ನಗರ ಹಾಗೂ ಹೊರವಲಯದಲ್ಲಿರುವ ಬುದ್ಧಿಮಾಂದ್ಯ ಮಕ್ಕಳ ಮನೆಗೆ ಹೋಗುವ ಶಾಲೆಯ ಮುಖ್ಯ ಶಿಕ್ಷಕಿ ನರ್ಮದಾ ಹೆಗಡೆ ಹಾಗೂ ಸಹ ಶಿಕ್ಷಕಿಯರು, ಮಕ್ಕಳಿಗೆ ಯೋಗ, ಭಜನೆ, ಫಿಜಿಯೊಥೆರಪಿ ಕಲಿಸುತ್ತಿದ್ದಾರೆ. ಪಾಲಕರ ಬಳಿ ಮಕ್ಕಳ ಆರೋಗ್ಯ ಸ್ಥಿತಿಯನ್ನು ವಿಚಾರಿಸಿ, ಅಗತ್ಯವಿದ್ದಲ್ಲಿ ವೈದ್ಯರ ಸಲಹೆ ಪಡೆದು, ಉಚಿತವಾಗಿ ಔಷಧ ವಿತರಿಸಿ ಬರುತ್ತಾರೆ.