<p><strong>ಉಡುಪಿ</strong>: ಜಿಲ್ಲೆಯಲ್ಲಿ ಮುಂಗಾರು ಚುರುಕಾಗಿದ್ದು ಬಿರುಸಾಗಿ ಮಳೆ ಸುರಿಯುತ್ತಿದೆ. ಭಾನುವಾರ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದೆ.</p>.<p><strong>ಮರ ಬಿದ್ದು ಹಾನಿ</strong></p>.<p>ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಜಿಲ್ಲೆಯಾದ್ಯಂತ ಹಾನಿ ಸಂಭವಿಸಿದೆ. ಮರಗಳು ಬಿದ್ದು ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಬ್ರಹ್ಮಾವರ ತಾಲ್ಲೂಕಿನ ಕೋಟತಟ್ಟು ಗ್ರಾಮದಲ್ಲಿ ಸುಮತಿ ಎಂಬುವರ ಮನೆ ಹಾಗೂ ಹಲುವಳ್ಳಿ ಗ್ರಾಮದಲ್ಲಿ ರತ್ನ ಎಂಬುವರ ಮನೆಗೆ ಭಾಗಶಃ ಹಾನಿಯಾಗಿದೆ.</p>.<p>ಶನಿವಾರ ಸುರಿದ ಮಳೆಯೂ ಅವಾಂತರಗಳನ್ನು ಸೃಷ್ಟಿಸಿದ್ದು, ಕುಂದಾಪುರ ತಾಲ್ಲೂಕಿನ ಉಳ್ತೂರು ಗ್ರಾಮದಲ್ಲಿ ಮರಗಳು ಬಿದ್ದು 7 ಮನೆಗಳಿಗೆ ಹಾನಿಯಾಗಿದೆ. ತೆಕ್ಕಟ್ಟೆ ಗ್ರಾಮದಲ್ಲಿ ಕೊಟ್ಟಿಗೆ ಬಿದ್ದಿದೆ.</p>.<p>ಬೈಂದೂರು ತಾಲ್ಲೂಕಿನ ಉಪ್ಪುಂದ, ಶಿರೂರು, ಕಾಪು ತಾಲ್ಲೂಕಿನ ನಂದಿಕೂರು, ಉಡುಪಿ ತಾಲ್ಲೂಕಿನ 76 ಬಡಗಬೆಟ್ಟು ಗ್ರಾಮ, ಬಡಾನಿಡಿಯೂರಿನಲ್ಲಿ ಮನೆಗಳಿಗೆ ಹಾನಿಯಾಯಾಗಿದೆ. ಕುಂದಾಪುರದಲ್ಲಿ ತೋಟಗಾರಿಕಾ ಬೆಳೆ ಹಾಳಾಗಿದೆ. ಶನಿವಾರ ಸುರಿದ ಮಳೆಗೆ ₹ 6.12 ಲಕ್ಷ ನಷ್ಟ ಸಂಭವಿಸಿದೆ. ಭಾನುವಾರ 45,000 ನಷ್ಟ ಅಂದಾಜಿಸಲಾಗಿದೆ.</p>.<p>ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ 5.5 ಸೆ.ಮೀ ಮಳೆಯಾಗಿದ್ದು, ಉಡುಪಿಯಲ್ಲಿ 6.7, ಕುಂದಾಪುರ 4.9, ಕಾರ್ಕಳದಲ್ಲಿ 5.1 ಸೆ.ಮೀ ಮಳೆ ಬಿದ್ದ ವರದಿಯಾಗಿದೆ.</p>.<p><strong>ನೀರಿನ ಹರಿವು ಹೆಚ್ಚಳ</strong></p>.<p>ಎಡೆಬಿಡದೆ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಸ್ವರ್ಣಾ ನದಿಯ ಹರಿವು ಹೆಚ್ಚಾಗಿದ್ದು ನಗರಕ್ಕೆ ನೀರು ಪೂರೈಸುವ ಬಜೆ ಜಲಾಶಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗುತ್ತಿದೆ. ಹೆಬ್ರಿಯ ಸೀತಾ ನದಿಯಲ್ಲೂ ಹರಿವು ಹೆಚ್ಚಾಗಿದೆ. ಮಳೆಯ ಆರ್ಭಟ ಮುಂದುವರಿದರೆ ನದಿಗಳು ತುಂಬಿ ಹರಿಯಲಿವೆ.