ಕೋಟೇಶ್ವರದ ಕುಂಬ್ರಿಯಲ್ಲಿ ನೆಲೆಸಿರುವ ಬ್ರಹ್ಮಾವರದ ಬಿರ್ತಿಯ ವಿಷ್ಣುಮೂರ್ತಿ ಆಚಾರಿ ಅವರ ಪುತ್ರ ಚೈತನ್ಯ (25) ಮೃತರು. ಕೋವಿಡ್–19 ಕಾರಣದಿಂದ ವೃತ್ತಿಯಲ್ಲಿದ್ದ್ ಕಂಪನಿಯಲ್ಲಿ ಕೆಲಸ ಕಡಿಮೆಯಾಗಿ ಊರಿಗೆ ಬರುತ್ತಿರುವುದಾಗಿ ತಿಳಿಸಿದ್ದ ಅವರು, ಸೋಮವಾರ ರಾತ್ರಿ ಬೆಂಗಳೂರಿನಿಂದ ಖಾಸಗಿ ಬಸ್ನಲ್ಲಿ ಬಂದಿದ್ದರು. ಮಂಗಳವಾರ ಬೆಳಿಗ್ಗೆ 6.30 ಕ್ಕೆ ಮನೆಗೆ ಕರೆ ಮಾಡಿದ್ದ ಅವರು ಬಾರ್ಕೂರು ಸಮೀಪದಲ್ಲಿ ಬರುತ್ತಿರುವುದಾಗಿ ತಿಳಿಸಿದ್ದರು.