p>ಬಾಳೆಹಣ್ಣಿನ ದರ ಸ್ಥಿರವಾಗಿದ್ದು ಕೆ.ಜಿ ಏಲಕ್ಕಿ ಬಾಳೆಗೆ 80 ಇದೆ. ಪಚ್ಚಬಾಳೆ ದರ 40 ಇದೆ. ಧಾರ್ಮಿಕ ಕಾರ್ಯಕ್ರಮ, ಮದುವೆ, ಶುಭ ಸಮಾರಂಭಗಳು ಹೆಚ್ಚು ನಡೆಯುತ್ತಿರುವ ಕಾರಣ ಬಾಳೆಹಣ್ಣಿಗೆ ಬೇಡಿಕೆ ಇದೆ ಎನ್ನುತ್ತಾರೆ ವ್ಯಾಪಾರಿಗಳು.</p>.<p>ಹಣ್ಣಿನ ದರ ಎಷ್ಟು:</p>.<p>ಪಪ್ಪಾಯ ದರ ದಿಢೀರ್ ಏರಿಕೆಯಾಗಿದ್ದು ಕೆ.ಜಿಗೆ 35 ರಿಂದ 50ಕ್ಕೆ ತಲುಪಿದೆ. ಹಸಿರು ದ್ರಾಕ್ಷಿ ಕೆ.ಜಿಗೆ 70, ಕಪ್ಪು ದ್ರಾಕ್ಷಿ 120, ದಾಳಿಂಬೆ ಕೆ.ಜಿಗೆ ₹ 200, ಸೇಬು ₹150 ರಿಂದ ₹250, ಸಪೋಟ ₹60, ಮೊಸಂಬಿ ₹70, ಕಿತ್ತಳೆ ₹ 70, ಮಸ್ಕ್ ಮೆಲನ್ 40, ಪೈನಾಪಲ್ 40ಕ್ಕೆ ಮಾರಾಟವಾಯಿತು.</p>.<p>ಸೊಪ್ಪಿನ ದರ ಅಲ್ಪ ಹೆಚ್ಚಳ:</p>.<p>ಸೊಪ್ಪಿನ ದರ ಸ್ವಲ್ಪ ಇಳಿಮುಖವಾಗಿದ್ದು ಹಸಿರು ದಂಟು ಕಟ್ಟಿಗೆ ₹ 8, ಕೆಂಪು ದಂಟು ₹10, ಕರಿಬೇವು ₹4, ಕೊತ್ತಂಬರಿ ₹4, ಸಬ್ಸಿಗೆ ₹5, ಮೆಂತೆ ₹5, ಪಾಲಕ್ ₹5, ಪುದೀನ ₹5 ದರ ಇತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಡುಪಿ: </strong>ಬಿಸಿಲಿನ ದಗೆ ಹೆಚ್ಚಾಗುತ್ತಿದ್ದಂತೆ ಎಳನೀರು, ಕಲ್ಲಂಗಡಿ, ಜ್ಯೂಸ್ ಹಾಗೂ ಐಸ್ಕ್ರೀಂಗೆ ಬೇಡಿಕೆ ಹೆಚ್ಚಾಗಿದೆ. ಪ್ರತಿ ವರ್ಷಕ್ಕಿಂತ ಈ ಬಾರಿಯ ಬೇಸಗೆ ಹೆಚ್ಚು ತಾಪಮಾನದಿಂದ ಕೂಡಿದ್ದು ದಾಹ ತಣಿಸಿಕೊಳ್ಳಲು ಸಾರ್ವಜನಿಕರು ತಂಪು ಪಾನೀಯಗಳ ಮೊರೆ ಹೋಗಿದ್ದಾರೆ.</p>.<p>ನಗರದ ಬಹುತೇಕ ಎಳನೀರು ಅಂಗಡಿಗಳ ಮುಂದೆ ಗ್ರಾಹಕರು ಹೆಚ್ಚಾಗಿರುವ ದೃಶ್ಯಗಳು ಕಂಡು ಬರುತ್ತಿವೆ. ಬೊಂಡಕ್ಕೆ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಬೆಲೆಯೂ ಸ್ವಲ್ಪ ಹೆಚ್ಚಾಗಿದೆ. ಸಾಮಾನ್ಯವಾಗಿ 30 ರಿಂದ 35ಕ್ಕೆ ಸಿಗುತ್ತಿದ್ದ ಎಳನೀರು ₹ 40 ಮುಟ್ಟಿದೆ. ಬೆಲೆ ಸ್ವಲ್ಪ ಹೆಚ್ಚಾದರೂ ಬಿಸಿಲಿನ ಪ್ರಖರತೆ ತಾಳಲಾಗದೆ ನಾಗರಿಕರು ಖರೀದಿಯಲ್ಲಿ ತೊಡಗಿದ್ದಾರೆ.