<p><strong>ಉಡುಪಿ: </strong>ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ಗೆ ನಾಮ ನಿರ್ದೇಶನ ಮಾಡಿರುವುದು ವೈಯಕ್ತಿಕವಾಗಿ ಸಂತಸವಾಗಿದೆ. ರಾಮಮಂದಿರ ಸ್ಥಾಪನೆ ವಿಚಾರವಾಗಿ ವಿಶ್ವೇಶತೀರ್ಥರ ಹೋರಾಟಕ್ಕೆ ಸಂದ ಗೌರವ ಇದಾಗಿದೆ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರು ಅಭಿಪ್ರಾಯಪಟ್ಟರು.</p>.<p>ಪೇಜಾವರ ಮಠದಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು,ದಕ್ಷಿಣ ಭಾರತದಿಂದ ಟ್ರಸ್ಟ್ಗೆ ಆಯ್ಕೆಯಾದ ಏಕೈಕ ಸಂತ ಎಂಬುದು ಹೆಮ್ಮೆಯ ವಿಚಾರ. ಬಹುದೊಡ್ಡ ಜವಾಬ್ದಾರಿ ಹೆಗಲೇರಿದ್ದು, ಭಕ್ತರ ಸಹಕಾರದಿಂದ ನಿಭಾಯಿಸುತ್ತೇನೆ ಎಂದರು.</p>.<p>ನೇಮಕಾತಿ ಪತ್ರಕ್ಕೆ ಪ್ರತಿಯಾಗಿ ಸ್ವೀಕೃತಿ ಪತ್ರವನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿದೆ. ಬಳಿಕ ಟ್ರಸ್ಟ್ ಅಧಿಕೃತವಾಗಿ ಅಸ್ತಿತ್ವಕ್ಕೆ ಬರಲಿದ್ದು, ಮುಂದಿನ ಸಭೆಗಳಲ್ಲಿ ರಾಮಮಂದಿರ ನಿರ್ಮಾಣದ ಕಾರ್ಯಯೋಜನೆಯ ಕುರಿತು ಚರ್ಚೆಗಳು ನಡೆಯಲಿವೆ ಎಂದರು.</p>.<p>‘ಹಿಂದೆ, ವಿಶ್ವಹಿಂದೂ ಪರಿಷತ್ನ ಸಭೆಯಲ್ಲಿ ಟ್ರಸ್ಟ್ ರಚನೆ ವಿಚಾರವಾಗಿ ಚರ್ಚೆ ನಡೆದು ವಿಶ್ವೇಶ ಶ್ರೀಗಳ ಹೆಸರು ಸೂಚಿತವಾಗಿತ್ತು. ಆದರೆ, ಹಿರಿಯ ಶ್ರೀಗಳು ವಯಸ್ಸಿನ ಕಾರಣ ನೀಡಿ, ಸ್ಥಾನವನ್ನು ನನಗೆ ಬಿಟ್ಟುಕೊಟ್ಟಿದ್ದರು. ಈಗ ಅಧಿಕೃತ ಆದೇಶ ಹೊರಬಿದ್ದಿದೆ’ ಎಂದು ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದರು.</p>.<p>ರಾಮಮಂದಿರ ನಿರ್ಮಾಣ ವಿಚಾರವಾಗಿ ಉತ್ತರ ಭಾರತದಲ್ಲಿ ನಡೆದ ಸಭೆಗಳಲ್ಲಿ ಹಿರಿಯ ಗುರುಗಳ ಜತೆ ಭಾಗಿಯಾಗಿದ್ದೇನೆ. ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣವಾಗಬೇಕು, ಯಾತ್ರಾತ್ರಿಗಳಿಗೆ ವಾಸ್ತವ್ಯ ಸೇರಿದಂತೆ ಅಗತ್ಯ ಅನುಕೂಲಗಳಿರಬೇಕು ಎಂಬ ಅಭಿಪ್ರಾಯಗಳಿವೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಡುಪಿ: </strong>ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ಗೆ ನಾಮ ನಿರ್ದೇಶನ ಮಾಡಿರುವುದು ವೈಯಕ್ತಿಕವಾಗಿ ಸಂತಸವಾಗಿದೆ. ರಾಮಮಂದಿರ ಸ್ಥಾಪನೆ ವಿಚಾರವಾಗಿ ವಿಶ್ವೇಶತೀರ್ಥರ ಹೋರಾಟಕ್ಕೆ ಸಂದ ಗೌರವ ಇದಾಗಿದೆ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರು ಅಭಿಪ್ರಾಯಪಟ್ಟರು.</p>.<p>ಪೇಜಾವರ ಮಠದಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು,ದಕ್ಷಿಣ ಭಾರತದಿಂದ ಟ್ರಸ್ಟ್ಗೆ ಆಯ್ಕೆಯಾದ ಏಕೈಕ ಸಂತ ಎಂಬುದು ಹೆಮ್ಮೆಯ ವಿಚಾರ. ಬಹುದೊಡ್ಡ ಜವಾಬ್ದಾರಿ ಹೆಗಲೇರಿದ್ದು, ಭಕ್ತರ ಸಹಕಾರದಿಂದ ನಿಭಾಯಿಸುತ್ತೇನೆ ಎಂದರು.</p>.<p>ನೇಮಕಾತಿ ಪತ್ರಕ್ಕೆ ಪ್ರತಿಯಾಗಿ ಸ್ವೀಕೃತಿ ಪತ್ರವನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿದೆ. ಬಳಿಕ ಟ್ರಸ್ಟ್ ಅಧಿಕೃತವಾಗಿ ಅಸ್ತಿತ್ವಕ್ಕೆ ಬರಲಿದ್ದು, ಮುಂದಿನ ಸಭೆಗಳಲ್ಲಿ ರಾಮಮಂದಿರ ನಿರ್ಮಾಣದ ಕಾರ್ಯಯೋಜನೆಯ ಕುರಿತು ಚರ್ಚೆಗಳು ನಡೆಯಲಿವೆ ಎಂದರು.</p>.<p>‘ಹಿಂದೆ, ವಿಶ್ವಹಿಂದೂ ಪರಿಷತ್ನ ಸಭೆಯಲ್ಲಿ ಟ್ರಸ್ಟ್ ರಚನೆ ವಿಚಾರವಾಗಿ ಚರ್ಚೆ ನಡೆದು ವಿಶ್ವೇಶ ಶ್ರೀಗಳ ಹೆಸರು ಸೂಚಿತವಾಗಿತ್ತು. ಆದರೆ, ಹಿರಿಯ ಶ್ರೀಗಳು ವಯಸ್ಸಿನ ಕಾರಣ ನೀಡಿ, ಸ್ಥಾನವನ್ನು ನನಗೆ ಬಿಟ್ಟುಕೊಟ್ಟಿದ್ದರು. ಈಗ ಅಧಿಕೃತ ಆದೇಶ ಹೊರಬಿದ್ದಿದೆ’ ಎಂದು ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದರು.</p>.<p>ರಾಮಮಂದಿರ ನಿರ್ಮಾಣ ವಿಚಾರವಾಗಿ ಉತ್ತರ ಭಾರತದಲ್ಲಿ ನಡೆದ ಸಭೆಗಳಲ್ಲಿ ಹಿರಿಯ ಗುರುಗಳ ಜತೆ ಭಾಗಿಯಾಗಿದ್ದೇನೆ. ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣವಾಗಬೇಕು, ಯಾತ್ರಾತ್ರಿಗಳಿಗೆ ವಾಸ್ತವ್ಯ ಸೇರಿದಂತೆ ಅಗತ್ಯ ಅನುಕೂಲಗಳಿರಬೇಕು ಎಂಬ ಅಭಿಪ್ರಾಯಗಳಿವೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>