<p><strong>ಉಡುಪಿ: </strong>‘ಕಾನೂನು ಬಾಹಿರವಾಗಿ ಕೆಲಸ ಮಾಡಲು ಸಾಧ್ಯವಿಲ್ಲ’ ಎಂಬ ಹೆಬ್ರಿ ವಲಯ ಅರಣ್ಯಾಧಿಕಾರಿ ಮುನಿರಾಜ್ ಮಾತಿಗೆ ರೊಚ್ಚಿಗೆದ್ದ ಉಡುಪಿ ಶಾಸಕ ರಘುಪತಿ ಭಟ್, ಅಧಿಕಾರಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ಸೋಮವಾರ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಡೆಯಿತು.</p>.<p>ಹೆಬ್ರಿ ವಲಯ ಅರಣ್ಯಾಧಿಕಾರಿ ಕಚೇರಿ ವ್ಯಾಪ್ತಿಯ ಉಡುಪಿ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ರಸ್ತೆ ವಿಚಾರಕ್ಕೆ ಸಂಬಂಧಿಸಿದಂತೆ ಅರಣ್ಯಾಧಿಕಾರಿ ಮುನಿರಾಜ್ ಅವರನ್ನು ಸಭೆಗೆ ಕರೆಸಲಾಗಿತ್ತು. ಮೀಸಲು ಅರಣ್ಯದಲ್ಲಿರುವ ರಸ್ತೆ ನಿರ್ಮಿಸಲು ಅನುಮತಿ ನೀಡದ ಹಿನ್ನೆಲೆಯಲ್ಲಿ ಮುನಿರಾಜ್ ವಿರುದ್ಧ ಶಾಸಕರು ತೀವ್ರ ವಾಗ್ದಾಳಿ ನಡೆಸಿದರು.</p>.<p>ಇದಕ್ಕೆ ಉತ್ತರಿಸಿದ ಮುನಿರಾಜ್, ‘ಕಾನೂನಿನಲ್ಲಿ ಅವಕಾಶ ಇರುವ ಕೆಲಸವನ್ನು ಮಾತ್ರ ಮಾಡುತ್ತೇನೆ. ತಪ್ಪು ಕಂಡುಬಂದರೆ ಮೇಲಾಧಿಕಾರಿಗಳಿಗೆ ದೂರು ನೀಡಬಹುದು. ಕಾನೂನು ಬಾಹಿರ ಕೆಲಸ ಮಾಡಲು ಸಾಧ್ಯವಿಲ್ಲ ಎಂದು’ ಸಭೆಗೆ ಏರುಧ್ವನಿಯಲ್ಲಿ ಹೇಳಿದರು</p>.<p>ಇದರಿಂದ ಕೆರಳಿದ ಶಾಸಕರು, ‘ಮೇಲಧಿಕಾರಿಗೆ ಹೇಳುವ ವಿಚಾರ ತಿಳಿದಿದೆ. ಬುದ್ಧಿವಾದ ಹೇಳಿಸಿಕೊಳ್ಳಬೇಕಾದ ಅವಶ್ಯಕತೆ ಇಲ್ಲ ಎಂದು ಏಕವಚನದಲ್ಲಿಯೇ ಸಂಬೋಧಿಸಿದರು.</p>.<p>‘ಆರ್ಎಫ್ಒ ಆಗಿ ಕೆಲಸ ಮಾಡಲು ಬಂದಿದ್ದು, ಅದರಂತೆ ಕೆಲಸ ಮಾಡಬೇಕು. ಕಾನೂನಿನಲ್ಲಿ ಇದ್ದದನ್ನು ಮಾಡುವುದ ಸರಿಯಲ್ಲ. ರಸ್ತೆ ವಿಸ್ತರಣೆ ಮಾಡುವುದಕ್ಕೂ ಅಡ್ಡಿಪಡಿಸುತ್ತೀರಾ ಅಂದರೆ ಏನು ಅರ್ಥ’ ಎಂದು ತೀವ್ರ ತರಾಟೆಗೆ ತೆಗೆದುಕೊಂಡರು.</p>.<p>ಶಾಸಕರ ಮಾತಿನಿಂದ ಸಿಟ್ಟಿಗೆದ್ದ ಅಧಿಕಾರಿ ಮುನಿರಾಜ್, ‘ನಾನು ಕೂಡ ಜವಾಬ್ದಾರಿಯುತ ಸ್ಥಾನದಲ್ಲಿರುವ ಅಧಿಕಾರಿಯಾಗಿದ್ದು, ಕಾನೂನು ಮೀರಿ ಕೆಲಸ ಮಾಡಲು ಸಾಧ್ಯವಿಲ್ಲ. ಅಲ್ಲಿರುವ ರಸ್ತೆಯೇ ಕಾನೂನು ಬಾಹಿರ’ ಎಂದರು.</p>.<p>‘ಕಾನೂನು ಬಾಹಿರ ರಸ್ತೆ ನಿರ್ಮಿಸಿದ್ದು ಯಾರ ತಪ್ಪು ಎಂದಾಗ,ನನ್ನದಲ್ಲ ಎಂದು ಪ್ರತ್ಯುತ್ತರ ನೀಡಿದರು. ಇದರಿಂದ ಮತ್ತಷ್ಟು ಆಕ್ರೋಶಗೊಂಡ ಶಾಸಕರು, ‘ಸರಿಯಾಗಿ ಮಾತನಾಡುವುದನ್ನು ಕಲಿಯಬೇಕು, ಉದ್ಧಟತನ ಪ್ರದರ್ಶಿಸುವುದು ಸರಿಯಲ್ಲ’ ಎಂದು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.</p>.<p>ಅಧಿಕಾರಿಗಳ ಸಾಲಿನಲ್ಲಿ ಕುಳಿತಿದ್ದ ಮುನಿರಾಜ್ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ ಶಾಸಕರು, ‘ಜನಪ್ರತಿನಿಧಿಯ ಸಾಲಿನಲ್ಲಿ ಕುಳಿತುಕೊಂಡದ್ದು ಏಕೆ, ನೀನೇನು ಜನಪ್ರತಿನಿಧಿಯೇ. ಇಲ್ಲಿ ಬಂದು (ಅಧಿಕಾರಿಗಳ ಸಾಲಿನಲ್ಲಿ) ಕುಳಿತುಕೊಳ್ಳಿ’ ಎಂದು ಅಧಿಕಾರಿಯ ವಿರುದ್ಧ ಗುಡುಗಿದರು.</p>.<p>‘ಸರ್ಕಾರಿ ಅಧಿಕಾರಿಗಳು ಅಧಿಕಾರಿಗಳಂತೆ ವರ್ತಿಸಬೇಕು. ಜನಪ್ರತಿನಿಧಿಗಳ ಜತೆ ಸರಿಯಾಗಿ ಹಾಗೂ ಸಭೆಯ ಘನತೆಗೆ ತಕ್ಕಂತೆ ಮಾತನಾಡಬೇಕು. ಎಲ್ಲಿಂದಲೋ ಬಂದು ಏನೇನೋ ಮಾತನಾಡುವುದಲ್ಲ. ಅಧಿಕಾರಿಗಳಿಗೆ ವಾದ ಮಾಡಲು ಇರುವ ಸಭೆ ಇದಲ್ಲ’ ಎಂದು ಶಾಸಕರು ಅಧಿಕಾರಿಯ ವಿರುದ್ಧ ಆಕ್ರೋಶ ಹೊರಹಾಕಿದರು.</p>.<p>ಅರಣ್ಯಾಧಿಕಾರಿ ವಿರುದ್ಧ ಆಕ್ರೋಶ: ಬ್ರಹ್ಮಾವರ ರಸ್ತೆ ವಿಸ್ತರಣೆ ವಿಚಾರಕ್ಕೆ ಸಂಬಂಧಿಸಿದಂತೆ ಮರಗಳತೆರವಿಗೆ ಅವಕಾಶ ನೀಡಿಲ್ಲ ಎಂಬ ಕಾರಣಕ್ಕೆ ಉಡುಪಿ ವಲಯ ಅರಣ್ಯಾಧಿಕಾರಿ ಕ್ಲಿಫರ್ಡ್ ಲೋಬೊ ಅವರನ್ನೂ ಶಾಸಕರು ತೀವ್ರ ತರಾಟೆಗೆ ತೆಗೆದುಕೊಂಡರು.