ದೇವಾಲಯದ ಮುಖಮಂಟಪ, ಗರ್ಭಗುಡಿ, ಚಂದ್ರಶಾಲೆ, ಭೂತರಾಜ ದೇವಸ್ಥಾನ, ಎಣ್ಣೆ ಆಂಜನೇಯ, ಬೆಣ್ಣೆ ಮಾರುತಿ, ಗಣಪತಿ ದೇವಸ್ಥಾನದ ಮೇಲ್ಚಾವಣಿ, ಮರದ ಹಾಸು, ಕುಸುರಿ ಕೆತ್ತನೆಯ ಸೀಲಿಂಗ್ ನಿರ್ಮಾಣಕ್ಕೆ ಸಾಗುವಾನಿ, ಶಿವಣೆ ಜಾತಿಯ ಸುಮಾರು 5000 ಸಿಎಫ್ಟಿ ಕಟ್ಟಿಗೆ ಸಂಗ್ರಹಿಸಬೇಕಾಗಿದೆ. ಈ ಅಭಿಯಾನಕ್ಕೆ ನೆರವಾಗುವವರು ಒಂದು ಸಿಎಫ್ಟಿಗೆ ₹ 5400 ಧನಸಹಾಯ ನೀಡಬಹುದು. ಕಟ್ಟಿಗೆ ಇದ್ದಲ್ಲಿ ದಾಖಲೆ ಸಹಿತ ನೀಡಬಹುದು.