<p><strong>ಉಡುಪಿ</strong>: ಕೊರೊನಾ ಸೋಂಕು ಭೀತಿಯ ಮಧ್ಯೆಯೂ ಉಡುಪಿಯಲ್ಲಿ ಸರಳವಾಗಿ ನಾಗರ ಪಂಚಮಿಯನ್ನು ಶ್ರದ್ಧೆ ಭಕ್ತಿಯಿಂದ ಆಚರಿಸಲಾಯಿತು.</p>.<p>ಪ್ರತಿವರ್ಷ ಭಕ್ತರಿಂದ ತುಂಬಿರುತ್ತಿದ್ದ ನಾಗಬನ, ನಾಗ ದೇವಸ್ಥಾನಗಳಲ್ಲಿ ಈ ವರ್ಷ ಭಕ್ತರ ಸುಳಿವಿರಲಿಲ್ಲ. ಆದರೆ ಅರ್ಚಕರು ಸಂಪ್ರದಾಯದಂತೆ ಬೆಳಗಿನ ಜಾವ ದೇವಸ್ಥಾನದ ಬಾಗಿಲು ತೆರೆದು ದೇವರಿಗೆ ಪೂಜೆ, ಅಭಿಷೇಕ ನೆರವೇರಿಸಿ ಮತ್ತೆ ಬಾಗಿಲು ಮುಚ್ಚಿದರು.</p>.<p>ಜಿಲ್ಲಾಡಳಿತದ ಆದೇಶದಂತೆದೇವಸ್ಥಾನದೊಳಗೆ ಭಕ್ತರ ಪ್ರವೇಶಕ್ಕೆ ಅವಕಾಶ ಇರಲಿಲ್ಲ. ಕೆಲವು ದೇಗುಲ ಹಾಗೂ ನಾಗಬನಗಳ ಮುಂದೆ ‘ತನು ಎರೆಯುವಂತಿಲ್ಲ, ಹಣ್ಣುಕಾಯಿ ಸಮರ್ಪಣೆ ಸೇವೆ ಹಾಗೂ ತೀರ್ಥ ಪ್ರಸಾದ ವಿತರಣೆ ಇರುವುದಿಲ್ಲ’ ಬ್ಯಾನರ್ ಅಳವಡಿಸಲಾಗಿತ್ತು.</p>.<p>ಆದರೆ, ಕೆಲವು ನಾಗಬನಗಳಲ್ಲಿ ಮಾತ್ರ ಬೆರಳೆಣಿಕೆಯ ಭಕ್ತರು ದೇವರಿಗೆ ಪೂಜೆ ಸಲ್ಲಿಸಿದರು. ಎಳನೀರು ಹಾಗೂ ಹಾಲಿನ ಅಭಿಷೇಕ ಮಾಡಿದರು. ಎಲ್ಲರೂ ಮಾಸ್ಕ್ ಧರಿಸಿ ಪಾಲ್ಗೊಂಡಿದ್ದು ಕಂಡುಬಂತು.</p>.<p>ಪೊಲೀಸರ ನಿಯೋಜನೆ:</p>.<p>ದೇವಸ್ಥಾನಗಳಲ್ಲಿ ಭಕ್ತರು ಅಂತರ ಕಾಯ್ದುಕೊಳ್ಳುವಿಕೆ ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ಗುಂಡಿಬೈಲಿನ ಪ್ರಮುಖ ನಾಗಬನ ಸೇರಿ ನಗರದ ಹಲವೆಡೆ ಪೊಲೀಸರನ್ನು ನಿಯೋಜಿಸಲಾಗಿತ್ತು. ನಿರ್ಬಂಧದ ನಡುವೆಯೂ ದೇವಸ್ಥಾನಕ್ಕೆ ಬಂದವರನ್ನು ಪೊಲೀಸರು ವಾಪಸ್ ಕಳುಹಿಸಿದರು.</p>.<p>ಕಾಣದ ಲವಲವಿಕೆ:</p>.<p>ನಾಗರ ಪಂಚಮಿಯ ದಿನ ನಗರದ ಹೂ ಮಾರುಕಟ್ಟೆ ಭಕ್ತರಿಂದ ಗಿಜಿಗುಡುತ್ತಿತ್ತು. ನಾಗನ ಮೂರ್ತಿಯ ಅಲಂಕಾರಕ್ಕೆ ಹೂವಿನ ಖರೀದಿ ಜೋರಾಗಿ ನಡೆಯುತ್ತಿತ್ತು. ಈ ವರ್ಷ ದಟ್ಟಣೆ ಕಡಿಮೆ ಇತ್ತು. ಮನೆಯಲ್ಲಿ ಸರಳವಾಗಿ ಪೂಜೆಗೆ ಬೇಕಾದಷ್ಟು ಹೂ ಹಣ್ಣು ಹಾಗೂ ಅಡಿಕೆ ಸಿಂಗಾರವನ್ನು ಸಾರ್ವಜನಿಕರು ಖರೀದಿಸಿದರು.</p>.<p>ಹಬ್ಬದ ದಿನ ಹೂ–ಹಣ್ಣಿನ ವ್ಯಾಪಾರಿಗಳು ಹಾಗೂ ಭಕ್ತರಿಂದ ತುಂಬಿರುತ್ತಿದ್ದ ಕೃಷ್ಣಮಠದ ರಥಬೀದಿ ಈ ಬಾರಿ ಕಳೆಗುಂದಿತ್ತು. ಹೊರ ಜಿಲ್ಲೆಗಳಿಂದ ಹೆಚ್ಚಿನ ವ್ಯಾಪಾರಿಗಳು ಕೂಡ ಬಂದಿರಲಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಡುಪಿ</strong>: ಕೊರೊನಾ ಸೋಂಕು ಭೀತಿಯ ಮಧ್ಯೆಯೂ ಉಡುಪಿಯಲ್ಲಿ ಸರಳವಾಗಿ ನಾಗರ ಪಂಚಮಿಯನ್ನು ಶ್ರದ್ಧೆ ಭಕ್ತಿಯಿಂದ ಆಚರಿಸಲಾಯಿತು.