</p>.<p>‘ವನಮಹೋತ್ಸವಕ್ಕೆ ನೆಟ್ಟ ಗಿಡಗಳನ್ನು ರಸ್ತೆ ವಿಸ್ತರಣೆಗೆ ಕಡಿಯಲು ಬಿಡದಿದ್ದರೆ, ಮುಂದೆ ವನಮಹೋತ್ಸವ ಆಚರಿಸಲು ಬಿಡುವುದಿಲ್ಲ. ರಸ್ತೆ ಅಭಿವೃದ್ಧಿಗೆ ಸರ್ಕಾರದಿಂದ ಕಾಡಿಬೇಡಿ ಅನುದಾನ ತರುತ್ತೇವೆ. ಡೀಮ್ಡ್ ಫಾರೆಸ್ಟ್ ನೆಪವೊಡ್ಡಿ ಅಭಿವೃದ್ಧಿಗೆ ಅನುಮತಿ ನೀಡುತ್ತಿಲ್ಲ.</p>.<p>ಡೀಮ್ಡ್ ಫಾರೆಸ್ಟ್ ಪದವೇ ಅರಣ್ಯ ಇಲಾಖೆಯ ಕಾನೂನಿನಲ್ಲಿ ಇಲ್ಲ. ಬೆಳಸಿರುವ ಅಕೇಶಿಯಾ ಮರಗಳನ್ನು ಮೊದಲು ತೆರವು ಮಾಡಿ. ರಸ್ತೆ ವಿಸ್ತರಣೆಗೆ ತಡೆಯಾಗುವ ಮರಗಳ ರಕ್ಷಣೆ ಮಾಡುವುದರಿಂದ ಊರು ಉದ್ಧಾರ ಮಾಡಲು ಆಗುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಡುಪಿ: </strong>‘ಕಾನೂನು ಬಾಹಿರವಾಗಿ ಕೆಲಸ ಮಾಡಲು ಸಾಧ್ಯವಿಲ್ಲ’ ಎಂಬ ಹೆಬ್ರಿ ವಲಯ ಅರಣ್ಯಾಧಿಕಾರಿ ಮುನಿರಾಜ್ ಮಾತಿಗೆ ರೊಚ್ಚಿಗೆದ್ದ ಉಡುಪಿ ಶಾಸಕ ರಘುಪತಿ ಭಟ್, ಅಧಿಕಾರಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ಸೋಮವಾರ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಡೆಯಿತು.</p>.<p>ಹೆಬ್ರಿ ವಲಯ ಅರಣ್ಯಾಧಿಕಾರಿ ಕಚೇರಿ ವ್ಯಾಪ್ತಿಯ ಉಡುಪಿ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ರಸ್ತೆ ವಿಚಾರಕ್ಕೆ ಸಂಬಂಧಿಸಿದಂತೆ ಅರಣ್ಯಾಧಿಕಾರಿ ಮುನಿರಾಜ್ ಅವರನ್ನು ಸಭೆಗೆ ಕರೆಸಲಾಗಿತ್ತು. ಮೀಸಲು ಅರಣ್ಯದಲ್ಲಿರುವ ರಸ್ತೆ ನಿರ್ಮಿಸಲು ಅನುಮತಿ ನೀಡದ ಹಿನ್ನೆಲೆಯಲ್ಲಿ ಮುನಿರಾಜ್ ವಿರುದ್ಧ ಶಾಸಕರು ತೀವ್ರ ವಾಗ್ದಾಳಿ ನಡೆಸಿದರು.