ವೆಂಕಟೇಶ ನಾಯ್ಕ ಅವರು ಶುಕ್ರವಾರ ಬೆಳಿಗ್ಗೆ ವಾಕಿಂಗ್ ಹೋಗಲು ಮನೆಯ ಗೇಟ್ ತೆಗೆದಾಗ ಈ ದೃಶ್ಯ ಕಂಡಿದೆ. ಇದನ್ನು ಕಂಡ ಅವರು, ತಕ್ಷಣ ಆಪ್ತರು, ಪೊಲೀಸರಿಗೆ ಮಾಹಿತಿ ನೀಡಿದರು. ಕುಂಬಳಕಾಯಿ, ಲಿಂಬು, ಹಿಟ್ಟಿನ ಗೊಂಬೆ ಮಾಡಿ, ಅದಕ್ಕೆ ಕಪ್ಪು ದಾರ ಸುತ್ತಿ ಅದರ ಮೇಲೆ ಕುಂಕುಮ ಚೆಲ್ಲಿರುವ ದೃಶ್ಯವನ್ನು ಅನೇಕರು ಭೇಟಿ ನೀಡಿ ನೋಡಿದರು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.