</p>.<p>ಪ್ರತಿವರ್ಷ ಭಕ್ತರಿಂದ ತುಂಬಿರುತ್ತಿದ್ದ ನಾಗಬನ, ನಾಗ ದೇವಸ್ಥಾನಗಳಲ್ಲಿ ಈ ವರ್ಷ ಭಕ್ತರ ಸುಳಿವಿರಲಿಲ್ಲ. ಆದರೆ ಅರ್ಚಕರು ಸಂಪ್ರದಾಯದಂತೆ ಬೆಳಗಿನ ಜಾವ ದೇವಸ್ಥಾನದ ಬಾಗಿಲು ತೆರೆದು ದೇವರಿಗೆ ಪೂಜೆ, ಅಭಿಷೇಕ ನೆರವೇರಿಸಿ ಮತ್ತೆ ಬಾಗಿಲು ಮುಚ್ಚಿದರು.</p>.<p>ಜಿಲ್ಲಾಡಳಿತದ ಆದೇಶದಂತೆದೇವಸ್ಥಾನದೊಳಗೆ ಭಕ್ತರ ಪ್ರವೇಶಕ್ಕೆ ಅವಕಾಶ ಇರಲಿಲ್ಲ. ಕೆಲವು ದೇಗುಲ ಹಾಗೂ ನಾಗಬನಗಳ ಮುಂದೆ ‘ತನು ಎರೆಯುವಂತಿಲ್ಲ, ಹಣ್ಣುಕಾಯಿ ಸಮರ್ಪಣೆ ಸೇವೆ ಹಾಗೂ ತೀರ್ಥ ಪ್ರಸಾದ ವಿತರಣೆ ಇರುವುದಿಲ್ಲ’ ಬ್ಯಾನರ್ ಅಳವಡಿಸಲಾಗಿತ್ತು.</p>.<p>ಆದರೆ, ಕೆಲವು ನಾಗಬನಗಳಲ್ಲಿ ಮಾತ್ರ ಬೆರಳೆಣಿಕೆಯ ಭಕ್ತರು ದೇವರಿಗೆ ಪೂಜೆ ಸಲ್ಲಿಸಿದರು. ಎಳನೀರು ಹಾಗೂ ಹಾಲಿನ ಅಭಿಷೇಕ ಮಾಡಿದರು. ಎಲ್ಲರೂ ಮಾಸ್ಕ್ ಧರಿಸಿ ಪಾಲ್ಗೊಂಡಿದ್ದು ಕಂಡುಬಂತು.</p>.<p>ಪೊಲೀಸರ ನಿಯೋಜನೆ:</p>.<p>ದೇವಸ್ಥಾನಗಳಲ್ಲಿ ಭಕ್ತರು ಅಂತರ ಕಾಯ್ದುಕೊಳ್ಳುವಿಕೆ ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ಗುಂಡಿಬೈಲಿನ ಪ್ರಮುಖ ನಾಗಬನ ಸೇರಿ ನಗರದ ಹಲವೆಡೆ ಪೊಲೀಸರನ್ನು ನಿಯೋಜಿಸಲಾಗಿತ್ತು. ನಿರ್ಬಂಧದ ನಡುವೆಯೂ ದೇವಸ್ಥಾನಕ್ಕೆ ಬಂದವರನ್ನು ಪೊಲೀಸರು ವಾಪಸ್ ಕಳುಹಿಸಿದರು.</p>.<p>ಕಾಣದ ಲವಲವಿಕೆ:</p>.<p>ನಾಗರ ಪಂಚಮಿಯ ದಿನ ನಗರದ ಹೂ ಮಾರುಕಟ್ಟೆ ಭಕ್ತರಿಂದ ಗಿಜಿಗುಡುತ್ತಿತ್ತು. ನಾಗನ ಮೂರ್ತಿಯ ಅಲಂಕಾರಕ್ಕೆ ಹೂವಿನ ಖರೀದಿ ಜೋರಾಗಿ ನಡೆಯುತ್ತಿತ್ತು. ಈ ವರ್ಷ ದಟ್ಟಣೆ ಕಡಿಮೆ ಇತ್ತು. ಮನೆಯಲ್ಲಿ ಸರಳವಾಗಿ ಪೂಜೆಗೆ ಬೇಕಾದಷ್ಟು ಹೂ ಹಣ್ಣು ಹಾಗೂ ಅಡಿಕೆ ಸಿಂಗಾರವನ್ನು ಸಾರ್ವಜನಿಕರು ಖರೀದಿಸಿದರು.</p>.<p>ಹಬ್ಬದ ದಿನ ಹೂ–ಹಣ್ಣಿನ ವ್ಯಾಪಾರಿಗಳು ಹಾಗೂ ಭಕ್ತರಿಂದ ತುಂಬಿರುತ್ತಿದ್ದ ಕೃಷ್ಣಮಠದ ರಥಬೀದಿ ಈ ಬಾರಿ ಕಳೆಗುಂದಿತ್ತು. ಹೊರ ಜಿಲ್ಲೆಗಳಿಂದ ಹೆಚ್ಚಿನ ವ್ಯಾಪಾರಿಗಳು ಕೂಡ ಬಂದಿರಲಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>