<p><strong>ಉಡುಪಿ:</strong> ಉಡುಪಿ ನಗರಕ್ಕೆ ಕುಡಿಯುವ ನೀರು ಪೂರೈಸುವ ಬಜೆ ಜಲಾಶಯಕ್ಕೆ ₹ 1.20 ಕೋಟಿ ವೆಚ್ಚದಲ್ಲಿ ಹೈಡ್ರಾಲಿಕ್ ಗೇಟ್ ಅಳವಡಿಸುವ ಯೋಜನೆಗೆ ಸಾಮಾನ್ಯ ಸಭೆ ಒಪ್ಪಿಗೆ ಸೂಚಿಸಿತು.</p>.<p>ಸೋಮವಾರ ನಗರಸಭೆಯ ಸತ್ಯಮೂರ್ತಿ ಸಭಾಂಗಣದಲ್ಲಿ ಅಧ್ಯಕ್ಷೆ ಸುಮಿತ್ರಾ ನಾಯಕ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಎಂಜಿನಿಯರ್ ಮೋಹನ್ ರಾಜ್, ಹಿಂದೆ ₹ 1.59 ಕೋಟಿ ವೆಚ್ಚದಲ್ಲಿ ಬಜೆ ಅಣೆಕಟ್ಟೆಯನ್ನು 1 ಮೀಟರ್ಗೆ ಎತ್ತರಿಸಿ, ಹೈಡ್ರಾಲಿಕ್ ಗೇಟ್ ಅಳವಡಿಸಲು ನಿರ್ಧರಿಸಲಾಗಿತ್ತು. ಅಣೆಕಟ್ಟೆಯನ್ನು 1 ಮೀಟರ್ಗೆ ಎತ್ತರಿಸಿದರೆ ಅಪಾಯ ಸಾಧ್ಯತೆ ಇದೆ ಎಂಬ ತಜ್ಞರ ಸಲಹೆ ಆಧಾರದ ಮೇಲೆ ಪ್ರಸ್ತಾವಿತ ಕಾಮಗಾರಿಯನ್ನು ಬದಲಿಸಲಾಗಿದೆ’ ಎಂದರು.</p>.<p>ಹಿಂದೆ, ಮೀಸಲಿಟ್ಟ ಅನುದಾನದಲ್ಲಿ ಬಜೆ ಡ್ಯಾಂಗೆ ₹ 1.20 ಕೋಟಿ ವೆಚ್ಚದಲ್ಲಿ ಹೈಡ್ರಾಲಿಕ್ ಗೇಟ್ ಅಳವಡಿಕೆ ಹಾಗೂ ಡಬ್ಲ್ಯುಟಿಪಿ ಉನ್ನತೀಕರಣ ಕಾಮಗಾರಿ ಹಾಗೂ ₹ 39.95 ಲಕ್ಷ ವೆಚ್ಚದಲ್ಲಿ ನಗರಸಭಾ ವ್ಯಾಪ್ತಿಯಲ್ಲಿರುವ ಬಾವಿಗಳ ಪುನಶ್ಚೇತನ ಮಾಡಲಾಗುವುದು. ಇದರಿಂದ ಪ್ರತಿ ಬೇಸಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಡ್ರೆಜಿಂಗ್ ಹಾಗೂ ಟ್ಯಾಂಕರ್ ನೀರು ಪೂರೈಸಲು ನಗರಸಭೆ ಖರ್ಚು ಮಾಡುತ್ತಿದ್ದ ಅಂದಾಜು ₹ 50 ಲಕ್ಷ ಉಳಿತಾಯವಾಗಲಿದೆ ಎಂದರು.</p>.<p>ಬೀಡಿನಗುಡ್ಡೆಯಲ್ಲಿರುವ ಕ್ರೀಡಾಂಗಣ ಹಾಗೂ ಮಣಿಪಾಲದಲ್ಲಿರುವ ಮಣ್ಣಪಳ್ಳ ನಿರ್ಲಕ್ಷ್ಯಕ್ಕೊಳಗಾಗಿದ್ದು ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ ಎಂದು ಸದಸ್ಯರು ಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ರಘುಪತಿ ಭಟ್, ಎರಡೂ ಜಾಗಗಳ ನಿರ್ವಹಣೆ ಜಿಲ್ಲಾಧಿಕಾರಿ ನೇತೃತ್ವದ ನಿರ್ವಹಣಾ ಸಮಿತಿಗೆ ಸೇರಿದ್ದು, ನಗರಸಭೆ ಹಸ್ತಕ್ಷೇಪ ಮಾಡುವಂತಿಲ್ಲ. ಈ ಸಂಬಂಧ ಎರಡೂ ಜಾಗಗಳ ನಿರ್ವಹಣೆಯನ್ನು ನಗರಸಭೆಗೆ ಹಸ್ತಾಂತರ ಮಾಡಬೇಕು ಎಂಬ ನಿರ್ಣಯ ತೆಗೆದುಕೊಂಡು ಜಿಲ್ಲಾಧಿಕಾರಿಗೆ ಸಲ್ಲಿಸೋಣ ಎಂದರು.</p>.<p>ಮಣ್ಣಪಳ್ಳ ಅಭಿವೃದ್ಧಿಗೆ ಡೀಮ್ಡ್ಫಾರೆಸ್ಟ್ ನಿಯಮದಿಂದ ನಿರ್ವಹಣೆಗೆ ಅಡ್ಡಿಯಾಗಿದೆ. ಮಣ್ಣಪಳ್ಳ ನಗರಸಭೆ ಸುಪರ್ದಿಗೆ ಬಂದರೆ, ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಕೆರೆ ಅಭಿವೃದ್ಧಿ ಪ್ರಾಧಿಕಾರದಿಂದ ಅಭಿವೃದ್ಧಿ ಮಾಡಬಹುದು. ಅದಕ್ಕೂ ಮುನ್ನ ಜಿಲ್ಲಾಡಳಿತದ ವಶದಲ್ಲಿರುವ ನಿರ್ವಹಣಾ ಸಮಿತಿ ನಗರಸಭೆಗೆ ಬರಬೇಕು ಎಂದು ಶಾಸಕರು ಹೇಳಿದರು.</p>.<p><strong>ಎಲ್ಲೆಂದರಲ್ಲಿ ರಸ್ತೆ ಅಗೆತ</strong></p>.<p>ವರಾಹಿ ಯೋಜನೆ ಕಾಮಗಾರಿಯಿಂದ ನಗರದ ಹಲವೆಡೆ ಕುಡಿಯುವ ನೀರಿನ ಪೈಪ್ಲೈನ್ ಕಾಮಗಾರಿ ಹಾಳಾಗಿದೆ. ಹಲವು ಕಡೆಗಳಲ್ಲಿ ಕುಡಿಯುವ ನೀರಿನ ಸಂಪರ್ಕ ಕಡಿತಗೊಂಡಿದೆ. ಸಮಸ್ಯೆಯನ್ನು ಅಧಿಕಾರಿಗಳ ಗಮನಕ್ಕೆ ತಂದರೂ ಬಗೆಹರಿದಿಲ್ಲ ಎಂದು ಹಲವು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.</p>.<p>ಎಂಜಿನಿಯರ್ಗಳ ಕಾರ್ಯವೈಖರಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅಧ್ಯಕ್ಷೆ ಸುಮಿತ್ರಾ ನಾಯಕ್, ಜನರಿಗೆ ಮೊದಲು ಕುಡಿಯುವ ನೀರು ಕೊಡಿ ಎಂದು ತಾಕೀತು ಮಾಡಿದರು. ಕಚೇರಿಯಲ್ಲಿ ಕೂರದೆ ಸ್ಥಳ ಪರೀಶೀಲಿಸಿ ಎಂದು ಸೂಚಿಸಿದರು.</p>.<p>ನಗರಸಭಾ ವ್ಯಾಪ್ತಿಯಲ್ಲಿ ವಸತಿ ಹಂಚಿಕೆ ಪ್ರಕ್ರಿಯೆ ನನೆಗುದಿಗೆ ಬಿದ್ದಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕ ರಘುಪತಿ ಭಟ್, ವಸತಿ ಹಂಚಿಕೆ ಫಲಾನುಭವಿಗಳು ಆರಂಭಿಕ ಹಣ ಪಾವತಿ ಮಾಡದೆ ಕಾಮಗಾರಿ ಪೂರ್ಣಗೊಳ್ಳುವುದಿಲ್ಲ. ಸರಳೆಬೆಟ್ಟುವಿನಲ್ಲಿ 2 ಫ್ಲಾಟ್ಗಳ ನಿರ್ಮಾಣ ನಡೆಯುತ್ತಿದ್ದು, ಶೀಘ್ರ ಹಣ ಪಾವತಿಸಿದರೆ ನಿರ್ಮಾಣ ಪೂರ್ಣಗೊಳ್ಳಲಿದೆ ಎಂದರು.