ಮಂಗಳವಾರ ಬೆಳಿಗ್ಗೆ ಸುಮಾರು 8ಗಂಟೆಗೆ ಸ್ಥಳೀಯ ನಿವಾಸಿ ಅರುಣ್ ಲೂಯಿಸ್ ಎನ್ನುವವರು ಹಣ ತೆಗೆಯಲು ಎ.ಟಿ.ಎಂಗೆ ಬಂದಾಗ ಈ ಪ್ರಕರಣ ಬೆಳಕಿಗೆ ಬಂದಿತ್ತು. ಕೂಡಲೇ ಕೋಟ ಪೋಲಿಸ್ ಠಾಣೆಗೆ ವಿಷಯ ತಿಳಿಸಿದ್ದು, ಸ್ಥಳಕ್ಕೆ ಆಗಮಿಸಿದ ಪೋಲಿಸರು ಬ್ಯಾಂಕ್ ಪರಿಶೀಲಿಸಿ ತನಿಖೆ ನಡೆಸಿದ್ದಾರೆ.
ಮಧ್ಯಾಹ್ನ ಸುಮಾರಿಗೆ ಉಡುಪಿಯಿಂದ ಬಂದ ಶ್ವಾನದಳ ತಪಾಸಣೆ ನಡೆಸಿದಾಗ ಎ.ಟಿ.ಎಂ ಹಿಂಭಾಗದಲ್ಲಿರುವ ಪೊದೆಯಲ್ಲಿ ಕಬ್ಬಿಣದ ಸರಳು ದೊರಕಿದೆ. ಅಲ್ಲಿಂದ ಮುಂದೆ ಶ್ವಾನದಳ ಹೆದ್ದಾರಿವರೆಗೆ ಸಾಗಿತ್ತು. ಈ ಸರಳನ್ನು ದರೋಡೆಗೆ ಉಪಯೋಗಿಸಿರಬಹುದು ಎಂದು ಅಂದಾಜಿಸಲಾಗಿದೆ. ಬೆರಳಚ್ಚು ತಜ್ಞರೂ ತನಿಖೆ ನಡೆಸಿದ್ದಾರೆ.
ಸುಮಾರು ಒಂದು ತಿಂಗಳ ಹಿಂದಷ್ಟೇ ರಾಷ್ಟ್ರೀಯ ಹೆದ್ದಾರಿಯಿಂದ ಸುಮಾರು 90ಮೀ.ದೂರದಲ್ಲಿ ಈ ಎ.ಟಿ.ಎಂನ್ನು ಆರಂಭಿಸಲಾಗಿತ್ತು. ಯಾವುದೇ ಕಾವಲುಗಾರನ್ನು ಬ್ಯಾಂಕ್ ನೇಮಿಸಿರಲಿಲ್ಲ ಮತ್ತು ಸರಿಯಾದ ವಿದ್ಯುತ್ ದೀಪಗಳನ್ನು ಅಳವಡಿಸಿರಲಿಲ್ಲ ಎಂದು ಹೇಳಲಾಗಿದೆ. ಮಾಹಿತಿಯ ಪ್ರಕಾರ ರಾತ್ರಿ 9.12ಕ್ಕೆ ಕೊನೆಯ ಬಾರಿ ಎ.ಟಿಎಂ ಬಳಸಲಾಗಿತ್ತು.