ಈ ಕುರಿತು ಮಾತನಾಡಿರುವ ಅವರು, ‘ನನ್ನ ಮಗನಿಗೆ ಸರಿಯಾಗಿ ಊಟ, ತಿಂಡಿ ಕೂಡ ಕೊಡುತ್ತಿಲ್ಲ. ನನ್ನ ಮಗ ಭಾರತಕ್ಕೆ ಮರಳಲು ಪ್ರಯತ್ನಿಸುತ್ತಿದ್ದು, ಕೆಲಸಕ್ಕೆ ಸೇರಿಸಿಕೊಂಡ ಕಂಪನಿ ಬಿಡುತ್ತಿಲ್ಲ. ಕೇಂದ್ರ ಸರ್ಕಾರ ನನ್ನ ಮಗನ ನೆರವಿಗೆ ಬರಬೇಕು. ಇರಾನ್ನ ಭಾರತದ ರಾಯಭಾರಿ ಕಚೇರಿಯಿಂದ ಮಗನನ್ನು ಸಂಪರ್ಕಿಸಿ ಮರಳಿ ಬರಲು ನೆರವು ನೀಡಬೇಕು’ ಎಂದು ಒತ್ತಾಯಿಸಿದ್ದಾರೆ.