</p>.<p>ಮಾರಾಟ ಶೇ 40ರಷ್ಟು ಹೆಚ್ಚಳ:</p>.<p>ಸಾಮಾನ್ಯ ದಿನಗಳಲ್ಲಿ ಪ್ರತಿ ದಿನ 60 ರಿಂದ 70 ಬೊಂಡ ಖರ್ಚಾಗುತ್ತಿತ್ತು. ಬಿಸಿಲಿನ ತಾಪ ಹೆಚ್ಚಾದ ಬಳಿಕ ಶತಕದ ಗಡಿ ದಾಟಿದೆ ಎನ್ನುತ್ತಾರೆ ಎಳನೀರು ವ್ಯಾಪಾರಿ ಕೃಷ್ಣಮೂರ್ತಿ.</p>.<p>ಉಡುಪಿ ಜಿಲ್ಲೆಗೆ ನೆರೆಯ ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ ಜಿಲ್ಲೆಗಳಿಂದ ಹೆಚ್ಚಾಗಿ ಎಳನೀರು ಪೂರೈಕೆಯಾಗುತ್ತದೆ. ಬೇಡಿಕೆ ಹೆಚ್ಚಾಗಿರುವುದರಿಂದ ಪೂರೈಕೆ ಪ್ರಮಾಣವೂ ಕಡಿಮೆಯಾಗಿದೆ ಎನ್ನುತ್ತಾರೆ ಅವರು.</p>.<p>ಕಲ್ಲಂಗಡಿಗೆ ಬೇಡಿಕೆ:</p>.<p>ಅತಿ ಹೆಚ್ಚು ದ್ರವದ ಪ್ರಮಾಣ ಹೊಂದಿರುವ ದೇಹಕ್ಕೆ ಹಿತ ಹಾಗೂ ಆರೋಗ್ಯಯುತವಾದ ಕಲ್ಲಂಗಡಿಗೆ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಸೃಷ್ಟಿಯಾಗಿದೆ. ಪೂರ್ಣ ಕಡು ಹಸಿರು ಬಣ್ಣದ ಕಲ್ಲಂಗಡಿ ಕೆ.ಜಿಗೆ ₹ 20 ರಿಂದ ₹ 25 ಇದ್ದರೆ, ಹಸಿರು ಬಣ್ಣದ ಮಧ್ಯೆ ಗೆರೆ ಹೊಂದಿರುವ ದೊಡ್ಡ ಗಾತ್ರದ ಕಲ್ಲಂಗಡಿಗೆ ಕೆ.ಜಿಗೆ ₹ 25 ರಿಂದ ₹30 ದರ ಇದೆ. ಸಾಮಾನ್ಯವಾಗಿ ಎರಡೂ ತಳಿಯ ಕಲ್ಲಂಗಡಿ ಕೆ.ಜಿಗೆ 15 ರಿಂದ 20ಕ್ಕೆ ಲಭ್ಯವಾಗುತ್ತಿತ್ತು.</p>.<p>ಚಳಿಗಾಲದಲ್ಲಿ ಗ್ರಾಹಕರ ಬರ ಎದುರಿಸುತ್ತಿದ್ದ ಐಸ್ಕ್ರೀಂ ಹಾಗೂ ಜ್ಯೂಸ್ ಅಂಗಡಿಗಳಲ್ಲಿ ಗ್ರಾಹಕರು ಗಿಜಿಗುಡುತ್ತಿದ್ದಾರೆ. ಕಬ್ಬಿನ ಹಾಲು ಮಾರಾಟವೂ ಜೋರಾಗಿದೆ. </p>.<p>ತರಕಾರಿ ದರ:</p>.<p>ಕಳೆದ ವಾರದ ದರಕ್ಕೆ ಹೋಲಿಸಿದರೆ ಕೆಲವು ತರಕಾರಿಗಳ ಬೆಲೆ ಸ್ವಲ್ಪ ಹೆಚ್ಚಾಗಿದ್ದು ಕೆಲವು ಇಳಿಕೆಯಾಗಿವೆ. ತೀವ್ರ ಕುಸಿತ ಕಂಡಿದ್ದ ಈರುಳ್ಳಿಯ ದರ 20 ರಿಂದ 25ಕ್ಕೆ ಹೆಚ್ಚಾಗಿದೆ. ಕಳೆದವಾರ ₹ 60 ಇದ್ದ ಬೀನ್ಸ್ ದರ ಈ ವಾರ ₹ 80 ಮುಟ್ಟಿದೆ. ಟೊಮೆಟೊ 25 ರಿಂದ 30 ತಲುಪಿದೆ.</p>.<p>ಕ್ಯಾರೆಟ್ ದರ ಸ್ಥಿರವಾಗಿದ್ದು ಕೆ.