</p>.<p>ಇದಕ್ಕೆ ಉತ್ತರಿಸಿದ ಮುನಿರಾಜ್, ‘ಕಾನೂನಿನಲ್ಲಿ ಅವಕಾಶ ಇರುವ ಕೆಲಸವನ್ನು ಮಾತ್ರ ಮಾಡುತ್ತೇನೆ. ತಪ್ಪು ಕಂಡುಬಂದರೆ ಮೇಲಾಧಿಕಾರಿಗಳಿಗೆ ದೂರು ನೀಡಬಹುದು. ಕಾನೂನು ಬಾಹಿರ ಕೆಲಸ ಮಾಡಲು ಸಾಧ್ಯವಿಲ್ಲ ಎಂದು’ ಸಭೆಗೆ ಏರುಧ್ವನಿಯಲ್ಲಿ ಹೇಳಿದರು</p>.<p>ಇದರಿಂದ ಕೆರಳಿದ ಶಾಸಕರು, ‘ಮೇಲಧಿಕಾರಿಗೆ ಹೇಳುವ ವಿಚಾರ ತಿಳಿದಿದೆ. ಬುದ್ಧಿವಾದ ಹೇಳಿಸಿಕೊಳ್ಳಬೇಕಾದ ಅವಶ್ಯಕತೆ ಇಲ್ಲ ಎಂದು ಏಕವಚನದಲ್ಲಿಯೇ ಸಂಬೋಧಿಸಿದರು.</p>.<p>‘ಆರ್ಎಫ್ಒ ಆಗಿ ಕೆಲಸ ಮಾಡಲು ಬಂದಿದ್ದು, ಅದರಂತೆ ಕೆಲಸ ಮಾಡಬೇಕು. ಕಾನೂನಿನಲ್ಲಿ ಇದ್ದದನ್ನು ಮಾಡುವುದ ಸರಿಯಲ್ಲ. ರಸ್ತೆ ವಿಸ್ತರಣೆ ಮಾಡುವುದಕ್ಕೂ ಅಡ್ಡಿಪಡಿಸುತ್ತೀರಾ ಅಂದರೆ ಏನು ಅರ್ಥ’ ಎಂದು ತೀವ್ರ ತರಾಟೆಗೆ ತೆಗೆದುಕೊಂಡರು.</p>.<p>ಶಾಸಕರ ಮಾತಿನಿಂದ ಸಿಟ್ಟಿಗೆದ್ದ ಅಧಿಕಾರಿ ಮುನಿರಾಜ್, ‘ನಾನು ಕೂಡ ಜವಾಬ್ದಾರಿಯುತ ಸ್ಥಾನದಲ್ಲಿರುವ ಅಧಿಕಾರಿಯಾಗಿದ್ದು, ಕಾನೂನು ಮೀರಿ ಕೆಲಸ ಮಾಡಲು ಸಾಧ್ಯವಿಲ್ಲ. ಅಲ್ಲಿರುವ ರಸ್ತೆಯೇ ಕಾನೂನು ಬಾಹಿರ’ ಎಂದರು.</p>.<p>‘ಕಾನೂನು ಬಾಹಿರ ರಸ್ತೆ ನಿರ್ಮಿಸಿದ್ದು ಯಾರ ತಪ್ಪು ಎಂದಾಗ,ನನ್ನದಲ್ಲ ಎಂದು ಪ್ರತ್ಯುತ್ತರ ನೀಡಿದರು. ಇದರಿಂದ ಮತ್ತಷ್ಟು ಆಕ್ರೋಶಗೊಂಡ ಶಾಸಕರು, ‘ಸರಿಯಾಗಿ ಮಾತನಾಡುವುದನ್ನು ಕಲಿಯಬೇಕು, ಉದ್ಧಟತನ ಪ್ರದರ್ಶಿಸುವುದು ಸರಿಯಲ್ಲ’ ಎಂದು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.</p>.