<p><strong>ಉಡುಪಿ:</strong> ಜನಗಣಮನ ರಾಷ್ಟ್ರಗೀತೆಯಾದರೆ ಗಾಯತ್ರಿ ಮಂತ್ರ ವಿಶ್ವಗೀತೆ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳು ಹೇಳಿದರು.</p>.<p>ಕೃಷ್ಣಮಠದ ರಾಜಾಂಗಣದಲ್ಲಿ ಶನಿವಾರ ಆರಂಭವಾದತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಶ್ರೀಗಳು ಗಾಯತ್ರಿ ಮಂತ್ರಕ್ಕೆ ಜಗತ್ತಿನ ಕಲ್ಯಾಣ ಮಾಡುವ ಶಕ್ತಿಯಿದ್ದು, ಪ್ರತಿದಿನ ಬ್ರಾಹ್ಮಣರು ಜಪಿಸಬೇಕು ಎಂದರು.</p>.<p>ತುಳು ಶಿವಳ್ಳಿ ಬ್ರಾಹ್ಮಣ ಸಮಾಜವು ಸಂಕುಚಿತ ಸಂಘಟನೆ ಎಂಬ ಭಾವನೆ ಕೆಲವರಲ್ಲಿದೆ.ದೇವಸ್ಥಾನಕ್ಕೆ ಗರ್ಭಗುಡಿ, ಕುಂಭ ಪ್ರತಿಷ್ಠೆ, ಮೇಲೊಂದು ದೊಡ್ಡ ಪ್ರತಿಷ್ಠೆ ಇರುವಂತೆ,ಹಿಂದೂ ಸಮಾಜದಲ್ಲಿ ಬ್ರಾಹ್ಮಣ ಸಮುದಾಯ, ಅದರೊಳಗೊಂದು ತುಳು ಶಿವಳ್ಳಿ ಬ್ರಾಹ್ಮಣ ಸಮಾಜ ಇದೆ ಎಂದರು.</p>.<p>ಎಲ್ಲ ಬ್ರಾಹ್ಮಣ ಸಮುದಾಯಗಳು ಒಂದಕ್ಕೊಂದು ಪೂರಕವಾಗಿದೆವೆಯೇ ಹೊರತು ಬೇರೆಯಾಗಿಲ್ಲ. ಹಿಂದೂ ಸಮಾಜ ಗಟ್ಟಿಯಾಗಬೇಕಾದರೆ ಶಿವಳ್ಳಿ, ಹವ್ಯಕ ಹಾಗೂ ಕೋಟ ಬ್ರಾಹ್ಮಣರು ಸಂಘಟಿತರಾಗಬೇಕು ಎಂದು ಶ್ರೀಗಳು ಕರೆ ನೀಡಿದರು.</p>.<p>ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾಗಿರುವ ತುಳು ಮೇಲೆವಿಶೇಷ ಅಭಿಮಾನ ಇರಲಿ. ತಂದೆ ತಾಯಿಗೆ<br />ಕೊಡುವ ಗೌರವ, ಪ್ರೀತಿ, ಪ್ರೇಮ ತುಳು ಭಾಷೆಗೂ ಸಿಗಲಿ. ತುಳು ಹೆತ್ತ ತಾಯಿ ಇದ್ದಂತೆ ಎಂದು ಶ್ರೀಗಳು ವ್ಯಾಖ್ಯಾನಿಸಿದರು.</p>.<p>ಧಾರ್ಮಿಕ ಸಮಾವೇಶ, ಉದ್ಯಮ ಶೀಲತಾ ಸಮಾವೇಶ, ಶೈಕ್ಷಣಿಕ ಸಮಾವೇಶ, ‘ತುಳು ಶಿವಳ್ಳಿ ಸಮಾಜ ಅಂದು ಇಂದು ಮುಂದು’ ವಿಷಯದ ಕುರಿತು ವಿಚಾರಗೋಷ್ಠಿ ನಡೆಯಿತು.</p>.<p>ಪಲಿಮಾರು ವಿದ್ಯಾಧೀಶ ಸ್ವಾಮೀಜಿ, ಕೃಷ್ಣಾಪುರ ಮಠದ ವಿದ್ಯಾಸಾಗರ ಸ್ವಾಮೀಜಿ, ಪೇಜಾವರ ಕಿರಿಯ ಯತಿ ವಿಶ್ವಪ್ರಸನ್ನ ಸ್ವಾಮೀಜಿ, ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ಸ್ವಾಮೀಜಿ, ಪಲಿಮಾರು ಕಿರಿಯ ಯತಿ ವಿದ್ಯಾರಾಜೇಶ್ವರ ಸ್ವಾಮೀಜಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಡುಪಿ:</strong> ಜನಗಣಮನ ರಾಷ್ಟ್ರಗೀತೆಯಾದರೆ ಗಾಯತ್ರಿ ಮಂತ್ರ ವಿಶ್ವಗೀತೆ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳು ಹೇಳಿದರು.</p>.<p>ಕೃಷ್ಣಮಠದ ರಾಜಾಂಗಣದಲ್ಲಿ ಶನಿವಾರ ಆರಂಭವಾದತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಶ್ರೀಗಳು ಗಾಯತ್ರಿ ಮಂತ್ರಕ್ಕೆ ಜಗತ್ತಿನ ಕಲ್ಯಾಣ ಮಾಡುವ ಶಕ್ತಿಯಿದ್ದು, ಪ್ರತಿದಿನ ಬ್ರಾಹ್ಮಣರು ಜಪಿಸಬೇಕು ಎಂದರು.</p>.<p>ತುಳು ಶಿವಳ್ಳಿ ಬ್ರಾಹ್ಮಣ ಸಮಾಜವು ಸಂಕುಚಿತ ಸಂಘಟನೆ ಎಂಬ ಭಾವನೆ ಕೆಲವರಲ್ಲಿದೆ.ದೇವಸ್ಥಾನಕ್ಕೆ ಗರ್ಭಗುಡಿ, ಕುಂಭ ಪ್ರತಿಷ್ಠೆ, ಮೇಲೊಂದು ದೊಡ್ಡ ಪ್ರತಿಷ್ಠೆ ಇರುವಂತೆ,ಹಿಂದೂ ಸಮಾಜದಲ್ಲಿ ಬ್ರಾಹ್ಮಣ ಸಮುದಾಯ, ಅದರೊಳಗೊಂದು ತುಳು ಶಿವಳ್ಳಿ ಬ್ರಾಹ್ಮಣ ಸಮಾಜ ಇದೆ ಎಂದರು.</p>.<p>ಎಲ್ಲ ಬ್ರಾಹ್ಮಣ ಸಮುದಾಯಗಳು ಒಂದಕ್ಕೊಂದು ಪೂರಕವಾಗಿದೆವೆಯೇ ಹೊರತು ಬೇರೆಯಾಗಿಲ್ಲ. ಹಿಂದೂ ಸಮಾಜ ಗಟ್ಟಿಯಾಗಬೇಕಾದರೆ ಶಿವಳ್ಳಿ, ಹವ್ಯಕ ಹಾಗೂ ಕೋಟ ಬ್ರಾಹ್ಮಣರು ಸಂಘಟಿತರಾಗಬೇಕು ಎಂದು ಶ್ರೀಗಳು ಕರೆ ನೀಡಿದರು.</p>.<p>ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾಗಿರುವ ತುಳು ಮೇಲೆವಿಶೇಷ ಅಭಿಮಾನ ಇರಲಿ. ತಂದೆ ತಾಯಿಗೆ<br />ಕೊಡುವ ಗೌರವ, ಪ್ರೀತಿ, ಪ್ರೇಮ ತುಳು ಭಾಷೆಗೂ ಸಿಗಲಿ. ತುಳು ಹೆತ್ತ ತಾಯಿ ಇದ್ದಂತೆ ಎಂದು ಶ್ರೀಗಳು ವ್ಯಾಖ್ಯಾನಿಸಿದರು.</p>.<p>ಧಾರ್ಮಿಕ ಸಮಾವೇಶ, ಉದ್ಯಮ ಶೀಲತಾ ಸಮಾವೇಶ, ಶೈಕ್ಷಣಿಕ ಸಮಾವೇಶ, ‘ತುಳು ಶಿವಳ್ಳಿ ಸಮಾಜ ಅಂದು ಇಂದು ಮುಂದು’ ವಿಷಯದ ಕುರಿತು ವಿಚಾರಗೋಷ್ಠಿ ನಡೆಯಿತು.</p>.<p>ಪಲಿಮಾರು ವಿದ್ಯಾಧೀಶ ಸ್ವಾಮೀಜಿ, ಕೃಷ್ಣಾಪುರ ಮಠದ ವಿದ್ಯಾಸಾಗರ ಸ್ವಾಮೀಜಿ, ಪೇಜಾವರ ಕಿರಿಯ ಯತಿ ವಿಶ್ವಪ್ರಸನ್ನ ಸ್ವಾಮೀಜಿ, ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ಸ್ವಾಮೀಜಿ, ಪಲಿಮಾರು ಕಿರಿಯ ಯತಿ ವಿದ್ಯಾರಾಜೇಶ್ವರ ಸ್ವಾಮೀಜಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>