</p>.<p><strong>ಫ್ಲೆಕ್ಸ್ ದರ ಏರಿಕೆಗೆ ವಿರೋಧ</strong></p>.<p>ನಗರಸಭೆ ವ್ಯಾಪ್ತಿಯಲ್ಲಿ ಅನಧಿಕೃತ ಪ್ಲೆಕ್ಸ್ಗಳ ಹಾವಳಿ ಹೆಚ್ಚಾಗಿದ್ದು, ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಬ್ಯಾನರ್ಗಳಿಗೆ ಪ್ರತಿ ಚದರ ಅಡಿಗೆ ₹ 10 ಹಾಗೂ 15 ದಿನಗಳಿಗೆ 2000 ಪಡೆಯಲು ನಿರ್ಧರಿಸಲಾಗಿದೆ ಎಂದು ಪೌರಾಯುಕ್ತ ಉದಯಶೆಟ್ಟಿ ವಿಷಯ ಪ್ರಸ್ತಾಪಿಸಿದರು.</p>.<p>ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯರು ಬ್ಯಾನರ್ಗಳ ಅಳವಡಿಕೆಗೆ ದರ ಕಡಿಮೆ ಮಾಡಬೇಕು. ಧಾರ್ಮಿಕ ಕಾರ್ಯಕ್ರಮಗಳಿಗೆ ಪೂರ್ಣ ವಿನಾಯಿತಿ ಕೊಡಬೇಕು. ಬ್ಯಾನರ್ ಹಾಕಲು ಪೊಲೀಸ್ ಠಾಣೆಯಿಂದ ಅನುಮತಿ ಪಡೆಯಬೇಕು ಎಂಬ ನಿಯಮ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.</p>.<p>ಅಧ್ಯಕ್ಷೆ ಸುಮಿತ್ರಾ ನಾಯಕ್ ಪ್ರತಿಕ್ರಿಯಿಸಿ, ಧಾರ್ಮಿಕ ಕಾರ್ಯಕ್ರಮಗಳ ಬ್ಯಾನರ್ ಅಳವಡಿಕೆಗೆ ನಗರಸಭೆಯಿಂದ ಹಣ ಪಡೆಯುತ್ತಿಲ್ಲ. ಆದರೆ, ಬ್ಯಾನರ್ನಲ್ಲಿ ಶುಭಕೋರುವ ವ್ಯಕ್ತಿಯ ಹೆಸರಿದ್ದರೆ ಹಣ ಪಡೆಯಲಾಗುತ್ತದೆ. ಮುಂದೆ ನಗರಸಭೆಯಿಂದಲೇ ನೇರವಾಗಿ ಬ್ಯಾನರ್ ಅಳವಡಿಕೆಗೆ ಅನುಮತಿ ಪಡೆಯುವ ವ್ಯವಸ್ಥೆ ಜಾರಿಗೆ ಬರಲಿದೆ ಎಂದರು.</p>.<p>ಶಾಸಕ ರಘುಪತಿ ಭಟ್ ಮಧ್ಯೆ ಪ್ರವೇಶಿಸಿ ಧಾರ್ಮಿಕ ಕಾರ್ಯಕ್ರಮಗಳ ಬ್ಯಾನರ್ಗಳಿಗೆ ಕನಿಷ್ಠ 100 ದರ ನಿಗಧಿಪಡಿಸಿ, ಉಳಿದ ಎಲ್ಲ ಬ್ಯಾನರ್ಗಳಿಗೆ ₹ 500 ದರ ನಿಗಧಿಪಡಿಸಿ ಎಂದು ಸಲಹೆ ನೀಡಿದರು.</p>.<p>ನಗರಸಭೆ ಉಪಾಧ್ಯಕ್ಷೆ ಲಕ್ಷ್ಮಿ ಮಂಜುನಾಥ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಡುಪಿ:</strong> ಉಡುಪಿ ನಗರಕ್ಕೆ ಕುಡಿಯುವ ನೀರು ಪೂರೈಸುವ ಬಜೆ ಜಲಾಶಯಕ್ಕೆ ₹ 1.20 ಕೋಟಿ ವೆಚ್ಚದಲ್ಲಿ ಹೈಡ್ರಾಲಿಕ್ ಗೇಟ್ ಅಳವಡಿಸುವ ಯೋಜನೆಗೆ ಸಾಮಾನ್ಯ ಸಭೆ ಒಪ್ಪಿಗೆ ಸೂಚಿಸಿತು.</p>.<p>ಸೋಮವಾರ ನಗರಸಭೆಯ ಸತ್ಯಮೂರ್ತಿ ಸಭಾಂಗಣದಲ್ಲಿ ಅಧ್ಯಕ್ಷೆ ಸುಮಿತ್ರಾ ನಾಯಕ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಎಂಜಿನಿಯರ್ ಮೋಹನ್ ರಾಜ್, ಹಿಂದೆ ₹ 1.59 ಕೋಟಿ ವೆಚ್ಚದಲ್ಲಿ ಬಜೆ ಅಣೆಕಟ್ಟೆಯನ್ನು 1 ಮೀಟರ್ಗೆ ಎತ್ತರಿಸಿ, ಹೈಡ್ರಾಲಿಕ್ ಗೇಟ್ ಅಳವಡಿಸಲು ನಿರ್ಧರಿಸಲಾಗಿತ್ತು. ಅಣೆಕಟ್ಟೆಯನ್ನು 1 ಮೀಟರ್ಗೆ ಎತ್ತರಿಸಿದರೆ ಅಪಾಯ ಸಾಧ್ಯತೆ ಇದೆ ಎಂಬ ತಜ್ಞರ ಸಲಹೆ ಆಧಾರದ ಮೇಲೆ ಪ್ರಸ್ತಾವಿತ ಕಾಮಗಾರಿಯನ್ನು ಬದಲಿಸಲಾಗಿದೆ’ ಎಂದರು.</p>.<p>ಹಿಂದೆ, ಮೀಸಲಿಟ್ಟ ಅನುದಾನದಲ್ಲಿ ಬಜೆ ಡ್ಯಾಂಗೆ ₹ 1.20 ಕೋಟಿ ವೆಚ್ಚದಲ್ಲಿ ಹೈಡ್ರಾಲಿಕ್ ಗೇಟ್ ಅಳವಡಿಕೆ ಹಾಗೂ ಡಬ್ಲ್ಯುಟಿಪಿ ಉನ್ನತೀಕರಣ ಕಾಮಗಾರಿ ಹಾಗೂ ₹ 39.95 ಲಕ್ಷ ವೆಚ್ಚದಲ್ಲಿ ನಗರಸಭಾ ವ್ಯಾಪ್ತಿಯಲ್ಲಿರುವ ಬಾವಿಗಳ ಪುನಶ್ಚೇತನ ಮಾಡಲಾಗುವುದು. ಇದರಿಂದ ಪ್ರತಿ ಬೇಸಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಡ್ರೆಜಿಂಗ್ ಹಾಗೂ ಟ್ಯಾಂಕರ್ ನೀರು ಪೂರೈಸಲು ನಗರಸಭೆ ಖರ್ಚು ಮಾಡುತ್ತಿದ್ದ ಅಂದಾಜು ₹ 50 ಲಕ್ಷ ಉಳಿತಾಯವಾಗಲಿದೆ ಎಂದರು.</p>.<p>ಬೀಡಿನಗುಡ್ಡೆಯಲ್ಲಿರುವ ಕ್ರೀಡಾಂಗಣ ಹಾಗೂ ಮಣಿಪಾಲದಲ್ಲಿರುವ ಮಣ್ಣಪಳ್ಳ ನಿರ್ಲಕ್ಷ್ಯಕ್ಕೊಳಗಾಗಿದ್ದು ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ ಎಂದು ಸದಸ್ಯರು ಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ರಘುಪತಿ ಭಟ್, ಎರಡೂ ಜಾಗಗಳ ನಿರ್ವಹಣೆ ಜಿಲ್ಲಾಧಿಕಾರಿ ನೇತೃತ್ವದ ನಿರ್ವಹಣಾ ಸಮಿತಿಗೆ ಸೇರಿದ್ದು, ನಗರಸಭೆ ಹಸ್ತಕ್ಷೇಪ ಮಾಡುವಂತಿಲ್ಲ. ಈ ಸಂಬಂಧ ಎರಡೂ ಜಾಗಗಳ ನಿರ್ವಹಣೆಯನ್ನು ನಗರಸಭೆಗೆ ಹಸ್ತಾಂತರ ಮಾಡಬೇಕು ಎಂಬ ನಿರ್ಣಯ ತೆಗೆದುಕೊಂಡು ಜಿಲ್ಲಾಧಿಕಾರಿಗೆ ಸಲ್ಲಿಸೋಣ ಎಂದರು.