ಕಾರವಾರ, ಅಂಕೋಲಾ ಸೇರಿದಂತೆ ವಿವಿಧ ತಾಲ್ಲೂಕುಗಳಲ್ಲಿ ಕೂಡ ಇದೇ ರೀತಿಯ ಆರೋಪಗಳಿವೆ. ಈ ಬಗ್ಗೆ ತಾಲ್ಲೂಕು ಪಂಚಾಯಿತಿ ಸಭೆಗಳಲ್ಲೇ ಹೆಸ್ಕಾಂ ಅಧಿಕಾರಿಗಳು ಸ್ಪಷ್ಟನೆ ನೀಡಿ ಹಣ ನೀಡದಂತೆ ತಿಳಿಸಿದ್ದರು. ಆದರೂ, ಸಾರ್ವಜನಿಕರಿಂದ ಹಣ ಪಡೆಯುವುದು ನಿಂತಿಲ್ಲ. ಸಂಸ್ಥೆಯ ಕೆಲವು ಸಿಬ್ಬಂದಿ, ಹಳೆಯ ಮೀಟರನ್ನು ಬದಲಾಯಿಸಿದ್ದು, ಅದು ಮುಂದೆ ಹಾಳಾಗದಂತೆ ಕವರ್ ಅಳವಡಿಸಿದ್ದೇವೆ. ಅದರ ಶುಲ್ಕ ಕೊಡಬೇಕು ಎಂದು ಹಣ ಪಡೆಯುತ್ತಿದ್ದಾರೆ.