ಗ್ರಾಮಾಂತರ ಠಾಣೆಯಲ್ಲಿದ್ದ ಕಾರಣ ಸಹಜವಾಗಿ ಹಳ್ಳಿಗಾಡಿನ ಜನರ ಕಷ್ಟಗಳ ಅರಿವಿದ್ದ ಉದಯ್ ಶೆಟ್ಟಿ, ಸಂಕಷ್ಟಕ್ಕೆ ಸಿಲುಕಿದ್ದ ಕುಟುಂಬಗಳನ್ನು ಗುರುತಿಸಿ ಖುದ್ದು ಆಹಾರದ ಪೊಟ್ಟಣಗಳನ್ನು ಹೊತ್ತು ಮನೆಗೆ ತಲುಪಿಸಿದ್ದಾರೆ. ಜತೆಗೆ, ಕೋವಿಡ್ ಸೋಂಕಿನ ಕುರಿತು ಜಾಗೃತಿಯನ್ನೂ ಮೂಡಿಸಿದ್ದಾರೆ. ಪ್ರತಿನಿತ್ಯ ಆಹಾರಕ್ಕಾಗಿ ನಿರಂತರವಾಗಿ ಕರೆಗಳು ಬರುತ್ತಿತ್ತು. ಕಅವರಿಗೆಲ್ಲ ಆಹಾರದ ಪೊಟ್ಟಣಗಳನ್ನು ತಲುಪಿಸಿದ್ದೇನೆ. ಈ ಕಾರ್ಯಕ್ಕೆ ಕಾರ್ಕಳದ ದಾನಿಗಳ ಸಹಕಾರ ಬಹಳ ದೊಡ್ಡದು ಎಂದು ಸ್ಮರಿಸುತ್ತಾರೆ ಉದಯ್ ಶೆಟ್ಟಿ.