ಕಾರ್ಖಾನೆಯ ಮುಖ್ಯಸ್ಥರಿಗೆ ಮಕ್ಕಳನ್ನು ಸ್ಥಳಾಂತರಿಸಲು ಸಲಹೆ ನೀಡಿ ಅಲ್ಲಿರುವ ತಾಯಂದಿರ ಆರೋಗ್ಯ ವಿಚಾರಿಸಿ ಸಿಬ್ಬಂದಿ ಹಿಂದಿರುಗಿದ್ದರು. ನಂತರ ಉಡುಪಿ ಜಿಲ್ಲಾ ಕಾರ್ಮಿಕ ಇಲಾಖೆ ಹಾಗೂ ಸ್ಥಳೀಯ ಪಂಚಾಯಿತಿ ಸೇರಿದಂತೆ ಇತರ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಬಾಲಕಾರ್ಮಿಕರು ಕಾರ್ಯನಿರ್ವಹಿಸುತ್ತಿರುವ ಕುರಿತು ಮಾಹಿತಿ ಪಡೆದು ಪ್ರಕರಣ ದಾಖಲಿಸಿಕೊಂಡು ಮಕ್ಕಳನ್ನು ಉಡುಪಿ ನಿಟ್ಟೂರಿನ ಬಾಲಾಶ್ರಮಕ್ಕೆ ಸ್ಥಳಾಂತರಿಸಿದರು.