<p><strong>ಕಾರವಾರ: </strong>ಮಾರುಕಟ್ಟೆಯಲ್ಲಿ ದಿನಸಿ ದರ ಸ್ಥಿರವಾಗಿದ್ದು, ಅಡುಗೆ ಎಣ್ಣೆಯಲ್ಲಿ ದರ ಏರಿಕೆ ಕಂಡುಬಂದಿದೆ. ಎರಡು ವಾರದ ಹಿಂದೆ ಲೀಟರ್ಗೆ₹ 80ರ ದರ ಹೊಂದಿದ್ದಪಾಮ್ಆಯಿಲ್ ಹಿಂದಿನ ವಾರ₹ 90ಕ್ಕೆ ಏರಿಕೆಯಾಗಿತ್ತು. ಸದ್ಯ₹ 95ರಲ್ಲಿ ಬಿಕರಿಯಾಗುತ್ತಿದೆ.</p>.<p>ತೊಗರಿಬೇಳೆ ಪ್ರತಿ ಕೆ.ಜಿ.ಗೆ ₹ 100ರಲ್ಲಿ ಬಿಕರಿಯಾಗುತ್ತಿದೆ.ಹೆಸರು ಬೇಳೆಗೆ ₹ 120, ಬ್ಯಾಡಗಿ ಮೆಣಸು ₹ 220, ಬಿಳಿ ಬಟಾಣಿ ₹ 80,ಹಸಿರು ಬಟಾಣಿ ₹ 140ರದರ ಹೊಂದಿದೆ. ಕೊತ್ತುಂಬರಿ₹ 160, ಗೋಧಿ₹36ರಲ್ಲಿಗ್ರಾಹಕರಿಗೆ ಸಿಗುತ್ತಿದೆ.</p>.<p class="Subhead">ಈರುಳ್ಳಿ ದರ ಇಳಿಕೆ: ತರಕಾರಿ ಮಾರುಕಟ್ಟೆಯಲ್ಲಿ ₹ 100ರಲ್ಲಿ ಮಾರಾಟವಾಗುತ್ತಿದ್ದ ಈರುಳ್ಳಿ ಸದ್ಯ ₹ 80ಕ್ಕೆ ಇಳಿಕೆಯಾಗಿದೆ. ಅಂದರೆ ಪ್ರತಿ ಕೆ.ಜಿ.ಗೆ ₹ 20ರಷ್ಟು ಕಡಿಮೆ ಆದಂತಾಗಿದೆ. ಕಳಪೆ ಗುಣಮಟ್ಟದ ಈರುಳ್ಳಿಯನ್ನು ₹ 60ರಲ್ಲಿ ವ್ಯಾಪಾರ ಮಾಡಲಾಗುತ್ತಿದೆ.</p>.<p>ಪ್ರತಿ ಕೆ.ಜಿ.ಗೆ₹ 25ರ ದರ ಹೊಂದಿದ್ದ ಆಲೂಗಡ್ಡೆ ₹ 15ರಷ್ಟುಜಾಸ್ತಿಯಾಗಿದ್ದು,₹ 40ರಲ್ಲಿ ಬಿಕರಿಯಾಗುತ್ತಿದೆ. ಟೊಮೆಟೊ ₹ 20, ಕ್ಯಾರೆಟ್₹ 80ರ ದರದಲ್ಲಿಸ್ಥಿರವಾಗಿದೆ. ಹೂಕೋಸು₹ 30, ಬೆಳ್ಳುಳ್ಳಿ₹ 200, ಬೀನ್ಸ್₹ 60ರ ದರವನ್ನು ಹೊಂದಿದೆ.</p>.<p>ಸೇವಂತಿಗೆ ಹೂವು ಮತ್ತು ಕಾಕಡ ಮಲ್ಲಿಗೆಯು ಒಂದು ಮಾರಿಗೆ₹ 50, ಕನಕಾಂಬರ₹ 60, ಗೊಂಡೆ ಹೂವು₹ 40, ಡೇರೆ ಹೂವು₹ 60ರ ದರ ಹೊಂದಿವೆ. ಹೂವಿನ ಹಾರ ಒಂದಕ್ಕೆ₹ 60ರಂತೆ ಮಾರಾಟವಾಗುತ್ತಿದೆ.