<p><strong>‘ಮೈತ್ರಿ ಕೊಟ್ಟ ಹೊಡೆತ’</strong></p>.<p>ಜನಾದೇಶವನ್ನು ತಲೆಬಾಗಿ ಸ್ವೀಕರಿಸುತ್ತೇವೆ. ಕಾಂಗ್ರೆಸ್ ಪ್ರಬಲವಾಗಿದ್ದ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಟ್ಟಿದ್ದು, ಚುನಾವಣಾ ಪೂರ್ವ ಮೈತ್ರಿ ಪೆಟ್ಟುಕೊಟ್ಟಿದೆ ಎಂದು ಎನಿಸುತ್ತಿದೆ. ಮುಂದೆ ಸೋಲಿನ ಕುರಿತು ಪರಾಮರ್ಶೆ ನಡೆಸಲಾಗುವುದು. ಪಕ್ಷವನ್ನು ಮತ್ತೆ ಸಂಘಟಿಸಲಾಗುವುದು.</p>.<p><strong>–ಅಶೋಕ್ ಕೊಡವೂರು, </strong>ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ</p>.<p><strong>ಬಿಕಾರಿಗಳಾದ ಪ್ರತಿಪಕ್ಷಗಳು: ಮಟ್ಟಾರು</strong></p>.<p>ಲೋಕಸಭಾ ಚುನಾವಣಾ ಫಲಿತಾಂಶ ಜನತೆಯ ನಿರೀಕ್ಷೆಯಂತೆ ಬಂದಿದ್ದು, ದೇಶದ ಅಭಿವೃದ್ಧಿ, ಭದ್ರತೆ, ಸಮರ್ಥ ನಾಯಕತ್ವಕ್ಕೆ ಮಣೆ ಸಿಕ್ಕಿದೆ. ಪ್ರಧಾನಿ ಹುದ್ದೆಗೆ ತುದಿಗಾಲಲ್ಲಿ ನಿಂತಿದ್ದ ಪ್ರತಿಪಕ್ಷ ನಾಯಕರು ದೂಳೀಪಟವಾಗಿದ್ದಾರೆ. ವಿಕಾರಿ ನಾಮ ಸಂವತ್ಸರದಲ್ಲಿ ಪ್ರತಿಪಕ್ಷಗಳು ಬಿಕಾರಿಯಾಗಿವೆ.</p>.<p><strong>–ಮಟ್ಟಾರು ರತ್ನಾಕರ ಹೆಗಡೆ, </strong>ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ</p>.<p><strong>‘ಮತದಾರರ ತೀರ್ಪು ಸ್ವೀಕರಿಸುವೆ’</strong></p>.<p>ದೇಶದಾದ್ಯಂತ ಬಿಜೆಪಿ ಅಲೆ ಜೋರಾಗಿ ಬೀಸುತ್ತಿದ್ದಾಗ ನಾವೆಲ್ಲರೂ ಅಸಹಾಯಕರಾಗಿಬಿಟ್ಟಿದ್ದೇವೆ. ಸೋಲಾದರೂ ಪ್ರಜೆಗಳೇ ಪ್ರಭುಗಳು. ಮತದಾರರು ಕೊಟ್ಟ ತೀರ್ಪನ್ನು ಸ್ವೀಕರಿಸುತ್ತೇನೆ.</p>.<p><strong>–ಪ್ರಮೋದ್ ಮಧ್ವರಾಜ್, </strong>ಪರಾಜಿತ ಮೈತ್ರಿ ಅಭ್ಯರ್ಥಿ</p>.<p>* ಲೋಕತಂತ್ರ ವ್ಯವಸ್ಥೆಯಲ್ಲಿ ಸೋಲು–ಗೆಲುವು ಸಹಜ. ಸೋಲನ್ನು ಸವಾಲಾಗಿ ಸ್ವೀಕರಿಸುವ ಶಕ್ತಿ ವರಿಷ್ಠರಾದ ದೇವೇಗೌಡರಿಗೆ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಇದೆ. ಸೋಲಿನ ಬಗ್ಗೆ ಆತ್ಮಾವಲೋಕನ ಮಾಡಿಕೊಂಡು ಜಿಲ್ಲೆಯಲ್ಲಿ ಪಕ್ಷ ಕಟ್ಟುತ್ತೇವೆ. ಮೋದಿ ಬಡವರ, ಮಧ್ಯಮವರ್ಗದ ಕೆಲಸ ಮಾಡಲಿ ಎಂದು ಆಶಿಸುತ್ತೇನೆ.</p>.<p><strong>ಯೋಗೀಶ್ ಶೆಟ್ಟಿ, </strong>ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>‘ಮೈತ್ರಿ ಕೊಟ್ಟ ಹೊಡೆತ’</strong></p>.