</p>.<p>ಮಣ್ಣಪಳ್ಳ ಅಭಿವೃದ್ಧಿಗೆ ಡೀಮ್ಡ್ಫಾರೆಸ್ಟ್ ನಿಯಮದಿಂದ ನಿರ್ವಹಣೆಗೆ ಅಡ್ಡಿಯಾಗಿದೆ. ಮಣ್ಣಪಳ್ಳ ನಗರಸಭೆ ಸುಪರ್ದಿಗೆ ಬಂದರೆ, ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಕೆರೆ ಅಭಿವೃದ್ಧಿ ಪ್ರಾಧಿಕಾರದಿಂದ ಅಭಿವೃದ್ಧಿ ಮಾಡಬಹುದು. ಅದಕ್ಕೂ ಮುನ್ನ ಜಿಲ್ಲಾಡಳಿತದ ವಶದಲ್ಲಿರುವ ನಿರ್ವಹಣಾ ಸಮಿತಿ ನಗರಸಭೆಗೆ ಬರಬೇಕು ಎಂದು ಶಾಸಕರು ಹೇಳಿದರು.</p>.<p><strong>ಎಲ್ಲೆಂದರಲ್ಲಿ ರಸ್ತೆ ಅಗೆತ</strong></p>.<p>ವರಾಹಿ ಯೋಜನೆ ಕಾಮಗಾರಿಯಿಂದ ನಗರದ ಹಲವೆಡೆ ಕುಡಿಯುವ ನೀರಿನ ಪೈಪ್ಲೈನ್ ಕಾಮಗಾರಿ ಹಾಳಾಗಿದೆ. ಹಲವು ಕಡೆಗಳಲ್ಲಿ ಕುಡಿಯುವ ನೀರಿನ ಸಂಪರ್ಕ ಕಡಿತಗೊಂಡಿದೆ. ಸಮಸ್ಯೆಯನ್ನು ಅಧಿಕಾರಿಗಳ ಗಮನಕ್ಕೆ ತಂದರೂ ಬಗೆಹರಿದಿಲ್ಲ ಎಂದು ಹಲವು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.</p>.<p>ಎಂಜಿನಿಯರ್ಗಳ ಕಾರ್ಯವೈಖರಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅಧ್ಯಕ್ಷೆ ಸುಮಿತ್ರಾ ನಾಯಕ್, ಜನರಿಗೆ ಮೊದಲು ಕುಡಿಯುವ ನೀರು ಕೊಡಿ ಎಂದು ತಾಕೀತು ಮಾಡಿದರು. ಕಚೇರಿಯಲ್ಲಿ ಕೂರದೆ ಸ್ಥಳ ಪರೀಶೀಲಿಸಿ ಎಂದು ಸೂಚಿಸಿದರು.</p>.<p>ನಗರಸಭಾ ವ್ಯಾಪ್ತಿಯಲ್ಲಿ ವಸತಿ ಹಂಚಿಕೆ ಪ್ರಕ್ರಿಯೆ ನನೆಗುದಿಗೆ ಬಿದ್ದಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕ ರಘುಪತಿ ಭಟ್, ವಸತಿ ಹಂಚಿಕೆ ಫಲಾನುಭವಿಗಳು ಆರಂಭಿಕ ಹಣ ಪಾವತಿ ಮಾಡದೆ ಕಾಮಗಾರಿ ಪೂರ್ಣಗೊಳ್ಳುವುದಿಲ್ಲ. ಸರಳೆಬೆಟ್ಟುವಿನಲ್ಲಿ 2 ಫ್ಲಾಟ್ಗಳ ನಿರ್ಮಾಣ ನಡೆಯುತ್ತಿದ್ದು, ಶೀಘ್ರ ಹಣ ಪಾವತಿಸಿದರೆ ನಿರ್ಮಾಣ ಪೂರ್ಣಗೊಳ್ಳಲಿದೆ ಎಂದರು.