</p>.<p>ಹಣ್ಣಿನ ಮಾರುಕಟ್ಟೆಯಲ್ಲಿ ಸೇಬು ಪ್ರತಿ ಕೆ.ಜಿ.ಗೆ ₹ 120, ₹ 140, ₹ 200ರವರೆಗೂ ಇದೆ. ಸೀತಾಫಲ₹ 200ರ ದರ ಹೊಂದಿದೆ. ಕಿತ್ತಳೆ₹ 80ರಿಂದ ₹ 90ರವರೆಗಿನ ದರದಲ್ಲಿ ವಹಿವಾಟು ಕಾಣುತ್ತಿದೆ. ದ್ರಾಕ್ಷಿ₹ 160, ದಾಳಿಂಬೆ₹ 120, ಮೂಸಂಬಿ ₹ 120, ಪಪ್ಪಾಯಿ₹ 50ರ ದರದಲ್ಲಿ ಬಿಕರಿಯಾಗುತ್ತಿದೆ.</p>.<p>ಮೀನು ಮಾರುಕಟ್ಟೆಯಲ್ಲಿ ಪಾಂಫ್ರೆಟ್ಗೆ₹ 800ರಿಂದ₹ 900, ಕಿಂಗ್ಫಿಶ್ಗೆ₹ 1,200, ಬಂಗಡೆ ಒಂದು ಪಾಲಿಗೆ ₹ 200, ಲೆಪ್ಪೆ ಪಾಲಿಗೆ₹ 50, ಬೆಳುಂಜೆ ಪಾಲಿಗೆ₹ 100 ರಿಂದ₹ 150ರವರೆಗೆ ದರವಿದೆ.₹ 5ಕ್ಕೆ ಒಂದು ಮೊಟ್ಟೆ ಸಿಗುತ್ತಿದೆ. ಬೇಯಿಸಿದ ಮೊಟ್ಟೆಗೆ₹ 10 ಇದೆ.</p>.<p class="Subhead">ಮಾರುಕಟ್ಟೆಗೆಮಾವಿನಕಾಯಿ:ಕಾರವಾರದಲ್ಲಿ ಇದೇ ಮೊದಲ ಬಾರಿಗೆ ಮಾರುಕಟ್ಟೆಯಲ್ಲಿ ಮಾವಿನಕಾಯಿ ಪ್ರವೇಶ ಮಾಡಿತ್ತು. ಭಾನುವಾರದ ಸಂತೆಯಲ್ಲಿ ಒಂದು ಕಡೆ ಮಾತ್ರ ಇದುಮಾರಾಟಗೊಂಡಿತು. ಅಪರೂಪದ ಮಾವಿನಕಾಯಿಯನ್ನು ತುಟ್ಟಿಯಾದರೂ ಜನ ಖರೀದಿ ಮಾಡಿದರು.₹ 100ಕ್ಕೆ ಕೇವಲ ಎರಡು ಮಾವಿನಕಾಯಿಯನ್ನು ನೀಡಲಾಗುತ್ತಿತ್ತು.</p>.<p class="Subhead">––––––––––ಅಂಕಿಅಂಶ––––––––––</p>.<p>ಕಾರವಾರ ಮಾರುಕಟ್ಟೆ</p>.<p>ತರಕಾರಿ;ದರ (₹ಗಳಲ್ಲಿ)</p>.<p>ಆಲೂಗಡ್ಡೆ;40</p>.<p>ಟೊಮೆಟೊ;20</p>.<p>ಕ್ಯಾರೆಟ್;80</p>.<p>ಬೀಟ್ರೂಟ್;60</p>.<p>ಕ್ಯಾಪ್ಸಿಕಂ;60</p>.<p>ಮೆಣಸಿನಕಾಯಿ;60</p>.