ಅಚವೆ (ಕಾರವಾರ): 'ಬೇಡ ಎಂದರೂ ಕಾಂಗ್ರೆಸ್ನವರು ದಿನಕ್ಕೊಂದು ಸಮಸ್ಯೆ ಸೃಷ್ಟಿಸುತ್ತಿದ್ದಾರೆ. ಅವರು ಅಧಿಕಾರದಲ್ಲಿದ್ದಾಗ ಏನು ಮಾಡಿದರು ಎಂದು ಹೇಳಲು ಸಿದ್ಧರಿಲ್ಲ. 50 ವರ್ಷ ದೇಶವನ್ನು ಆಳುವ ಅವಕಾಶ ಯಾವ ಪಕ್ಷಕ್ಕೂ ಸಿಕ್ಕಿಲ್ಲ. ಆದರೆ, ಅವರು ಗರೀಬಿ ಹಠಾವೋ ಘೋಷಣೆ ಬಿಟ್ಟರೆ ಮತ್ತೇನೂ ಮಾಡಿಲ್ಲ. ಬಡವರನ್ನು ತುಳಿದಿದ್ದಾರೆ' ಎಂದು ಕಂದಾಯ ಸಚಿವ ಆರ್. ಅಶೋಕ್ ಟೀಕಿಸಿದರು.