ಜತೆಗೆ ಗಣೇಶೋತ್ಸವ ಮಂಟಪಕ್ಕೆ ಭರದಿಂದ ತಯಾರಿ ನಡೆಯುತ್ತಿದ್ದು, ಎರಡು ವರ್ಷದ ಬಳಿಕ ಉತ್ಸವ ಅದ್ಧೂರಿಯಾಗಿಸಲು ಸಮಿತಿಗಳು ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಿವೆ. ಆಕರ್ಷಕ ರೂಪಕ, ಕಲಾಕೃತಿಗಳ ಸ್ಥಾಪನೆ, ಸ್ಪರ್ಧಾ ಕಾರ್ಯಕ್ರಮಗಳ ಆಯೋಜನೆಗೂ ತಯಾರಿ ಮಾಡಿಕೊಂಡಿವೆ. ದೇವಿಕೆರೆ, ಮರಾಠಿಕೊಪ್ಪ, ಶಿವಾಜಿಚೌಕ, ಹನುಮಗಿರಿ ಸೇರಿದಂತೆ ಹಲವು ಕಡೆಗಳಲ್ಲಿ ಈಗಾಗಲೇ ಹಬ್ಬದ ವಾತಾವರಣ ಕಳೆಗಟ್ಟುವ ತಯಾರಿ ನಡೆದಿದೆ.