‘ಆನೆಯ ತಲೆ ಭಾಗಕ್ಕೆ ಬಲವಾದ ಏಟು ಬಿದ್ದಿದ್ದರಿಂದ ಅದು ಮೃತಪಟ್ಟಿದೆ’ ಎಂದು ಮರಣೋತ್ತರ ಪರೀಕ್ಷೆ ನಡೆಸಿರುವ ಜೋಯಿಡಾ ಪಶು ಅಸ್ಪತ್ರೆಯ ವೈದ್ಯಾಧಿಕಾರಿ ಡಾ.ಪ್ರದೀಪ ತಿಳಿಸಿದ್ದಾರೆ. ಕುಳಗಿ ಅರಣ್ಯದಲ್ಲಿ ಆನೆಯ ಅಂತ್ಯಕ್ರಿಯೆ ನಡೆಸಲಾಗಿದೆ. ಈ ವೇಳೆ ಎಸಿಎಫ್ ಶಿವಾನಂದ ತೋಡ್ಕರ, ಆರ್.ಎಫ್.ಒ. ಅಭಿಷೇಕ ನಾಯ್ಕ, ರವಿಕಿರಣ ಸಂಪಗಾವಿ ಇದ್ದರು.