ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡಿಕೆಯಲ್ಲಿವೆ ಆರೋಗ್ಯಕರ ಅಂಶ: ಸಚಿವ ಆರ್.ಶಂಕರ್

Last Updated 12 ಫೆಬ್ರುವರಿ 2021, 6:33 IST
ಅಕ್ಷರ ಗಾತ್ರ

ಶಿರಸಿ: ಅಡಿಕೆಯಿಂದ ಚಹಾ ಸೇರಿದಂತೆ ಹಲವು ಉತ್ಪನ್ನ ಸಿದ್ಧವಾಗುತ್ತಿದೆ‌. ಅದರಲ್ಲಿ ಮಧುಮೇಹ ನಿಯಂತ್ರಿಸುವ ಅಂಶಗಳೂ ಇವೆ, ಹೀಗಾಗಿ ಬೆಳೆಗಾರರು ಅಡಿಕೆ ಬಗ್ಗೆಯ ಆಕ್ಷೇಪಗಳ ಬಗ್ಗೆ ಚಿಂತಿಸಬೇಕಾಗಿಲ್ಲ ಎಂದು ತೋಟಗಾರಿಕಾ ಇಲಾಖೆ ಸಚಿವ ಆರ್.ಶಂಕರ್ ಹೇಳಿದರು.

ನಗರದ ಮಾರಿಕಾಂಬಾ ದೇವಾಲಯಕ್ಕೆ ಶುಕ್ರವಾರ ಭೇಟಿ ನೀಡಿದ ಬಳಿಕ ಮಾಧ್ಯಮದವರೊಡನೆ ಮಾತನಾಡಿದ ಅವರು, 'ಅಡಿಕೆಗೆ ಸದ್ಯ ಉತ್ತಮ ದರವಿದೆ. ರೈತರು ಸಂತಸದಲ್ಲಿದ್ದಾರೆ. ತೋಟಗಾರಿಕೆ ಬೆಳೆಗಳ ಹಾನಿಗೆ ಹಂತ ಹಂತವಾಗಿ ಪರಿಹಾರ ನೀಡಲಾಗಿದೆ' ಎಂದರು.

'ರೇಷ್ಮೆ ಇಲಾಖೆಯನ್ನು ಬೇರೆ ಇಲಾಖೆ ಜತೆ ವಿಲೀನಗೊಳಿಸುವ ಪ್ರಸ್ತಾಪವಿಲ್ಲ. ಬೇರೆ ಬೇರೆ ಇಲಾಖೆಗೆ ತೆರಳಿರುವ ರೇಷ್ಮೆ ಇಲಾಖೆ ನೌಕರರನ್ನು ಮಾತೃ ಇಲಾಖೆಗೆ ಕರೆತರಲಾಗುವುದು' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT