<p><strong>ಕಾರವಾರ:</strong> ಒಂದೆಡೆ ಅಡಿಕೆ ದರ ಏರಿಕೆಯ ಖುಷಿಯಲ್ಲಿ ಬೆಳೆಗಾರರಿದ್ದರೆ, ಮತ್ತೊಂದೆಡೆ ಭೂತಾನ್ನಿಂದ ಆಮದು ಮಾಡಿಕೊಳ್ಳಲು ಏರ್ಪಟ್ಟಿರುವ ಒಪ್ಪಂದದ ಬಗ್ಗೆ ಚಿಂತೆಗೀಡಾಗಿದ್ದಾರೆ. ಆ ದೇಶದ ಮೂಲಕ ಇತರ ದೇಶಗಳ ಅಡಿಕೆ ಭಾರತದ ಮಾರುಕಟ್ಟೆ ಪ್ರವೇಶಿಸಿದರೆ ತೊಂದರೆ ತಪ್ಪಿದ್ದಲ್ಲ ಎಂಬ ಆತಂಕದಲ್ಲಿದ್ದಾರೆ.</p>.<p>ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಈ ವರ್ಷ ಫೆಬ್ರುವರಿಯಲ್ಲಿ ಭೂತಾನ್ಗೆ ಭೇಟಿ ನೀಡಿದ್ದರು. ಆಗ, ಅಲ್ಲಿನ ಅಡಿಕೆ, ಮ್ಯಾಂಡರಿನ್ ಕಿತ್ತಳೆ, ಸೇಬು ಹಾಗೂ ಶುಂಠಿಗಳಿಗೆ ನಮ್ಮ ದೇಶದಲ್ಲೂ ಮಾರುಕಟ್ಟೆಗೆ ಅವಕಾಶ ನೀಡುವ ಬಗ್ಗೆ ಒಪ್ಪಂದ ಪ್ರಕ್ರಿಯೆ ಆರಂಭಿಸಲಾಗಿತ್ತು. ಅ.16ರಂದು ಇದು ಪೂರ್ಣಗೊಂಡಿದೆ.</p>.<p>‘ಭೂತಾನ್ನಲ್ಲಿ ಬೆಳೆಯುವ ಅಡಿಕೆಯ ಪ್ರಮಾಣ ಅತ್ಯಂತ ಕಡಿಮೆ. ಅಲ್ಲಿಂದ ಮಾತ್ರ ಆವಕವಾದರೆ ತೊಂದರೆಯಾಗದು. ಆದರೆ, ಆ ದೇಶದ ಮೂಲಕ ಮ್ಯಾನ್ಮಾರ್, ಬಾಂಗ್ಲಾದೇಶ, ಶ್ರೀಲಂಕಾ, ಮಲೇಷ್ಯಾ ಮುಂತಾದ ದೇಶಗಳಿಂದಲೂ ಆವಕ ಶುರುವಾದರೆ ನಮ್ಮ ಮಾರುಕಟ್ಟೆಗೆ ಹೊಡೆತ ಬೀಳುತ್ತದೆ. ಇದನ್ನು ತಡೆಯಲು ಕೈಗೊಂಡ ಕ್ರಮಗಳ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟಪಡಿಸಬೇಕು’ ಎಂದು ಕುಮಟಾದ ಅಡಿಕೆ ಕೃಷಿಕ ವಿವೇಕ ಜಾಲಿಸತಿಗೆ ಒತ್ತಾಯಿಸಿದರು.</p>.<p>‘ಚೀನಾದಿಂದ ಎಲೆಕ್ಟ್ರಾನಿಕ್ ಉತ್ಪನ್ನಗಳ ಆಮದು ನಿಯಂತ್ರಿಸಲಾಗಿದೆ ಎಂದು ಹೇಳಿದ್ದರೂ ನಮ್ಮ ದೇಶದಲ್ಲಿ ಅಲ್ಲಿನ ಉತ್ಪನ್ನಗಳೇ ತುಂಬಿವೆ. ಅಡಿಕೆ ವಿಚಾರದಲ್ಲೂ ಹೀಗೇ ಆದರೆ ಬೆಳೆಗಾರ ಕಂಗಾಲಾಗುತ್ತಾನೆ’ ಎಂದು ಅವರು ಕಳವಳ ವ್ಯಕ್ತಪಡಿಸಿದರು.</p>.<p>‘ಲಾಕ್ಡೌನ್ ಕಾರಣದಿಂದ ವಿದೇಶಗಳಿಂದ ಆಮದು ಆಗುವುದು ನಿಂತಿದೆ. ಇದರ ಪರಿಣಾಮವಾಗಿ ಅಡಿಕೆ ಧಾರಣೆ ಏರಿಕೆಯಾಗಿದೆ. ಇತರ ದೇಶಗಳಿಂದ ಭೂತಾನ್ ಮೂಲಕ ಅಡಿಕೆ ಬಂದರೆ ದರ ಮತ್ತೆ ಕುಸಿಯುತ್ತದೆ. ಇದನ್ನು ತಡೆಯಬೇಕಾದರೆ, ಈ ಒಪ್ಪಂದವನ್ನು ರದ್ದುಪಡಿಸಬೇಕು’ ಎನ್ನುವುದು ಕುಮಟಾ ತಾಲ್ಲೂಕಿನ ಮತ್ತಳ್ಳಿಯ ಬೆಳೆಗಾರ ರವಿ ಹೆಗಡೆ ಅಭಿಪ್ರಾಯಪಟ್ಟರು.</p>.<p class="Subhead"><strong>‘ಮಾಹಿತಿ ಹಂಚಿಕೊಳ್ಳಬೇಕು’:</strong></p>.<p>ಸಾರ್ಕ್ ನಿಯಮದಡಿ ಒಪ್ಪಂದ ಮಾಡಿಕೊಂಡ ದೇಶಗಳು ಆಮದು ಮಾಡಿಕೊಳ್ಳುವ ಕೃಷಿ ಉತ್ಪನ್ನದ ಸಂಪೂರ್ಣ ಮಾಹಿತಿಗಳನ್ನು ಹಂಚಿಕೊಳ್ಳಬೇಕು. ಅದರ ಗುಣಮಟ್ಟ, ಬೆಳೆಯ ಪ್ರಮಾಣವನ್ನು ತಿಳಿಸಬೇಕು ಎಂಬ ಷರತ್ತು ಇದೆ. ಒಂದುವೇಳೆ, ಆ ದೇಶದಲ್ಲಿ ಬೆಳೆಯುವ ಉತ್ಪನ್ನಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಆವಕವಾದರೆ ಅದರ ಮಾರುಕಟ್ಟೆಗೆ ಅವಕಾಶ ನೀಡಲಾಗುವುದಿಲ್ಲ’ ಎಂದುಶಿರಸಿಯಲ್ಲಿ ಈಚೆಗೆ ಸಂಸದ ಅನಂತಕುಮಾರ ಹೆಗಡೆ ತಿಳಿಸಿದ್ದರು.</p>.<p>ಅವರ ಜೊತೆಗಿದ್ದ ‘ಕ್ಯಾಂಪ್ಕೊ’ ಅಧ್ಯಕ್ಷ ಸತೀಶ್ಚಂದ್ರ ಪ್ರತಿಕ್ರಿಯಿಸಿ, ‘ಭೂತಾನ್ ಮೂಲಕ ಬೇರೆ ದೇಶಗಳಿಂದ ಅಡಿಕೆ ಬಾರದಂತೆ ನಿಗಾ ವಹಿಸಬೇಕು ಎಂದು ಕೇಂದ್ರ ವಾಣಿಜ್ಯ ಸಚಿವರಿಗೆ ಮನವಿ ಮಾಡಲಾಗಿದೆ’ ಎಂದು ಹೇಳಿದ್ದರು.</p>.<p>* ಭೂತಾನ್ನಲ್ಲಿ ಅಡಿಕೆ ಬೆಳೆಯುವ ಪ್ರಮಾಣ ಅತ್ಯಂತ ಕಡಿಮೆ. ಉಭಯ ದೇಶಗಳ ನಡುವಿನ ಒಪ್ಪಂದ ದುರುಪಯೋಗ ಆಗದಂತೆ ಕೇಂದ್ರ ಸರ್ಕಾರ ಗಮನ ಹರಿಸಬೇಕು.</p>.<p><strong>– ರವೀಶ ಹೆಗಡೆ, ಶಿರಸಿ ಟಿ.ಎಸ್.ಎಸ್.ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರವಾರ:</strong> ಒಂದೆಡೆ ಅಡಿಕೆ ದರ ಏರಿಕೆಯ ಖುಷಿಯಲ್ಲಿ ಬೆಳೆಗಾರರಿದ್ದರೆ, ಮತ್ತೊಂದೆಡೆ ಭೂತಾನ್ನಿಂದ ಆಮದು ಮಾಡಿಕೊಳ್ಳಲು ಏರ್ಪಟ್ಟಿರುವ ಒಪ್ಪಂದದ ಬಗ್ಗೆ ಚಿಂತೆಗೀಡಾಗಿದ್ದಾರೆ. ಆ ದೇಶದ ಮೂಲಕ ಇತರ ದೇಶಗಳ ಅಡಿಕೆ ಭಾರತದ ಮಾರುಕಟ್ಟೆ ಪ್ರವೇಶಿಸಿದರೆ ತೊಂದರೆ ತಪ್ಪಿದ್ದಲ್ಲ ಎಂಬ ಆತಂಕದಲ್ಲಿದ್ದಾರೆ.</p>.<p>ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಈ ವರ್ಷ ಫೆಬ್ರುವರಿಯಲ್ಲಿ ಭೂತಾನ್ಗೆ ಭೇಟಿ ನೀಡಿದ್ದರು. ಆಗ, ಅಲ್ಲಿನ ಅಡಿಕೆ, ಮ್ಯಾಂಡರಿನ್ ಕಿತ್ತಳೆ, ಸೇಬು ಹಾಗೂ ಶುಂಠಿಗಳಿಗೆ ನಮ್ಮ ದೇಶದಲ್ಲೂ ಮಾರುಕಟ್ಟೆಗೆ ಅವಕಾಶ ನೀಡುವ ಬಗ್ಗೆ ಒಪ್ಪಂದ ಪ್ರಕ್ರಿಯೆ ಆರಂಭಿಸಲಾಗಿತ್ತು. ಅ.16ರಂದು ಇದು ಪೂರ್ಣಗೊಂಡಿದೆ.</p>.<p>‘ಭೂತಾನ್ನಲ್ಲಿ ಬೆಳೆಯುವ ಅಡಿಕೆಯ ಪ್ರಮಾಣ ಅತ್ಯಂತ ಕಡಿಮೆ. ಅಲ್ಲಿಂದ ಮಾತ್ರ ಆವಕವಾದರೆ ತೊಂದರೆಯಾಗದು. ಆದರೆ, ಆ ದೇಶದ ಮೂಲಕ ಮ್ಯಾನ್ಮಾರ್, ಬಾಂಗ್ಲಾದೇಶ, ಶ್ರೀಲಂಕಾ, ಮಲೇಷ್ಯಾ ಮುಂತಾದ ದೇಶಗಳಿಂದಲೂ ಆವಕ ಶುರುವಾದರೆ ನಮ್ಮ ಮಾರುಕಟ್ಟೆಗೆ ಹೊಡೆತ ಬೀಳುತ್ತದೆ. ಇದನ್ನು ತಡೆಯಲು ಕೈಗೊಂಡ ಕ್ರಮಗಳ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟಪಡಿಸಬೇಕು’ ಎಂದು ಕುಮಟಾದ ಅಡಿಕೆ ಕೃಷಿಕ ವಿವೇಕ ಜಾಲಿಸತಿಗೆ ಒತ್ತಾಯಿಸಿದರು.</p>.<p>‘ಚೀನಾದಿಂದ ಎಲೆಕ್ಟ್ರಾನಿಕ್ ಉತ್ಪನ್ನಗಳ ಆಮದು ನಿಯಂತ್ರಿಸಲಾಗಿದೆ ಎಂದು ಹೇಳಿದ್ದರೂ ನಮ್ಮ ದೇಶದಲ್ಲಿ ಅಲ್ಲಿನ ಉತ್ಪನ್ನಗಳೇ ತುಂಬಿವೆ. ಅಡಿಕೆ ವಿಚಾರದಲ್ಲೂ ಹೀಗೇ ಆದರೆ ಬೆಳೆಗಾರ ಕಂಗಾಲಾಗುತ್ತಾನೆ’ ಎಂದು ಅವರು ಕಳವಳ ವ್ಯಕ್ತಪಡಿಸಿದರು.</p>.