<p>ಶುಂಠಿ;100</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರವಾರ: </strong>ಮಾರುಕಟ್ಟೆಯಲ್ಲಿ ದಿನಸಿ ದರ ಸ್ಥಿರವಾಗಿದ್ದು, ಅಡುಗೆ ಎಣ್ಣೆಯಲ್ಲಿ ದರ ಏರಿಕೆ ಕಂಡುಬಂದಿದೆ. ಎರಡು ವಾರದ ಹಿಂದೆ ಲೀಟರ್ಗೆ₹ 80ರ ದರ ಹೊಂದಿದ್ದಪಾಮ್ಆಯಿಲ್ ಹಿಂದಿನ ವಾರ₹ 90ಕ್ಕೆ ಏರಿಕೆಯಾಗಿತ್ತು. ಸದ್ಯ₹ 95ರಲ್ಲಿ ಬಿಕರಿಯಾಗುತ್ತಿದೆ.</p>.<p>ತೊಗರಿಬೇಳೆ ಪ್ರತಿ ಕೆ.ಜಿ.ಗೆ ₹ 100ರಲ್ಲಿ ಬಿಕರಿಯಾಗುತ್ತಿದೆ.ಹೆಸರು ಬೇಳೆಗೆ ₹ 120, ಬ್ಯಾಡಗಿ ಮೆಣಸು ₹ 220, ಬಿಳಿ ಬಟಾಣಿ ₹ 80,ಹಸಿರು ಬಟಾಣಿ ₹ 140ರದರ ಹೊಂದಿದೆ. ಕೊತ್ತುಂಬರಿ₹ 160, ಗೋಧಿ₹36ರಲ್ಲಿಗ್ರಾಹಕರಿಗೆ ಸಿಗುತ್ತಿದೆ.</p>.<p class="Subhead">ಈರುಳ್ಳಿ ದರ ಇಳಿಕೆ: ತರಕಾರಿ ಮಾರುಕಟ್ಟೆಯಲ್ಲಿ ₹ 100ರಲ್ಲಿ ಮಾರಾಟವಾಗುತ್ತಿದ್ದ ಈರುಳ್ಳಿ ಸದ್ಯ ₹ 80ಕ್ಕೆ ಇಳಿಕೆಯಾಗಿದೆ. ಅಂದರೆ ಪ್ರತಿ ಕೆ.ಜಿ.ಗೆ ₹ 20ರಷ್ಟು ಕಡಿಮೆ ಆದಂತಾಗಿದೆ. ಕಳಪೆ ಗುಣಮಟ್ಟದ ಈರುಳ್ಳಿಯನ್ನು ₹ 60ರಲ್ಲಿ ವ್ಯಾಪಾರ ಮಾಡಲಾಗುತ್ತಿದೆ.</p>.<p>ಪ್ರತಿ ಕೆ.ಜಿ.ಗೆ₹ 25ರ ದರ ಹೊಂದಿದ್ದ ಆಲೂಗಡ್ಡೆ ₹ 15ರಷ್ಟುಜಾಸ್ತಿಯಾಗಿದ್ದು,₹ 40ರಲ್ಲಿ ಬಿಕರಿಯಾಗುತ್ತಿದೆ. ಟೊಮೆಟೊ ₹ 20, ಕ್ಯಾರೆಟ್₹ 80ರ ದರದಲ್ಲಿಸ್ಥಿರವಾಗಿದೆ. ಹೂಕೋಸು₹ 30, ಬೆಳ್ಳುಳ್ಳಿ₹ 200, ಬೀನ್ಸ್₹ 60ರ ದರವನ್ನು ಹೊಂದಿದೆ.</p>.<p>ಸೇವಂತಿಗೆ ಹೂವು ಮತ್ತು ಕಾಕಡ ಮಲ್ಲಿಗೆಯು ಒಂದು ಮಾರಿಗೆ₹ 50, ಕನಕಾಂಬರ₹ 60, ಗೊಂಡೆ ಹೂವು₹ 40, ಡೇರೆ ಹೂವು₹ 60ರ ದರ ಹೊಂದಿವೆ. ಹೂವಿನ ಹಾರ ಒಂದಕ್ಕೆ₹ 60ರಂತೆ ಮಾರಾಟವಾಗುತ್ತಿದೆ.</p>.