‘ಪ್ರಥಮ ಬಾರಿ ಕಿಂಡಿ ಅಣೆಕಟ್ಟೆಗೆ ಗೇಟ್ಗಳನ್ನು ಅಳವಡಿಸಿದ್ದು, ಇದರಿಂದ ಎಲ್ಲೆಲ್ಲ ನೀರು ಬಂದಿದೆ ಎನ್ನುವುದನ್ನು ಪರಿಶೀಲಿಸಿ ಇದನ್ನು ಮುಂದಿನ ದಿನಗಳಲ್ಲಿ ಸರಿಪಡಿಸಲು ಪ್ರಯತ್ನಿಸುತ್ತೇವೆ. ಈಗಾಗಲೇ ತೊಂದರೆಯಾದ ಪ್ರದೇಶಗಳಿಗೆ ಇಂಜಿನಿಯರ್ ಭೇಟಿ ನೀಡಿದ್ದು, ತಾತ್ಕಾಲಿಕವಾಗಿ ಏನು ಮಾಡಬಹುದು ಎನ್ನುವ ಬಗ್ಗೆ ತಿಳಿದು, ಇನ್ನೆರಡು ಮೂರು ದಿನದಲ್ಲಿಯೇ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ನೀರಾವರಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.