ಒಣ ಹುಲ್ಲಿಗೆ ತಗುಲಿದ ಬೆಂಕಿಯು, ಗಾಳಿಯಿಂದಾಗಿ ತರಗೆಲೆಗಳಿಗೆ ಹರಡಿತ್ತು. ಬಳಿಕ ಅರಣ್ಯ ಪ್ರದೇಶವನ್ನು ವ್ಯಾಪಿಸಿತ್ತು. ಈ ಭಾಗದಲ್ಲಿ ಅತ್ಯಮೂಲ್ಯ ಸಸ್ಯ ಸಂಪತ್ತು ಹಾಗೂ ವನ್ಯಜೀವಿಗಳಿವೆ. ಬೆಂಕಿಯ ಪ್ರಮಾಣ ಮತ್ತಷ್ಟು ಹೆಚ್ಚುತ್ತಿದ್ದರೆ ಅವುಗಳಿಗೆ ಅಪಾಯವಾಗುವ ಸಾಧ್ಯತೆಯಿತ್ತು. ತಕ್ಷಣ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಸಂಜೀವ ಅಸ್ನೋಟಿಕರ ಹಾಗೂ ಶಶಿಕಾಂತ ಬೆಂಕಿಯನ್ನು ಆರಿಸಿದರು.