<p><strong>ಕಾಪು (ಪಡುಬಿದ್ರಿ):</strong> 17 ರಾಜ್ಯಗಳು, 45 ದಿನಗಳು, 14,000 ಕಿ.ಮೀ. ಈಶಾನ್ಯ ರಾಜ್ಯವನ್ನು ಕಾಪುವಿನ ಸಚಿನ್ ಶೆಟ್ಟಿ ಹಾಗೂ ಅಭಿಷೇಕ್ ಶೆಟ್ಟಿ ಸುಜುಕಿ ಸಂಸ್ಥೆಯ ಜಿಮ್ನಿ ವಾಹನದಲ್ಲಿ ಪ್ರವಾಸ ಹೊರಟಿದ್ದಾರೆ.</p>.<p>ಕರ್ನಾಟಕ ಕರಾವಳಿಯ ಪ್ರವಾಸೋದ್ಯಮದ ಪ್ರಚುರ ಪಡಿಸಲು ಹಾಗೂ ಸ್ಥಳೀಯ ಜನರ ಬದುಕು, ಅಲ್ಲಿನ ಸಂಸ್ಕೃತಿಯನ್ನು ತಿಳಿದುಕೊಳ್ಳಲು ಈಶಾನ್ಯ ರಾಜ್ಯಗಳಿಗೆ ಪ್ರವಾಸ ಕೈಗೊಂಡಿದ್ದಾರೆ. ಪ್ರವಾಸದ ವಿಡಿಯೊ ತುಣುಕನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡುವ ಮೂಲಕ ಜನರಿಗೆ ವಿವಿಧ ರಾಜ್ಯಗಳ ಮಾಹಿತಿ ನೀಡುವರು. </p>.<p>ಶನಿವಾರ ಬೆಳಿಗ್ಗೆ ಕಾಪು ಹೊಸಮಾರಿಗುಡಿಯಲ್ಲಿ ಪೂಜೆ ಸಲ್ಲಿಸಿ ಬೀಳ್ಕೊಡಲಾಯಿತು. ಹೊಸಮಾರಿಗುಡಿಯಿಂದ ಹೊರಟ ಇವರು ಮಂಗಳೂರು ಮೂಲಕ ಶಿವಮೊಗ್ಗ ಮಾರ್ಗವಾಗಿ ವಿವಿಧ ರಾಜ್ಯಗಳಿಗೆ ಪ್ರವಾಸ ಕೈಗೊಳ್ಳುವರು. ಇಂದು ಆಂಧ್ರ ಪ್ರದೇಶನ್ನು ತಲುಪಿ ಅಲ್ಲಿ ತಂಗಲಿದ್ದಾರೆ.</p>.<p>ಕರ್ನಾಟಕ, ಆಂಧ್ಯಪ್ರದೇಶ, ಒಡಿಶಾ, ಪಶ್ಚಿಮ ಬಂಗಾಳ, ಮೇಘಾಲಯ, ತ್ರಿಪುರ, ಮಿಜೋರಾಂ, ಮಣಿಪುರ, ನಾಗಲ್ಯಾಂಡ್, ಅರುಣಾಚಲ ಪ್ರದೇಶ, ಅಸ್ಸಾಂ, ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶ, ಗುಜರಾತ್, ಮಹಾರಾಷ್ಟ್ರ, ಗೋವಾ ಮಾರ್ಗವಾಗಿ ಕರ್ನಾಟಕ ತಲುಪಲಿದ್ದಾರೆ.</p>.<p>ಸಚಿನ್ ಶೆಟ್ಟಿ ಮಾತನಾಡಿ, ‘ಈ ಮೊದಲು ಬೈಕ್ನಲ್ಲಿ ವಿವಿಧ ರಾಜ್ಯಗಳನ್ನು ಸಂಚರಿಸಿ ಅಲ್ಲಿನ ಸ್ಥಳೀಯ ಸಂಸ್ಕೃತಿ, ಆಹಾರ ಪದ್ಧತಿ ಬಗ್ಗೆ ತಿಳಿದುಕೊಂಡಿದ್ದೇವೆ. ಈ ಬಾರಿ ರಾಜ್ಯದ ಕರಾವಳಿಯ ಪ್ರವಾಸೋದ್ಯಮದ ಬಗ್ಗೆ ಸಂಚರಿಸಲಿರುವ ಎಲ್ಲ ರಾಜ್ಯಗಳಲ್ಲೂ ಪ್ರಚಾರ ಮಾಡಲಿದ್ದೇವೆ. ಅದರೊಂದಿಗೆ ಜೀರ್ಣೋದ್ಧಾರಗೊಳ್ಳುತ್ತಿರುವ ಕಾಪುವಿನ ಹೊಸಮಾರಿಗುಡಿ ದೇವಸ್ಥಾನದ ಬಗ್ಗೆಯೂ ಜನರಿಗೆ ತಿಳಿಸಲಾಗುವುದು. ಈ ಬಾರಿ ಸುಜುಕಿ ಅವರ ಹೊಸ ಜಿಮ್ನಿ ವಾಹನದಲ್ಲಿ ಸಂಚರಿಸಿಲಿದ್ದೇವೆ. ಬೇಕಾದ ಎಲ್ಲ ವ್ಯವಸ್ಥೆಗಳನ್ನು ವಿಶೇಷ ರೀತಿಯಲ್ಲಿ ವಾಹನವನ್ನು ಸಜ್ಜುಗೊಳಿಸಿದ್ದೇವೆ. ಡಿಕ್ಕಿಯಲ್ಲಿ ಅಡುಗೆಗೆ ಬೇಕಾದ ವಸ್ತು ಜೋಡಿಸಲಾಗಿದ್ದು, ವಾಹನದ ಮೇಲೆ ಟೆಂಡ್ ಅಳವಡಿಸಲಾಗಿದೆ’ ಎಂದರು.</p>.<p>ಹೊಸಮಾರಿಗುಡಿ ದೇವಸ್ಥಾನದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ವಾಸುದೇವ ಶೆಟ್ಟಿ ಮಾತನಾಡಿ, ‘ಸಚಿನ್ ಶೆಟ್ಟಿ ಛಾಯಾಗ್ರಾಹಕನಾಗಿದ್ದು, ಈ ಹಿಂದೆ ಬೈಕ್ ಯಾತ್ರೆ ಕೈಗೊಂಡಿದ್ದರು. ನವರಾತ್ರಿ ಸಡಗರದ ಉತ್ಸವದ ಸಂದರ್ಭದಲ್ಲಿ ಈಶಾನ್ಯ ರಾಜ್ಯಗಳ ಪ್ರವಾಸ ಹೊರಟಿದ್ದಾರೆ. ಕಾಪು ಮಾರಿಯಮ್ಮರಲ್ಲಿ ಪ್ರಾರ್ಥಿಸಿದ್ದೇವೆ. ಅವರ ಪ್ರವಾಸ ಯಶಸ್ವಿಯಾಗಲಿದೆ. ಪ್ರಯಾಣದ ವೇಳೆ ದೇಗುಲದ ಬಗ್ಗೆ ಪ್ರಚುರಪಡಿಸಬೇಕು. ಈ ಸನ್ನಿಧಾನಕ್ಕೆ ದೇಶದ ವಿವಿಧ ರಾಜ್ಯಗಳು ಜನರು ಬರುವಂತಾಗಬೇಕು’ ಎಂದರು.</p>.<p>ಕಾರ್ಯದರ್ಶಿ ರಮೇಶ್ ಹೆಗ್ಡೆ, ರಘುರಾಮ ಶೆಟ್ಟಿ, ಗೌರವ್ ಶೇಣವ, ವಿಲ್ಮಾ ಸಚಿನ್, ಪೋಷಕರು, ಹಿತೈಷಿಗಳು ಇದ್ದರು.</p>.<p>ಬೈಕ್ ರೈಡ್ ನಡೆಸಿ ಯಶಸ್ವಿಯಾಗಿದ್ದ ಸಚಿನ್, ಈ ಬಾರಿ ಜಿಮ್ನಿ ಕಾರಿನ ಮೂಲಕ ಯಾತ್ರೆ ಆರಂಭಿಸಿದ್ದಾರೆ. ತನ್ನ ಬಾಲ್ಯ ಸ್ನೇಹಿತ ಅಭಿಷೇಕ್ ಶೆಟ್ಟಿ ಸಾತ್ ನೀಡಲಿದ್ದಾರೆ. ಪ್ರತಿದಿನ ಚಿತ್ರೀಕರಣ ನಡೆಸಲಿದ್ದು, ಯಾತ್ರೆಯ ಮಾಹಿತಿಯನ್ನು ಶಟರ್ ಬಾಕ್ಸ್ ಫಿಲಂಸ್ನಲ್ಲಿ ಮಾಹಿತಿ ನೀಡುವರು. ತಮ್ಮ ಸಂಚಾರಕ್ಕಾಗಿ ಕಾರನ್ನು ವಿನೂತನ ಶೈಲಿಗೆ ಮಾರ್ಪಾಡು ಮಾಡಿಕೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾಪು (ಪಡುಬಿದ್ರಿ):</strong> 17 ರಾಜ್ಯಗಳು, 45 ದಿನಗಳು, 14,000 ಕಿ.