<p><strong>ಉಡುಪಿ:</strong> 14ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಮಾರ್ಚ್ 14 ಹಾಗೂ 15ರಂದು ಬ್ರಹ್ಮಾವರದ ಹಂಗಾರಕಟ್ಟೆಯ ಚೇತನಾ ಪ್ರೌಢಶಾಲೆಯಲ್ಲಿ ನಡೆಯಲಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗರು ತಿಳಿಸಿದರು.</p>.<p>ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಹಿತಿ ವೈದೇಹಿ ಸಮ್ಮೇಳನಾಧ್ಯಕ್ಷತೆ ವಹಿಸಲಿದ್ದಾರೆ. ‘ಇರುವಂತಿಕೆ’ ಶೀರ್ಷಿಕೆಯಡಿ 14 ಗೋಷ್ಠಿಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.</p>.<p>14ರಂದು ಬೆಳಿಗ್ಗೆ 8.30ಕ್ಕೆ ಧ್ವಜಾರೋಹಣ ನಡೆಯಲಿದ್ದು, 9.30ಕ್ಕೆ ಸಮ್ಮೇಳನಾಧ್ಯಕ್ಷರನ್ನು ವೇದಿಕೆಗೆ ಬರಮಾಡಿಕೊಳ್ಳಲಾಗುವುದು. 10ಕ್ಕೆ ಉದ್ಘಾಟನೆ ನೆರವೇರಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆಎಂದು ತಿಳಿಸಿದರು.</p>.<p>ಮಧ್ಯಾಹ್ನ 12ಕ್ಕೆ ‘ಮರೆಯಲಾಗದ ಮಹನೀಯರು’ ಒಂದು ನೆನಪು ಕಾರ್ಯಕ್ರಮದಲ್ಲಿ ಡಿ.ವಿ.ಹೊಳ್ಳ, ಪ್ರೊ.ಉಪೇಂದ್ರ ಸೋಮಯಾಜಿ ಉಪಸ್ಥಿತರಿರಲಿದ್ದಾರೆ. ‘ಹಾಜಿ ಅಬ್ದುಲ್ಲಾ ಅವರ ಸೌಹಾರ್ದತೆ ಸಮಾಜ ಸೇವೆ’ ಕುರಿತು ಮನೋವೈದ್ಯ ಡಾ.ಪಿ.ವಿ.ಭಂಡಾರಿ, ಬಿ.ಪಿ. ಬಾಯರಿ ‘ಭಾರತೀಯ ಕಲಾಪರಂಪರೆ’ ಕುರಿತು ಡಾ.ಭಾರತಿ ಮರವಂತೆ ಮಾತನಾಡಲಿದ್ದಾರೆ ಎಂದರು.</p>.<p>2.30ಕ್ಕೆ ಕವಿಗೋಷ್ಠಿ, 4.15ಕ್ಕೆ ‘ಯಕ್ಷಗಾನ ಸ್ಥಿತ್ಯಂತರ’ ಕುರಿತ ಪ್ರಸಾದ್ ಮೊಗೆಬೆಟ್ಟು ಮಾತನಾಡಲಿದ್ದಾರೆ. 5.15ಕ್ಕೆ ನೃತ್ಯ, 5.30ಕ್ಕೆ ‘ನನ್ನ ಕಥೆ, ನಿಮ್ಮ ಜತೆ’ ಕಾರ್ಯಕ್ರಮ, 6.30ಕ್ಕೆ ಸಾಂಸ್ಕೃತಿಕ ಸೌರಭ ಕಾರ್ಯಕ್ರಮಗಳು ನಡೆಯಲಿವೆ.</p>.<p>15ರಂದು ಬೆಳಿಗ್ಗೆ 9ಕ್ಕೆ ಉದಯರಾಗ ವೀಣಾವಾದನ, 10ಕ್ಕೆ ‘ನಡೆ ಕನ್ನಡ, ನುಡಿ ಕನ್ನಡ’ ಕುರಿತು ವಿದ್ಯಾರ್ಥಿ ಗೋಷ್ಠಿ, 11ಕ್ಕೆ ‘ಮಹಿಳೆ ಮತ್ತು ಸಾಮಾಜಿಕ ಸವಾಲುಗಳು’ ಕುರಿತು ಡಾ.