</p>.<p><strong>ವಿದ್ಯುತ್ ವ್ಯತ್ಯಯ</strong></p>.<p>ಗಾಳಿ ಮಳೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ವಿದ್ಯುತ್ ವ್ಯತ್ಯಯ ಸಾಮಾನ್ಯವಾಗಿದೆ. ಹಳ್ಳಿಗಳಲ್ಲಿ ಮರ ಬಿದ್ದು, ವಿದ್ಯುತ್ ಕಂಬಗಳಿಗೆ ಹಾನಿಯಾಗಿ ಪೂರೈಕೆಗೆ ಸಮಸ್ಯೆಯಾಗಿದೆ.</p>.<p>ಸಮುದ್ರದಲ್ಲಿ ಅಲೆಗಳ ಉಬ್ಬರವೂ ಹೆಚ್ಚಾಗಿದ್ದು, ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಸೂಚನೆ ನೀಡಲಾಗಿದೆ. ಸಮುದ್ರದಂಚಿನಲ್ಲಿ ವಾಸಿಸುವವರಿಗೂ ಎಚ್ಚರಿಕೆ ನೀಡಲಾಗಿದೆ.</p>.<p><strong>ಹವಾಮಾನ ಇಲಾಖೆ ಎಚ್ಚರಿಕೆ</strong></p>.<p>ಜೂನ್ 19ರವರೆಗೂ ಕರಾವಳಿ ಪ್ರದೇಶಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜೂನ್ 15ರಂದು125 ಮಿ.ಮೀಗೂ ಹೆಚ್ಚು ಮಳೆ ಸುರಿಯುವ ಸಾಧ್ಯತೆ ಇದೆ. 16ರಿಂದ 19ರವರೆಗೆ 65 ಮಿ.ಮೀಗೂ ಹೆಚ್ಚು ಮಳೆ ಬೀಳಲಿದೆ ಎಂದು ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಡುಪಿ</strong>: ಜಿಲ್ಲೆಯಲ್ಲಿ ಮುಂಗಾರು ಚುರುಕಾಗಿದ್ದು ಬಿರುಸಾಗಿ ಮಳೆ ಸುರಿಯುತ್ತಿದೆ. ಭಾನುವಾರ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದೆ.</p>.<p><strong>ಮರ ಬಿದ್ದು ಹಾನಿ</strong></p>.<p>ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಜಿಲ್ಲೆಯಾದ್ಯಂತ ಹಾನಿ ಸಂಭವಿಸಿದೆ. ಮರಗಳು ಬಿದ್ದು ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಬ್ರಹ್ಮಾವರ ತಾಲ್ಲೂಕಿನ ಕೋಟತಟ್ಟು ಗ್ರಾಮದಲ್ಲಿ ಸುಮತಿ ಎಂಬುವರ ಮನೆ ಹಾಗೂ ಹಲುವಳ್ಳಿ ಗ್ರಾಮದಲ್ಲಿ ರತ್ನ ಎಂಬುವರ ಮನೆಗೆ ಭಾಗಶಃ ಹಾನಿಯಾಗಿದೆ.</p>.<p>ಶನಿವಾರ ಸುರಿದ ಮಳೆಯೂ ಅವಾಂತರಗಳನ್ನು ಸೃಷ್ಟಿಸಿದ್ದು, ಕುಂದಾಪುರ ತಾಲ್ಲೂಕಿನ ಉಳ್ತೂರು ಗ್ರಾಮದಲ್ಲಿ ಮರಗಳು ಬಿದ್ದು 7 ಮನೆಗಳಿಗೆ ಹಾನಿಯಾಗಿದೆ. ತೆಕ್ಕಟ್ಟೆ ಗ್ರಾಮದಲ್ಲಿ ಕೊಟ್ಟಿಗೆ ಬಿದ್ದಿದೆ.</p>.