<p>ಜನಾದೇಶವನ್ನು ತಲೆಬಾಗಿ ಸ್ವೀಕರಿಸುತ್ತೇವೆ. ಕಾಂಗ್ರೆಸ್ ಪ್ರಬಲವಾಗಿದ್ದ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಟ್ಟಿದ್ದು, ಚುನಾವಣಾ ಪೂರ್ವ ಮೈತ್ರಿ ಪೆಟ್ಟುಕೊಟ್ಟಿದೆ ಎಂದು ಎನಿಸುತ್ತಿದೆ. ಮುಂದೆ ಸೋಲಿನ ಕುರಿತು ಪರಾಮರ್ಶೆ ನಡೆಸಲಾಗುವುದು. ಪಕ್ಷವನ್ನು ಮತ್ತೆ ಸಂಘಟಿಸಲಾಗುವುದು.</p>.<p><strong>–ಅಶೋಕ್ ಕೊಡವೂರು, </strong>ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ</p>.<p><strong>ಬಿಕಾರಿಗಳಾದ ಪ್ರತಿಪಕ್ಷಗಳು: ಮಟ್ಟಾರು</strong></p>.<p>ಲೋಕಸಭಾ ಚುನಾವಣಾ ಫಲಿತಾಂಶ ಜನತೆಯ ನಿರೀಕ್ಷೆಯಂತೆ ಬಂದಿದ್ದು, ದೇಶದ ಅಭಿವೃದ್ಧಿ, ಭದ್ರತೆ, ಸಮರ್ಥ ನಾಯಕತ್ವಕ್ಕೆ ಮಣೆ ಸಿಕ್ಕಿದೆ. ಪ್ರಧಾನಿ ಹುದ್ದೆಗೆ ತುದಿಗಾಲಲ್ಲಿ ನಿಂತಿದ್ದ ಪ್ರತಿಪಕ್ಷ ನಾಯಕರು ದೂಳೀಪಟವಾಗಿದ್ದಾರೆ. ವಿಕಾರಿ ನಾಮ ಸಂವತ್ಸರದಲ್ಲಿ ಪ್ರತಿಪಕ್ಷಗಳು ಬಿಕಾರಿಯಾಗಿವೆ.</p>.<p><strong>–ಮಟ್ಟಾರು ರತ್ನಾಕರ ಹೆಗಡೆ, </strong>ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ</p>.<p><strong>‘ಮತದಾರರ ತೀರ್ಪು ಸ್ವೀಕರಿಸುವೆ’</strong></p>.<p>ದೇಶದಾದ್ಯಂತ ಬಿಜೆಪಿ ಅಲೆ ಜೋರಾಗಿ ಬೀಸುತ್ತಿದ್ದಾಗ ನಾವೆಲ್ಲರೂ ಅಸಹಾಯಕರಾಗಿಬಿಟ್ಟಿದ್ದೇವೆ. ಸೋಲಾದರೂ ಪ್ರಜೆಗಳೇ ಪ್ರಭುಗಳು. ಮತದಾರರು ಕೊಟ್ಟ ತೀರ್ಪನ್ನು ಸ್ವೀಕರಿಸುತ್ತೇನೆ.</p>.<p><strong>–ಪ್ರಮೋದ್ ಮಧ್ವರಾಜ್, </strong>ಪರಾಜಿತ ಮೈತ್ರಿ ಅಭ್ಯರ್ಥಿ</p>.<p>* ಲೋಕತಂತ್ರ ವ್ಯವಸ್ಥೆಯಲ್ಲಿ ಸೋಲು–ಗೆಲುವು ಸಹಜ. ಸೋಲನ್ನು ಸವಾಲಾಗಿ ಸ್ವೀಕರಿಸುವ ಶಕ್ತಿ ವರಿಷ್ಠರಾದ ದೇವೇಗೌಡರಿಗೆ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಇದೆ. ಸೋಲಿನ ಬಗ್ಗೆ ಆತ್ಮಾವಲೋಕನ ಮಾಡಿಕೊಂಡು ಜಿಲ್ಲೆಯಲ್ಲಿ ಪಕ್ಷ ಕಟ್ಟುತ್ತೇವೆ. ಮೋದಿ ಬಡವರ, ಮಧ್ಯಮವರ್ಗದ ಕೆಲಸ ಮಾಡಲಿ ಎಂದು ಆಶಿಸುತ್ತೇನೆ.</p>.<p><strong>ಯೋಗೀಶ್ ಶೆಟ್ಟಿ, </strong>ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>