ರಶ್ಮಿ ಕುಂದಾಪುರ, ‘ವೈದೇಹಿ ಬರಹದಲ್ಲಿ ಮಹಿಳಾ ಪ್ರಜ್ಞೆ’ ವಿಚಾರ ಕುರಿತು ಡಾ.ಜ್ಯೋತಿ ಚೇಳೈರು ಮಾತನಾಡಲಿದ್ದಾರೆ.</p>.<p>12ಕ್ಕೆ ‘ಸಮ್ಮೇಳನಾಧ್ಯಕ್ಷರ ಜತೆ ಒಂದಿಷ್ಟು ಹೊತ್ತು’ ಕಾರ್ಯಕ್ರಮ, 2ಕ್ಕೆ ‘ನಮ್ಮ ಉಡುಪಿ’, 3.30ಕ್ಕೆ ಬಹಿರಂಗ ಅಧಿವೇಶನ ನಡೆಯಲಿದೆ. 4ಕ್ಕೆ ‘ನನ್ನ ಭಾಷೆ, ನನ್ನ ಹೆಮ್ಮೆ’ ಸಂವಾದ, 4.30ಕ್ಕೆ ಸಮಾರೋಪ ಸಮಾರಂಭ, ಸಂಜೆ 6ಕ್ಕೆ ‘ಯಕ್ಷ ಹಾಸ್ಯ: ನಾಟ್ಯ ರಸಾಯನ’ ಬಳಿಕ ಜನಪದ ಸಂಗಮ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.</p>.<p>ಸುದ್ದಿಗೋಷ್ಠಿಯಲ್ಲಿ ಬ್ರಹ್ಮಾವರ ತಾಲ್ಲೂಕು ಕಸಾಪ ಅಧ್ಯಕ್ಷ ಸೂರಾಲು ನಾರಾಯಣ ಮಡಿ, ಕಾಪು ಅಧ್ಯಕ್ಷ ಪುಂಡಲೀಕ ಮರಾಠೆ, ಉಸಿರು ಕೋಟ ಸಂಸ್ಥೆಯ ವೆಂಕಟೇಶ್ ಭಟ್, ಚೇತನಾ ಪ್ರೌಢಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಭರತ್ ಕುಮಾರ್ ಶೆಟ್ಟಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಡುಪಿ:</strong> 14ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಮಾರ್ಚ್ 14 ಹಾಗೂ 15ರಂದು ಬ್ರಹ್ಮಾವರದ ಹಂಗಾರಕಟ್ಟೆಯ ಚೇತನಾ ಪ್ರೌಢಶಾಲೆಯಲ್ಲಿ ನಡೆಯಲಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗರು ತಿಳಿಸಿದರು.</p>.<p>ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಹಿತಿ ವೈದೇಹಿ ಸಮ್ಮೇಳನಾಧ್ಯಕ್ಷತೆ ವಹಿಸಲಿದ್ದಾರೆ. ‘ಇರುವಂತಿಕೆ’ ಶೀರ್ಷಿಕೆಯಡಿ 14 ಗೋಷ್ಠಿಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.</p>.<p>14ರಂದು ಬೆಳಿಗ್ಗೆ 8.30ಕ್ಕೆ ಧ್ವಜಾರೋಹಣ ನಡೆಯಲಿದ್ದು, 9.30ಕ್ಕೆ ಸಮ್ಮೇಳನಾಧ್ಯಕ್ಷರನ್ನು ವೇದಿಕೆಗೆ ಬರಮಾಡಿಕೊಳ್ಳಲಾಗುವುದು. 10ಕ್ಕೆ ಉದ್ಘಾಟನೆ ನೆರವೇರಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆಎಂದು ತಿಳಿಸಿದರು.</p>.