ಅನಾಥ ಪ್ರಾಣಿ, ಪಕ್ಷಿಗಳ ಅನಾಥಾಶ್ರಮವಾದ ಅಮೇಜಿಂಗ್ ಪೆಟ್ ಪ್ಲಾನೆಟ್ನ ಮುಖ್ಯಸ್ಥ ರಾಜೇಂದ್ರ ಶಿರಸಿಕರ್ ಅವರು ಕತ್ತೆಗಳಿಗೆ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದಿದ್ದಾರೆ. ‘ವ್ಯಕ್ತಿಯೊಬ್ಬ ಈ ಮೂರು ಕತ್ತೆಗಳನ್ನು ಬೇಕಾಬಿಟ್ಟಿ ದುಡಿಸಿಕೊಂಡು, ಅದು ನಿಶ್ಶಕ್ತಗೊಂಡ ಮೇಲೆ ರಸ್ತೆಯಲ್ಲಿ ಬಿಟ್ಟು ಹೋಗಿದ್ದ. ಮೈತುಂಬ ಗಾಯಗಳಾಗಿದ್ದ ಕತ್ತೆಗಳು ಹಸಿವಿನಿಂದ ನಿತ್ರಾಣಗೊಂಡಿದ್ದವು. ದಾರಿಹೋಕರೊಬ್ಬರು ಈ ಕತ್ತೆಗಳ ದಾರುಣ ಸ್ಥಿತಿಯ ಬಗ್ಗೆ ತಿಳಿಸಿದರು’ ಎನ್ನುತ್ತಾರೆ ಪ್ಲಾನೆಟ್ ನಡೆಸುತ್ತಿರುವ ಪದ್ಮ ಸೇವಾ ಟ್ರಸ್ಟ್ ಅಧ್ಯಕ್ಷ ಸೂರಜ್ ಶಿರಸಿಕರ.