ವಿಟ್ಲ: ಕಂಬಳಬೆಟ್ಟು ಜನಪ್ರಿಯ ಸೆಂಟ್ರಲ್ ಸ್ಕೂಲ್ಗೆ ರಾಷ್ಟ್ರೀಯ ಮಟ್ಟದ ‘ಸ್ಕೂಲ್ ಎಕ್ಸಲೆನ್ಸ್ ಅವಾರ್ಡ್’ ಸಂದಿದೆ. ಹೈದರಾಬಾದ್ನಲ್ಲಿ ಈಚೆಗೆ ನಡೆದ ರಾಷ್ಟ್ರೀಯ ಶೈಕ್ಷಣಿಕ ಸಮ್ಮೇಳನದಲ್ಲಿ ಶಾಲೆಯ ನಿರ್ದೇಶಕ ನೌಶೀನ್ ಬದ್ರಿಯಾ ಹಾಗೂ ಆಡಳಿತ ಅಧಿಕಾರಿ ಸಫ್ವಾನ್ ಪಿಲಿಕಲ್ ಪ್ರಶಸ್ತಿ ಪಡೆದುಕೊಂಡರು.
ಹಾಸನದ ಹೆಸರಾಂತ ವೈದ್ಯ ಡಾ.ಅಬ್ದುಲ್ ಬಷೀರ್ ಸಾರಥ್ಯದ, ಶಿಕ್ಷಣ ತಜ್ಞ ಡಾ.ರವಿಕುಮಾರ್ ಎಲ್.ಪಿ ಅವರ ನಿರ್ದೇಶನದ ಶಾಲೆ ವಿಶ್ವ ದರ್ಜೆಯ ಮೂಲಸೌಕರ್ಯ, ಅಂತರರಾಷ್ಟ್ರೀಯ ದರ್ಜೆಯ ಈಜುಕೊಳ, ಕ್ರೀಡಾ ಸೌಲಭ್ಯಗಳನ್ನು ಹೊಂದಿದೆ ಎಂದು ಪ್ರಕಟಣೆ ತಿಳಿಸಿದೆ.