ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೀರೂರು ಶ್ರೀಗಳಿಂದ ತೆರಿಗೆ ವಂಚನೆ ಇಲ್ಲ: ಕಾನೂನು ಹೋರಾಟ ಎಚ್ಚರಿಕೆ

Last Updated 9 ಡಿಸೆಂಬರ್ 2020, 15:29 IST
ಅಕ್ಷರ ಗಾತ್ರ

ಉಡುಪಿ: ಶೀರೂರು ಮಠದ ದಿ.ಲಕ್ಷ್ಮೀವರ ತೀರ್ಥ ಸ್ವಾಮೀಜಿ ಕೋಟ್ಯಂತರ ರೂಪಾಯಿ ಆದಾಯ ತೆರಿಗೆ ಬಾಕಿ ಉಳಿಸಿಕೊಂಡಿದ್ದರು ಎಂಬ ಆರೋಪ ಸರಿಯಲ್ಲ. ಶ್ರೀಗಳ ವಿರುದ್ಧದ ಆರೋಪದಿಂದ ಮಠದ ಭಕ್ತರಿಗೆ ಹಾಗೂ ಅನುಯಾಯಿಗಳಿಗೆ ನೋವುಂಟಾಗಿದೆ ಎಂದು ಶೀರೂರು ಮಠ ಭಕ್ತ ಸಮಿತಿ ತಿಳಿಸಿದೆ.

ಈಚೆಗೆ ಶೀರೂರು ಮಠದಲ್ಲಿ ಸೋದೆ ಮಠದ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಹಾಗೂ ಪಲಿಮಾರು ಮಠದ ವಿದ್ಯಾಧೀಶ ತೀರ್ಥ ಸ್ವಾಮೀಜಿಯ ನೇತೃತ್ವದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಲಕ್ಷ್ಮೀವರ ತೀರ್ಥರು ಕೋಟ್ಯಂತರ ರೂಪಾಯಿ ಆದಾಯ ತೆರಿಗೆ ಬಾಕಿ ಉಳಿಸಿಕೊಂಡಿದ್ದ ಬಗ್ಗೆ ಪ್ರಸ್ತಾಪಿಸಲಾಗಿದೆ. ಮಠದ 2017 ಹಾಗೂ 18ರ ಆಡಳಿತದ ಅವಧಿಯಲ್ಲಿನ ತೆರಿಗೆ ಪಾವತಿಯ ವಿವರಗಳು ಲಭ್ಯವಿದೆ.

ಆದಾಯ ತೆರಿಗೆ ಇಲಾಖೆ ನೋಟಿಸ್‌ ಜಾರಿಮಾಡಿದ ಕೂಡಲೇ ಮಠದ ಆದಾಯ ವಿವರವನ್ನು ಮಾಧ್ಯಮಗಳಲ್ಲಿ ಬಹಿರಂಗಪಡಿಸುವುದು ದುರುದ್ದೇಶಪೂರಿತ ಹಾಗೂ ಕಾನೂನಿಗೆ ವಿರುದ್ಧ. ಇದರ ವಿರುದ್ಧ ಕಾನೂನು ಹೋರಾಟ ಮಾಡುವುದಾಗಿ ಶೀರೂರು ಮಠದ ಭಕ್ತ ಸಮಿತಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT