ಜೊಯಿಡಾ: ‘ಅಬ್ಬೆ’ ಎಂದೇ ಪರಿಚಿತವಾಗಿರುವ ತಾಲ್ಲೂಕಿನ ಛಾಪಖಂಡದ ಶತಾಯುಷಿ ದೇವಮ್ಮ ಹೆಗಡೆ ಅವರ ನೂರರ ಸಂಭ್ರಮವನ್ನು ವಿಭಿನ್ನವಾಗಿ ಆಚರಿಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ. ಅವರ ಕುಟುಂಬದ ಸದಸ್ಯರು, ಒಡನಾಡಿಗಳು ಸೇರಿ 15ಕ್ಕೂ ಹೆಚ್ಚು ಜನರು ನೇತ್ರದಾನ ಸಂಕಲ್ಪ ಮಾಡಲಿದ್ದಾರೆ. ಜ.22ರಂದು ಪೊಟೋಲಿಯ ಕಾಡುಮನೆ ಪಕ್ಕದ ಹಕ್ಕಿಮನೆಯಲ್ಲಿ ನೇತ್ರದಾನ ಜಾಗೃತಿ ಉಪನ್ಯಾಸ ಕೂಡ ನಡೆಯಲಿದೆ.