ಈ ಬಗ್ಗೆ ಮಾಹಿತಿ ನೀಡಿದ ಮೀನುಗಾರಿಕಾ ಇಲಾಖೆ ಉಪ ನಿರ್ದೆಶಕ ಪಿ.ನಾಗರಾಜು, ‘ಉಡುಪಿ, ಮಂಗಳೂರಿನಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿದ 599 ದೋಣಿಗಳು ನಾಲ್ಕು ದಿನಗಳಿಂದ ಸಮುದ್ರದಲ್ಲಿ ಇರುವುದಾಗಿ ಮಾಹಿತಿಯಿದೆ. ಅವುಗಳಲ್ಲಿ ಹಲವು ಕಾರವಾರದ ದಡಕ್ಕೆ ಮರಳಿದ್ದು, ಕೆಲವು ಗೋವಾದಲ್ಲಿ ಲಂಗರು ಹಾಕಿವೆ’ ಎಂದು ತಿಳಿಸಿದರು.