ಕಟ್ಟಡ ನಿರ್ಮಿಸಲು ಗುರುತಿಸಿದ ಜಾಗ ತಾಲ್ಲೂಕು ಕೇಂದ್ರದಿಂದ ಸುಮಾರು ಎರಡು ಕಿ.ಮೀ ದೂರದಲ್ಲಿದೆ. ರಾಷ್ಟ್ರೀಯ ಹೆದ್ದಾರಿಯಿಂದ ಕಚ್ಚಾ ರಸ್ತೆಯ ಮೂಲಕ ಇಳಿಜಾರಿನಲ್ಲಿ ಸಾಗಬೇಕಾಗುತ್ತದೆ. ಸಾರ್ವಜನಿಕರು ಸಮಾಜ ಕಲ್ಯಾಣ ಇಲಾಖೆಯ ಕಾರ್ಯ ನಿಮಿತ್ತ ಕಾಲು ಮಾರ್ಗ ಅಥವಾ ಆಟೊರಿಕ್ಷಾ ಮೂಲಕ ಬರಬೇಕಾಗುತ್ತದೆ ಎಂಬ ವಿಷಯ ಮನಗಂಡ ಅವರು, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.