‘ಗುರುವಾರದಿಂದ ಇಲ್ಲಿನ ತಹಶೀಲ್ದಾರ್ ಕಚೇರಿಯಲ್ಲಿ ಅಧಾರ್ ತಿದ್ದುಪಡಿ ಕೇಂದ್ರ ಪುನರ್ ಆರಂಭವಾಗಲಿದೆ. ಅಲ್ಲದೇ ಇಲ್ಲಿನ ಅಂಚೆ ಕಚೇರಿಯಲ್ಲಿಯೂ ಆಧಾರ್ ಕೇಂದ್ರ ಪುನರ್ ಆರಂಭಿಸಲು ಜಿಲ್ಲಾಧಿಕಾರಿ ಅವರಿಂದ ಸೂಚನೆ ಬಂದಿದೆ. ಆಧಾರ್ ತಿದ್ದುಪಡಿ ಮಾಡಿಸುವರು, ಬ್ಯಾಂಕ್ ಆವರಣದಲ್ಲಿ ಮಲಗಿ ತೊಂದರೆ ಪಡುವುದು ಬೇಡ. ಅಂಚೆ ಕಚೇರಿ, ತಹಶೀಲ್ದಾರ್ ಕಚೇರಿ ಹಾಗೂ ಪಾಳಾ ಗ್ರಾಮದಲ್ಲಿಯೂ ಆಧಾರ್ ತಿದ್ದುಪಡಿ ಮಾಡಲು ವ್ಯವಸ್ಥೆ ಮಾಡಲಾಗಿದೆ. ಜನರು ಇದರ ಪ್ರಯೋಜನ ಪಡೆಯಬೇಕು’ ಎಂದು ತಹಶೀಲ್ದಾರ್ ಶ್ರೀಧರ ಮುಂದಲಮನಿ ಕೋರಿದ್ದಾರೆ.