ಉಡುಪಿ: ಅನಾರೋಗ್ಯದಿಂದಶಿವಮೊಗ್ಗ ಜಿಲ್ಲೆಯ ಸಕ್ರೆಬೈಲು ಆನೆ ಬಿಡಾರದಲ್ಲಿದ್ದ ಶ್ರೀಕೃಷ್ಣಮಠದ ಆನೆ ಸುಭದ್ರೆಯನ್ನು ಮತ್ತೆ ಶ್ರೀಕೃಷ್ಣಮಠಕ್ಕೆ ಕರೆತರಲಾಗಿದೆ.
ಪಲಿಮಾರು ಶ್ರೀಗಳ ಪರ್ಯಾಯದ ಸಂದರ್ಭ ಆನೆಗೆ ಅನಾರೋಗ್ಯ ಕಾಡಿದ್ದರಿದಂ ಸಕ್ರೆಬೈಲು ಆನೆಬಿಡಾರಕ್ಕೆ ಚಿಕಿತ್ಸೆಗೆ ಕಳುಹಿಸಲಾಗಿತ್ತು.ಐದು ದಿನಗಳ ಹಿಂದೆ ಮಠಕ್ಕೆ ಸುಭದ್ರೆ ಮಠಕ್ಕೆ ಬಂದಿದ್ದು, ಮುಖ್ಯದ್ವಾರ ಬಳಿಯ ಹಳೆಯ ಆನೆಲಾಯದಲ್ಲಿ ವಾಸ್ತವ್ಯ ಹೂಡಿದೆ. ಸುಭದ್ರೆ ಗುಣಮುಖ ಹೊಂದಿದೆ ಮಠ ತಿಳಿಸಿದೆ.
ಶ್ರೀಕೃಷ್ಣಮಠದಲ್ಲಿ ರಥೋತ್ಸವ ನಡೆಯುತಿದ್ದು, ಮೇ 29 ರಿಂದ ಸುವರ್ಣಗೋಪುರ ಸಮರ್ಪಣೆ ಕಾರ್ಯಕ್ರಮ ಇರುವ ಕಾರಣದಿಂದ ಸುಭದ್ರೆಯನ್ನು ಕರೆತರಲಾಗಿದೆ. ಮಠದ ಪರಿಸರಕ್ಕೆ ಹೊಂದಿಕೊಂಡರೆ ಆನೆ ಇಲ್ಲಿಯೇ ಇರಲಿದೆ ಎಂದು ಮಠದ ಸಿಬ್ಬಂದಿ ತಿಳಿಸಿದ್ದಾರೆ.