ಮೀ. ಈಶಾನ್ಯ ರಾಜ್ಯವನ್ನು ಕಾಪುವಿನ ಸಚಿನ್ ಶೆಟ್ಟಿ ಹಾಗೂ ಅಭಿಷೇಕ್ ಶೆಟ್ಟಿ ಸುಜುಕಿ ಸಂಸ್ಥೆಯ ಜಿಮ್ನಿ ವಾಹನದಲ್ಲಿ ಪ್ರವಾಸ ಹೊರಟಿದ್ದಾರೆ.</p>.<p>ಕರ್ನಾಟಕ ಕರಾವಳಿಯ ಪ್ರವಾಸೋದ್ಯಮದ ಪ್ರಚುರ ಪಡಿಸಲು ಹಾಗೂ ಸ್ಥಳೀಯ ಜನರ ಬದುಕು, ಅಲ್ಲಿನ ಸಂಸ್ಕೃತಿಯನ್ನು ತಿಳಿದುಕೊಳ್ಳಲು ಈಶಾನ್ಯ ರಾಜ್ಯಗಳಿಗೆ ಪ್ರವಾಸ ಕೈಗೊಂಡಿದ್ದಾರೆ. ಪ್ರವಾಸದ ವಿಡಿಯೊ ತುಣುಕನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡುವ ಮೂಲಕ ಜನರಿಗೆ ವಿವಿಧ ರಾಜ್ಯಗಳ ಮಾಹಿತಿ ನೀಡುವರು. </p>.<p>ಶನಿವಾರ ಬೆಳಿಗ್ಗೆ ಕಾಪು ಹೊಸಮಾರಿಗುಡಿಯಲ್ಲಿ ಪೂಜೆ ಸಲ್ಲಿಸಿ ಬೀಳ್ಕೊಡಲಾಯಿತು. ಹೊಸಮಾರಿಗುಡಿಯಿಂದ ಹೊರಟ ಇವರು ಮಂಗಳೂರು ಮೂಲಕ ಶಿವಮೊಗ್ಗ ಮಾರ್ಗವಾಗಿ ವಿವಿಧ ರಾಜ್ಯಗಳಿಗೆ ಪ್ರವಾಸ ಕೈಗೊಳ್ಳುವರು. ಇಂದು ಆಂಧ್ರ ಪ್ರದೇಶನ್ನು ತಲುಪಿ ಅಲ್ಲಿ ತಂಗಲಿದ್ದಾರೆ.</p>.<p>ಕರ್ನಾಟಕ, ಆಂಧ್ಯಪ್ರದೇಶ, ಒಡಿಶಾ, ಪಶ್ಚಿಮ ಬಂಗಾಳ, ಮೇಘಾಲಯ, ತ್ರಿಪುರ, ಮಿಜೋರಾಂ, ಮಣಿಪುರ, ನಾಗಲ್ಯಾಂಡ್, ಅರುಣಾಚಲ ಪ್ರದೇಶ, ಅಸ್ಸಾಂ, ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶ, ಗುಜರಾತ್, ಮಹಾರಾಷ್ಟ್ರ, ಗೋವಾ ಮಾರ್ಗವಾಗಿ ಕರ್ನಾಟಕ ತಲುಪಲಿದ್ದಾರೆ.</p>.<p>ಸಚಿನ್ ಶೆಟ್ಟಿ ಮಾತನಾಡಿ, ‘ಈ ಮೊದಲು ಬೈಕ್ನಲ್ಲಿ ವಿವಿಧ ರಾಜ್ಯಗಳನ್ನು ಸಂಚರಿಸಿ ಅಲ್ಲಿನ ಸ್ಥಳೀಯ ಸಂಸ್ಕೃತಿ, ಆಹಾರ ಪದ್ಧತಿ ಬಗ್ಗೆ ತಿಳಿದುಕೊಂಡಿದ್ದೇವೆ. ಈ ಬಾರಿ ರಾಜ್ಯದ ಕರಾವಳಿಯ ಪ್ರವಾಸೋದ್ಯಮದ ಬಗ್ಗೆ ಸಂಚರಿಸಲಿರುವ ಎಲ್ಲ ರಾಜ್ಯಗಳಲ್ಲೂ ಪ್ರಚಾರ ಮಾಡಲಿದ್ದೇವೆ. ಅದರೊಂದಿಗೆ ಜೀರ್ಣೋದ್ಧಾರಗೊಳ್ಳುತ್ತಿರುವ ಕಾಪುವಿನ ಹೊಸಮಾರಿಗುಡಿ ದೇವಸ್ಥಾನದ ಬಗ್ಗೆಯೂ ಜನರಿಗೆ ತಿಳಿಸಲಾಗುವುದು. ಈ ಬಾರಿ ಸುಜುಕಿ ಅವರ ಹೊಸ ಜಿಮ್ನಿ ವಾಹನದಲ್ಲಿ ಸಂಚರಿಸಿಲಿದ್ದೇವೆ. ಬೇಕಾದ ಎಲ್ಲ ವ್ಯವಸ್ಥೆಗಳನ್ನು ವಿಶೇಷ ರೀತಿಯಲ್ಲಿ ವಾಹನವನ್ನು ಸಜ್ಜುಗೊಳಿಸಿದ್ದೇವೆ. ಡಿಕ್ಕಿಯಲ್ಲಿ ಅಡುಗೆಗೆ ಬೇಕಾದ ವಸ್ತು ಜೋಡಿಸಲಾಗಿದ್ದು, ವಾಹನದ ಮೇಲೆ ಟೆಂಡ್ ಅಳವಡಿಸಲಾಗಿದೆ’ ಎಂದರು.</p>.<p>ಹೊಸಮಾರಿಗುಡಿ ದೇವಸ್ಥಾನದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ವಾಸುದೇವ ಶೆಟ್ಟಿ ಮಾತನಾಡಿ, ‘ಸಚಿನ್ ಶೆಟ್ಟಿ ಛಾಯಾಗ್ರಾಹಕನಾಗಿದ್ದು, ಈ ಹಿಂದೆ ಬೈಕ್ ಯಾತ್ರೆ ಕೈಗೊಂಡಿದ್ದರು. ನವರಾತ್ರಿ ಸಡಗರದ ಉತ್ಸವದ ಸಂದರ್ಭದಲ್ಲಿ ಈಶಾನ್ಯ ರಾಜ್ಯಗಳ ಪ್ರವಾಸ ಹೊರಟಿದ್ದಾರೆ. ಕಾಪು ಮಾರಿಯಮ್ಮರಲ್ಲಿ ಪ್ರಾರ್ಥಿಸಿದ್ದೇವೆ. ಅವರ ಪ್ರವಾಸ ಯಶಸ್ವಿಯಾಗಲಿದೆ. ಪ್ರಯಾಣದ ವೇಳೆ ದೇಗುಲದ ಬಗ್ಗೆ ಪ್ರಚುರಪಡಿಸಬೇಕು. ಈ ಸನ್ನಿಧಾನಕ್ಕೆ ದೇಶದ ವಿವಿಧ ರಾಜ್ಯಗಳು ಜನರು ಬರುವಂತಾಗಬೇಕು’ ಎಂದರು.</p>.<p>ಕಾರ್ಯದರ್ಶಿ ರಮೇಶ್ ಹೆಗ್ಡೆ, ರಘುರಾಮ ಶೆಟ್ಟಿ, ಗೌರವ್ ಶೇಣವ, ವಿಲ್ಮಾ ಸಚಿನ್, ಪೋಷಕರು, ಹಿತೈಷಿಗಳು ಇದ್ದರು.</p>.<p>ಬೈಕ್ ರೈಡ್ ನಡೆಸಿ ಯಶಸ್ವಿಯಾಗಿದ್ದ ಸಚಿನ್, ಈ ಬಾರಿ ಜಿಮ್ನಿ ಕಾರಿನ ಮೂಲಕ ಯಾತ್ರೆ ಆರಂಭಿಸಿದ್ದಾರೆ. ತನ್ನ ಬಾಲ್ಯ ಸ್ನೇಹಿತ ಅಭಿಷೇಕ್ ಶೆಟ್ಟಿ ಸಾತ್ ನೀಡಲಿದ್ದಾರೆ. ಪ್ರತಿದಿನ ಚಿತ್ರೀಕರಣ ನಡೆಸಲಿದ್ದು, ಯಾತ್ರೆಯ ಮಾಹಿತಿಯನ್ನು ಶಟರ್ ಬಾಕ್ಸ್ ಫಿಲಂಸ್ನಲ್ಲಿ ಮಾಹಿತಿ ನೀಡುವರು. ತಮ್ಮ ಸಂಚಾರಕ್ಕಾಗಿ ಕಾರನ್ನು ವಿನೂತನ ಶೈಲಿಗೆ ಮಾರ್ಪಾಡು ಮಾಡಿಕೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>