<p>‘ಲಾಕ್ಡೌನ್ ಕಾರಣದಿಂದ ವಿದೇಶಗಳಿಂದ ಆಮದು ಆಗುವುದು ನಿಂತಿದೆ. ಇದರ ಪರಿಣಾಮವಾಗಿ ಅಡಿಕೆ ಧಾರಣೆ ಏರಿಕೆಯಾಗಿದೆ. ಇತರ ದೇಶಗಳಿಂದ ಭೂತಾನ್ ಮೂಲಕ ಅಡಿಕೆ ಬಂದರೆ ದರ ಮತ್ತೆ ಕುಸಿಯುತ್ತದೆ. ಇದನ್ನು ತಡೆಯಬೇಕಾದರೆ, ಈ ಒಪ್ಪಂದವನ್ನು ರದ್ದುಪಡಿಸಬೇಕು’ ಎನ್ನುವುದು ಕುಮಟಾ ತಾಲ್ಲೂಕಿನ ಮತ್ತಳ್ಳಿಯ ಬೆಳೆಗಾರ ರವಿ ಹೆಗಡೆ ಅಭಿಪ್ರಾಯಪಟ್ಟರು.</p>.<p class="Subhead"><strong>‘ಮಾಹಿತಿ ಹಂಚಿಕೊಳ್ಳಬೇಕು’:</strong></p>.<p>ಸಾರ್ಕ್ ನಿಯಮದಡಿ ಒಪ್ಪಂದ ಮಾಡಿಕೊಂಡ ದೇಶಗಳು ಆಮದು ಮಾಡಿಕೊಳ್ಳುವ ಕೃಷಿ ಉತ್ಪನ್ನದ ಸಂಪೂರ್ಣ ಮಾಹಿತಿಗಳನ್ನು ಹಂಚಿಕೊಳ್ಳಬೇಕು. ಅದರ ಗುಣಮಟ್ಟ, ಬೆಳೆಯ ಪ್ರಮಾಣವನ್ನು ತಿಳಿಸಬೇಕು ಎಂಬ ಷರತ್ತು ಇದೆ. ಒಂದುವೇಳೆ, ಆ ದೇಶದಲ್ಲಿ ಬೆಳೆಯುವ ಉತ್ಪನ್ನಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಆವಕವಾದರೆ ಅದರ ಮಾರುಕಟ್ಟೆಗೆ ಅವಕಾಶ ನೀಡಲಾಗುವುದಿಲ್ಲ’ ಎಂದುಶಿರಸಿಯಲ್ಲಿ ಈಚೆಗೆ ಸಂಸದ ಅನಂತಕುಮಾರ ಹೆಗಡೆ ತಿಳಿಸಿದ್ದರು.</p>.<p>ಅವರ ಜೊತೆಗಿದ್ದ ‘ಕ್ಯಾಂಪ್ಕೊ’ ಅಧ್ಯಕ್ಷ ಸತೀಶ್ಚಂದ್ರ ಪ್ರತಿಕ್ರಿಯಿಸಿ, ‘ಭೂತಾನ್ ಮೂಲಕ ಬೇರೆ ದೇಶಗಳಿಂದ ಅಡಿಕೆ ಬಾರದಂತೆ ನಿಗಾ ವಹಿಸಬೇಕು ಎಂದು ಕೇಂದ್ರ ವಾಣಿಜ್ಯ ಸಚಿವರಿಗೆ ಮನವಿ ಮಾಡಲಾಗಿದೆ’ ಎಂದು ಹೇಳಿದ್ದರು.</p>.<p>* ಭೂತಾನ್ನಲ್ಲಿ ಅಡಿಕೆ ಬೆಳೆಯುವ ಪ್ರಮಾಣ ಅತ್ಯಂತ ಕಡಿಮೆ. ಉಭಯ ದೇಶಗಳ ನಡುವಿನ ಒಪ್ಪಂದ ದುರುಪಯೋಗ ಆಗದಂತೆ ಕೇಂದ್ರ ಸರ್ಕಾರ ಗಮನ ಹರಿಸಬೇಕು.</p>.<p><strong>– ರವೀಶ ಹೆಗಡೆ, ಶಿರಸಿ ಟಿ.ಎಸ್.ಎಸ್.ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>