<p>ಅಧಿಕಾರಿಗಳ ಸಾಲಿನಲ್ಲಿ ಕುಳಿತಿದ್ದ ಮುನಿರಾಜ್ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ ಶಾಸಕರು, ‘ಜನಪ್ರತಿನಿಧಿಯ ಸಾಲಿನಲ್ಲಿ ಕುಳಿತುಕೊಂಡದ್ದು ಏಕೆ, ನೀನೇನು ಜನಪ್ರತಿನಿಧಿಯೇ. ಇಲ್ಲಿ ಬಂದು (ಅಧಿಕಾರಿಗಳ ಸಾಲಿನಲ್ಲಿ) ಕುಳಿತುಕೊಳ್ಳಿ’ ಎಂದು ಅಧಿಕಾರಿಯ ವಿರುದ್ಧ ಗುಡುಗಿದರು.</p>.<p>‘ಸರ್ಕಾರಿ ಅಧಿಕಾರಿಗಳು ಅಧಿಕಾರಿಗಳಂತೆ ವರ್ತಿಸಬೇಕು. ಜನಪ್ರತಿನಿಧಿಗಳ ಜತೆ ಸರಿಯಾಗಿ ಹಾಗೂ ಸಭೆಯ ಘನತೆಗೆ ತಕ್ಕಂತೆ ಮಾತನಾಡಬೇಕು. ಎಲ್ಲಿಂದಲೋ ಬಂದು ಏನೇನೋ ಮಾತನಾಡುವುದಲ್ಲ. ಅಧಿಕಾರಿಗಳಿಗೆ ವಾದ ಮಾಡಲು ಇರುವ ಸಭೆ ಇದಲ್ಲ’ ಎಂದು ಶಾಸಕರು ಅಧಿಕಾರಿಯ ವಿರುದ್ಧ ಆಕ್ರೋಶ ಹೊರಹಾಕಿದರು.</p>.<p>ಅರಣ್ಯಾಧಿಕಾರಿ ವಿರುದ್ಧ ಆಕ್ರೋಶ: ಬ್ರಹ್ಮಾವರ ರಸ್ತೆ ವಿಸ್ತರಣೆ ವಿಚಾರಕ್ಕೆ ಸಂಬಂಧಿಸಿದಂತೆ ಮರಗಳತೆರವಿಗೆ ಅವಕಾಶ ನೀಡಿಲ್ಲ ಎಂಬ ಕಾರಣಕ್ಕೆ ಉಡುಪಿ ವಲಯ ಅರಣ್ಯಾಧಿಕಾರಿ ಕ್ಲಿಫರ್ಡ್ ಲೋಬೊ ಅವರನ್ನೂ ಶಾಸಕರು ತೀವ್ರ ತರಾಟೆಗೆ ತೆಗೆದುಕೊಂಡರು.</p>.<p>‘ವನಮಹೋತ್ಸವಕ್ಕೆ ನೆಟ್ಟ ಗಿಡಗಳನ್ನು ರಸ್ತೆ ವಿಸ್ತರಣೆಗೆ ಕಡಿಯಲು ಬಿಡದಿದ್ದರೆ, ಮುಂದೆ ವನಮಹೋತ್ಸವ ಆಚರಿಸಲು ಬಿಡುವುದಿಲ್ಲ. ರಸ್ತೆ ಅಭಿವೃದ್ಧಿಗೆ ಸರ್ಕಾರದಿಂದ ಕಾಡಿಬೇಡಿ ಅನುದಾನ ತರುತ್ತೇವೆ. ಡೀಮ್ಡ್ ಫಾರೆಸ್ಟ್ ನೆಪವೊಡ್ಡಿ ಅಭಿವೃದ್ಧಿಗೆ ಅನುಮತಿ ನೀಡುತ್ತಿಲ್ಲ.</p>.<p>ಡೀಮ್ಡ್ ಫಾರೆಸ್ಟ್ ಪದವೇ ಅರಣ್ಯ ಇಲಾಖೆಯ ಕಾನೂನಿನಲ್ಲಿ ಇಲ್ಲ. ಬೆಳಸಿರುವ ಅಕೇಶಿಯಾ ಮರಗಳನ್ನು ಮೊದಲು ತೆರವು ಮಾಡಿ. ರಸ್ತೆ ವಿಸ್ತರಣೆಗೆ ತಡೆಯಾಗುವ ಮರಗಳ ರಕ್ಷಣೆ ಮಾಡುವುದರಿಂದ ಊರು ಉದ್ಧಾರ ಮಾಡಲು ಆಗುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>