<p>ಹಣ್ಣಿನ ಮಾರುಕಟ್ಟೆಯಲ್ಲಿ ಸೇಬು ಪ್ರತಿ ಕೆ.ಜಿ.ಗೆ ₹ 120, ₹ 140, ₹ 200ರವರೆಗೂ ಇದೆ. ಸೀತಾಫಲ₹ 200ರ ದರ ಹೊಂದಿದೆ. ಕಿತ್ತಳೆ₹ 80ರಿಂದ ₹ 90ರವರೆಗಿನ ದರದಲ್ಲಿ ವಹಿವಾಟು ಕಾಣುತ್ತಿದೆ. ದ್ರಾಕ್ಷಿ₹ 160, ದಾಳಿಂಬೆ₹ 120, ಮೂಸಂಬಿ ₹ 120, ಪಪ್ಪಾಯಿ₹ 50ರ ದರದಲ್ಲಿ ಬಿಕರಿಯಾಗುತ್ತಿದೆ.</p>.<p>ಮೀನು ಮಾರುಕಟ್ಟೆಯಲ್ಲಿ ಪಾಂಫ್ರೆಟ್ಗೆ₹ 800ರಿಂದ₹ 900, ಕಿಂಗ್ಫಿಶ್ಗೆ₹ 1,200, ಬಂಗಡೆ ಒಂದು ಪಾಲಿಗೆ ₹ 200, ಲೆಪ್ಪೆ ಪಾಲಿಗೆ₹ 50, ಬೆಳುಂಜೆ ಪಾಲಿಗೆ₹ 100 ರಿಂದ₹ 150ರವರೆಗೆ ದರವಿದೆ.₹ 5ಕ್ಕೆ ಒಂದು ಮೊಟ್ಟೆ ಸಿಗುತ್ತಿದೆ. ಬೇಯಿಸಿದ ಮೊಟ್ಟೆಗೆ₹ 10 ಇದೆ.</p>.<p class="Subhead">ಮಾರುಕಟ್ಟೆಗೆಮಾವಿನಕಾಯಿ:ಕಾರವಾರದಲ್ಲಿ ಇದೇ ಮೊದಲ ಬಾರಿಗೆ ಮಾರುಕಟ್ಟೆಯಲ್ಲಿ ಮಾವಿನಕಾಯಿ ಪ್ರವೇಶ ಮಾಡಿತ್ತು. ಭಾನುವಾರದ ಸಂತೆಯಲ್ಲಿ ಒಂದು ಕಡೆ ಮಾತ್ರ ಇದುಮಾರಾಟಗೊಂಡಿತು. ಅಪರೂಪದ ಮಾವಿನಕಾಯಿಯನ್ನು ತುಟ್ಟಿಯಾದರೂ ಜನ ಖರೀದಿ ಮಾಡಿದರು.₹ 100ಕ್ಕೆ ಕೇವಲ ಎರಡು ಮಾವಿನಕಾಯಿಯನ್ನು ನೀಡಲಾಗುತ್ತಿತ್ತು.</p>.<p class="Subhead">––––––––––ಅಂಕಿಅಂಶ––––––––––</p>.<p>ಕಾರವಾರ ಮಾರುಕಟ್ಟೆ</p>.<p>ತರಕಾರಿ;ದರ (₹ಗಳಲ್ಲಿ)</p>.<p>ಆಲೂಗಡ್ಡೆ;40</p>.<p>ಟೊಮೆಟೊ;20</p>.<p>ಕ್ಯಾರೆಟ್;80</p>.<p>ಬೀಟ್ರೂಟ್;60</p>.<p>ಕ್ಯಾಪ್ಸಿಕಂ;60</p>.<p>ಮೆಣಸಿನಕಾಯಿ;60</p>.<p>ಶುಂಠಿ;100</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>