</p>.<p><strong>ಫ್ಲೆಕ್ಸ್ ದರ ಏರಿಕೆಗೆ ವಿರೋಧ</strong></p>.<p>ನಗರಸಭೆ ವ್ಯಾಪ್ತಿಯಲ್ಲಿ ಅನಧಿಕೃತ ಪ್ಲೆಕ್ಸ್ಗಳ ಹಾವಳಿ ಹೆಚ್ಚಾಗಿದ್ದು, ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಬ್ಯಾನರ್ಗಳಿಗೆ ಪ್ರತಿ ಚದರ ಅಡಿಗೆ ₹ 10 ಹಾಗೂ 15 ದಿನಗಳಿಗೆ 2000 ಪಡೆಯಲು ನಿರ್ಧರಿಸಲಾಗಿದೆ ಎಂದು ಪೌರಾಯುಕ್ತ ಉದಯಶೆಟ್ಟಿ ವಿಷಯ ಪ್ರಸ್ತಾಪಿಸಿದರು.</p>.<p>ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯರು ಬ್ಯಾನರ್ಗಳ ಅಳವಡಿಕೆಗೆ ದರ ಕಡಿಮೆ ಮಾಡಬೇಕು. ಧಾರ್ಮಿಕ ಕಾರ್ಯಕ್ರಮಗಳಿಗೆ ಪೂರ್ಣ ವಿನಾಯಿತಿ ಕೊಡಬೇಕು. ಬ್ಯಾನರ್ ಹಾಕಲು ಪೊಲೀಸ್ ಠಾಣೆಯಿಂದ ಅನುಮತಿ ಪಡೆಯಬೇಕು ಎಂಬ ನಿಯಮ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.</p>.<p>ಅಧ್ಯಕ್ಷೆ ಸುಮಿತ್ರಾ ನಾಯಕ್ ಪ್ರತಿಕ್ರಿಯಿಸಿ, ಧಾರ್ಮಿಕ ಕಾರ್ಯಕ್ರಮಗಳ ಬ್ಯಾನರ್ ಅಳವಡಿಕೆಗೆ ನಗರಸಭೆಯಿಂದ ಹಣ ಪಡೆಯುತ್ತಿಲ್ಲ. ಆದರೆ, ಬ್ಯಾನರ್ನಲ್ಲಿ ಶುಭಕೋರುವ ವ್ಯಕ್ತಿಯ ಹೆಸರಿದ್ದರೆ ಹಣ ಪಡೆಯಲಾಗುತ್ತದೆ. ಮುಂದೆ ನಗರಸಭೆಯಿಂದಲೇ ನೇರವಾಗಿ ಬ್ಯಾನರ್ ಅಳವಡಿಕೆಗೆ ಅನುಮತಿ ಪಡೆಯುವ ವ್ಯವಸ್ಥೆ ಜಾರಿಗೆ ಬರಲಿದೆ ಎಂದರು.</p>.<p>ಶಾಸಕ ರಘುಪತಿ ಭಟ್ ಮಧ್ಯೆ ಪ್ರವೇಶಿಸಿ ಧಾರ್ಮಿಕ ಕಾರ್ಯಕ್ರಮಗಳ ಬ್ಯಾನರ್ಗಳಿಗೆ ಕನಿಷ್ಠ 100 ದರ ನಿಗಧಿಪಡಿಸಿ, ಉಳಿದ ಎಲ್ಲ ಬ್ಯಾನರ್ಗಳಿಗೆ ₹ 500 ದರ ನಿಗಧಿಪಡಿಸಿ ಎಂದು ಸಲಹೆ ನೀಡಿದರು.</p>.<p>ನಗರಸಭೆ ಉಪಾಧ್ಯಕ್ಷೆ ಲಕ್ಷ್ಮಿ ಮಂಜುನಾಥ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>