<p>ಮಧ್ಯಾಹ್ನ 12ಕ್ಕೆ ‘ಮರೆಯಲಾಗದ ಮಹನೀಯರು’ ಒಂದು ನೆನಪು ಕಾರ್ಯಕ್ರಮದಲ್ಲಿ ಡಿ.ವಿ.ಹೊಳ್ಳ, ಪ್ರೊ.ಉಪೇಂದ್ರ ಸೋಮಯಾಜಿ ಉಪಸ್ಥಿತರಿರಲಿದ್ದಾರೆ. ‘ಹಾಜಿ ಅಬ್ದುಲ್ಲಾ ಅವರ ಸೌಹಾರ್ದತೆ ಸಮಾಜ ಸೇವೆ’ ಕುರಿತು ಮನೋವೈದ್ಯ ಡಾ.ಪಿ.ವಿ.ಭಂಡಾರಿ, ಬಿ.ಪಿ. ಬಾಯರಿ ‘ಭಾರತೀಯ ಕಲಾಪರಂಪರೆ’ ಕುರಿತು ಡಾ.ಭಾರತಿ ಮರವಂತೆ ಮಾತನಾಡಲಿದ್ದಾರೆ ಎಂದರು.</p>.<p>2.30ಕ್ಕೆ ಕವಿಗೋಷ್ಠಿ, 4.15ಕ್ಕೆ ‘ಯಕ್ಷಗಾನ ಸ್ಥಿತ್ಯಂತರ’ ಕುರಿತ ಪ್ರಸಾದ್ ಮೊಗೆಬೆಟ್ಟು ಮಾತನಾಡಲಿದ್ದಾರೆ. 5.15ಕ್ಕೆ ನೃತ್ಯ, 5.30ಕ್ಕೆ ‘ನನ್ನ ಕಥೆ, ನಿಮ್ಮ ಜತೆ’ ಕಾರ್ಯಕ್ರಮ, 6.30ಕ್ಕೆ ಸಾಂಸ್ಕೃತಿಕ ಸೌರಭ ಕಾರ್ಯಕ್ರಮಗಳು ನಡೆಯಲಿವೆ.</p>.<p>15ರಂದು ಬೆಳಿಗ್ಗೆ 9ಕ್ಕೆ ಉದಯರಾಗ ವೀಣಾವಾದನ, 10ಕ್ಕೆ ‘ನಡೆ ಕನ್ನಡ, ನುಡಿ ಕನ್ನಡ’ ಕುರಿತು ವಿದ್ಯಾರ್ಥಿ ಗೋಷ್ಠಿ, 11ಕ್ಕೆ ‘ಮಹಿಳೆ ಮತ್ತು ಸಾಮಾಜಿಕ ಸವಾಲುಗಳು’ ಕುರಿತು ಡಾ.ರಶ್ಮಿ ಕುಂದಾಪುರ, ‘ವೈದೇಹಿ ಬರಹದಲ್ಲಿ ಮಹಿಳಾ ಪ್ರಜ್ಞೆ’ ವಿಚಾರ ಕುರಿತು ಡಾ.ಜ್ಯೋತಿ ಚೇಳೈರು ಮಾತನಾಡಲಿದ್ದಾರೆ.</p>.<p>12ಕ್ಕೆ ‘ಸಮ್ಮೇಳನಾಧ್ಯಕ್ಷರ ಜತೆ ಒಂದಿಷ್ಟು ಹೊತ್ತು’ ಕಾರ್ಯಕ್ರಮ, 2ಕ್ಕೆ ‘ನಮ್ಮ ಉಡುಪಿ’, 3.30ಕ್ಕೆ ಬಹಿರಂಗ ಅಧಿವೇಶನ ನಡೆಯಲಿದೆ. 4ಕ್ಕೆ ‘ನನ್ನ ಭಾಷೆ, ನನ್ನ ಹೆಮ್ಮೆ’ ಸಂವಾದ, 4.30ಕ್ಕೆ ಸಮಾರೋಪ ಸಮಾರಂಭ, ಸಂಜೆ 6ಕ್ಕೆ ‘ಯಕ್ಷ ಹಾಸ್ಯ: ನಾಟ್ಯ ರಸಾಯನ’ ಬಳಿಕ ಜನಪದ ಸಂಗಮ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.</p>.<p>ಸುದ್ದಿಗೋಷ್ಠಿಯಲ್ಲಿ ಬ್ರಹ್ಮಾವರ ತಾಲ್ಲೂಕು ಕಸಾಪ ಅಧ್ಯಕ್ಷ ಸೂರಾಲು ನಾರಾಯಣ ಮಡಿ, ಕಾಪು ಅಧ್ಯಕ್ಷ ಪುಂಡಲೀಕ ಮರಾಠೆ, ಉಸಿರು ಕೋಟ ಸಂಸ್ಥೆಯ ವೆಂಕಟೇಶ್ ಭಟ್, ಚೇತನಾ ಪ್ರೌಢಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಭರತ್ ಕುಮಾರ್ ಶೆಟ್ಟಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>