ಜಿಗೆ 25 ರಿಂದ 35ಕ್ಕೆ ಸಿಗುತ್ತಿದೆ. ಈರೇಕಾಯಿ ದರ 50 ರಿಂದ 55 ಇದ್ದರೆ, ಬೆಂಡೆಕಾಯಿ ಬೆಲೆ ಗಗನಮುಖಿಯಾಗಿದ್ದು 60 ದಾಟಿದೆ. ಕ್ಯಾಪ್ಸಿಕಂ ದರವೂ 70ರಿಂದ 80ಕ್ಕೆ ಏರಿಕೆಯಾಗಿದೆ. ಸೋರೆಕಾಯಿ ₹ 30, ಎಲೆಕೋಸು ಕೆ.ಜಿಗೆ 20, ಆಲೂಗಡ್ಡೆ 30, ಬದನೆಕಾಯಿ 30, ಸಾಂಬಾರ್ ಸೌತೆ 20 ರಿಂದ 25, ಹೂಕೋಸು ₹ 30, ಹಸಿರು ಬಟಾಣಿ 60 ದರ ಇದೆ.</p>.<p>ಕಳೆದವಾರ 40 ಇದ್ದ ತೊಂಡೆಕಾಯಿ ಈ ವಾರ 60 ಮುಟ್ಟಿದೆ. ಕ್ಯಾಪ್ಸಿಕಂ ದರವೂ 60 ರಿಂದ 70 ತಲುಪಿದೆ. ಬೀಟ್ರೂಟ್ 30, ಕುಂಬಳಕಾಯಿ 20, ಬೂದು ಕುಂಬಳ 30 ದರ ಇದೆ. ಬೆಳ್ಳುಳ್ಳಿ ₹ 100. ಸಿಹಿ ಗೆಣಸು 40, ಮೂಲಂಗಿ 35, ಸೌತೆಕಾಯಿ 35, ನವಿಲುಕೋಸು 30, ಪಡವಲಕಾಯಿ 30, ಹಸಿ ಮೆಣಸಿನಕಾಯಿ 60, ಶುಂಠಿ 70 ಬೆಲೆ ಇತ್ತು.</p>.<p>ಬಾಳೆಹಣ್ಣು ಏರಿಕೆ:</p>.<p>ಬಾಳೆಹಣ್ಣಿನ ದರ ಸ್ಥಿರವಾಗಿದ್ದು ಕೆ.ಜಿ ಏಲಕ್ಕಿ ಬಾಳೆಗೆ 80 ಇದೆ. ಪಚ್ಚಬಾಳೆ ದರ 40 ಇದೆ. ಧಾರ್ಮಿಕ ಕಾರ್ಯಕ್ರಮ, ಮದುವೆ, ಶುಭ ಸಮಾರಂಭಗಳು ಹೆಚ್ಚು ನಡೆಯುತ್ತಿರುವ ಕಾರಣ ಬಾಳೆಹಣ್ಣಿಗೆ ಬೇಡಿಕೆ ಇದೆ ಎನ್ನುತ್ತಾರೆ ವ್ಯಾಪಾರಿಗಳು.</p>.<p>ಹಣ್ಣಿನ ದರ ಎಷ್ಟು:</p>.<p>ಪಪ್ಪಾಯ ದರ ದಿಢೀರ್ ಏರಿಕೆಯಾಗಿದ್ದು ಕೆ.ಜಿಗೆ 35 ರಿಂದ 50ಕ್ಕೆ ತಲುಪಿದೆ. ಹಸಿರು ದ್ರಾಕ್ಷಿ ಕೆ.ಜಿಗೆ 70, ಕಪ್ಪು ದ್ರಾಕ್ಷಿ 120, ದಾಳಿಂಬೆ ಕೆ.ಜಿಗೆ ₹ 200, ಸೇಬು ₹150 ರಿಂದ ₹250, ಸಪೋಟ ₹60, ಮೊಸಂಬಿ ₹70, ಕಿತ್ತಳೆ ₹ 70, ಮಸ್ಕ್ ಮೆಲನ್ 40, ಪೈನಾಪಲ್ 40ಕ್ಕೆ ಮಾರಾಟವಾಯಿತು.</p>.<p>ಸೊಪ್ಪಿನ ದರ ಅಲ್ಪ ಹೆಚ್ಚಳ:</p>.<p>ಸೊಪ್ಪಿನ ದರ ಸ್ವಲ್ಪ ಇಳಿಮುಖವಾಗಿದ್ದು ಹಸಿರು ದಂಟು ಕಟ್ಟಿಗೆ ₹ 8, ಕೆಂಪು ದಂಟು ₹10, ಕರಿಬೇವು ₹4, ಕೊತ್ತಂಬರಿ ₹4, ಸಬ್ಸಿಗೆ ₹5, ಮೆಂತೆ ₹5, ಪಾಲಕ್ ₹5, ಪುದೀನ ₹5 ದರ ಇತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>