‘ಬಾಲ್ಯದಿಂದಲೂ ಕಾರವಾರದಲ್ಲಿ ವಾಸವಿರುವ ನಾವು, ಸರ್ಕಾರದಿಂದ ಆಗುತ್ತಿರುವ ಅನ್ಯಾಯ ಹಾಗೂ ದೌರ್ಜನ್ಯವನ್ನು ಕಣ್ಣಾರೆ ಕಂಡಿದ್ದೇವೆ. ಕಡಲ ನಗರಿ ಎಂದು ಕರೆಯಿಸಿಕೊಳ್ಳುವ ಕಾರವಾರದಲ್ಲಿ ಈ ಹಿಂದೆ ಹತ್ತಾರು ಕಡಲತೀರಗಳು ಮುಕ್ತವಾಗಿದ್ದವು. ಆದರೆ, ಸೀಬರ್ಡ್ ನೌಕಾನೆಲೆಯ ಸ್ಥಾಪನೆಯಾದಾಗ ರವೀಂದ್ರನಾಥ ಟ್ಯಾಗೋರ್ ಕಡಲತೀರ ಮಾತ್ರ ಉಳಿದುಕೊಂಡಿತು. ಈಗ ಬಂದರು ವಿಸ್ತರಣೆಗಾಗಿ ಅದನ್ನೂ ವಶಪಡಿಸಿಕೊಂಡರೆ ಜನರಿಗೆ ಕಡಲತೀರವೇ ಇಲ್ಲದಂತಾಗುತ್ತದೆ’ ಎಂದು ಪತ್ರದಲ್ಲಿ ತಿಳಿಸಿದ್ದಾರೆ.