<p>ಬೈಂದೂರು ತಾಲ್ಲೂಕಿನ ಉಪ್ಪುಂದ, ಶಿರೂರು, ಕಾಪು ತಾಲ್ಲೂಕಿನ ನಂದಿಕೂರು, ಉಡುಪಿ ತಾಲ್ಲೂಕಿನ 76 ಬಡಗಬೆಟ್ಟು ಗ್ರಾಮ, ಬಡಾನಿಡಿಯೂರಿನಲ್ಲಿ ಮನೆಗಳಿಗೆ ಹಾನಿಯಾಯಾಗಿದೆ. ಕುಂದಾಪುರದಲ್ಲಿ ತೋಟಗಾರಿಕಾ ಬೆಳೆ ಹಾಳಾಗಿದೆ. ಶನಿವಾರ ಸುರಿದ ಮಳೆಗೆ ₹ 6.12 ಲಕ್ಷ ನಷ್ಟ ಸಂಭವಿಸಿದೆ. ಭಾನುವಾರ 45,000 ನಷ್ಟ ಅಂದಾಜಿಸಲಾಗಿದೆ.</p>.<p>ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ 5.5 ಸೆ.ಮೀ ಮಳೆಯಾಗಿದ್ದು, ಉಡುಪಿಯಲ್ಲಿ 6.7, ಕುಂದಾಪುರ 4.9, ಕಾರ್ಕಳದಲ್ಲಿ 5.1 ಸೆ.ಮೀ ಮಳೆ ಬಿದ್ದ ವರದಿಯಾಗಿದೆ.</p>.<p><strong>ನೀರಿನ ಹರಿವು ಹೆಚ್ಚಳ</strong></p>.<p>ಎಡೆಬಿಡದೆ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಸ್ವರ್ಣಾ ನದಿಯ ಹರಿವು ಹೆಚ್ಚಾಗಿದ್ದು ನಗರಕ್ಕೆ ನೀರು ಪೂರೈಸುವ ಬಜೆ ಜಲಾಶಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗುತ್ತಿದೆ. ಹೆಬ್ರಿಯ ಸೀತಾ ನದಿಯಲ್ಲೂ ಹರಿವು ಹೆಚ್ಚಾಗಿದೆ. ಮಳೆಯ ಆರ್ಭಟ ಮುಂದುವರಿದರೆ ನದಿಗಳು ತುಂಬಿ ಹರಿಯಲಿವೆ.</p>.<p><strong>ವಿದ್ಯುತ್ ವ್ಯತ್ಯಯ</strong></p>.<p>ಗಾಳಿ ಮಳೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ವಿದ್ಯುತ್ ವ್ಯತ್ಯಯ ಸಾಮಾನ್ಯವಾಗಿದೆ. ಹಳ್ಳಿಗಳಲ್ಲಿ ಮರ ಬಿದ್ದು, ವಿದ್ಯುತ್ ಕಂಬಗಳಿಗೆ ಹಾನಿಯಾಗಿ ಪೂರೈಕೆಗೆ ಸಮಸ್ಯೆಯಾಗಿದೆ.</p>.<p>ಸಮುದ್ರದಲ್ಲಿ ಅಲೆಗಳ ಉಬ್ಬರವೂ ಹೆಚ್ಚಾಗಿದ್ದು, ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಸೂಚನೆ ನೀಡಲಾಗಿದೆ. ಸಮುದ್ರದಂಚಿನಲ್ಲಿ ವಾಸಿಸುವವರಿಗೂ ಎಚ್ಚರಿಕೆ ನೀಡಲಾಗಿದೆ.</p>.<p><strong>ಹವಾಮಾನ ಇಲಾಖೆ ಎಚ್ಚರಿಕೆ</strong></p>.<p>ಜೂನ್ 19ರವರೆಗೂ ಕರಾವಳಿ ಪ್ರದೇಶಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜೂನ್ 15ರಂದು125 ಮಿ.ಮೀಗೂ ಹೆಚ್ಚು ಮಳೆ ಸುರಿಯುವ ಸಾಧ್ಯತೆ ಇದೆ. 16ರಿಂದ 19ರವರೆಗೆ 65 ಮಿ.ಮೀಗೂ ಹೆಚ್ಚು ಮಳೆ ಬೀಳಲಿದೆ ಎಂದು ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>