ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, ‘ಮೃತ ಪ್ರವೀಣ್ ನೆಟ್ಟಾರು ಅವರ ಮನೆಗೆ ಸಾಂತ್ವನ ಹೇಳಲು ಹೊರಟ ಸಂದರ್ಭದಲ್ಲಿ ಪೊಲೀಸರು ಅಡ್ಡಿಪಡಿಸಿದ್ದು ಖಂಡನೀಯ ಹೊರಟಿದ್ದೇವೆ. ಬಿಜೆಪಿ ಸರ್ಕಾರ ಜಿಲ್ಲಾಡಳಿತದ ಮೂಲಕ ನಿರ್ಬಂಧ ಹಾಕಿಸಿದೆ. ನಿರ್ಬಂಧಕ್ಕೆ ಧಿಕ್ಕಾರ ಇದೆ. ಬಿಜೆಪಿ ಸರ್ಕಾರ ಹಿಂದೂ ವಿರೋಧಿ ಎಂದು ರುಜುವಾತಾಗಿದೆ. ಹಿಂದೂ ಕಾರ್ಯಕರ್ತರು ಸರ್ಕಾರಕ್ಕೆ ಉಗಿದು ರಾಜೀನಾಮೆ ನೀಡುತ್ತಿದ್ದು ಬಿಜೆಪಿ ಬಣ್ಣ ಬಯಲಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.