ಗ್ರಾಮದಲ್ಲಿ ಖಾರ್ಲ್ಯಾಂಡ್ಗೆ ಒಡ್ಡು ನಿರ್ಮಿಸುವ ಕಾಮಗಾರಿಗೆ ಭೂಮಿ ಪೂಜೆ ಮಾಡಲಾಗಿದೆ. ಆದರೆ, ಕಾಮಗಾರಿ ಪೂರ್ಣಗೊಳ್ಳಲು ಬಹಳ ಸಮಯ ಬೇಕಾಗಲಿದೆ. ಅಲ್ಲದೇ ಗ್ರಾಮದ ಕೆಲವು ಪ್ರದೇಶಗಳು ಈ ಯೋಜನೆಯಲ್ಲಿ ಸೇರಿಲ್ಲ ಎನ್ನಲಾಗಿದೆ. ಒಂದುವೇಳೆ, ಬಿಟ್ಟಿದ್ದರೆ ಯೋಜನೆಯು ಫಲ ನೀಡದು. ಗ್ರಾಮದಲ್ಲಿರುವ ಉಪ್ಪು ನೀರಿನ ಸಮಸ್ಯೆ ಬಗೆ ಹರಿಯುವುದಿಲ್ಲ. ಹಾಗಾಗಿ ಬಿಟ್ಟಿರುವ ಪ್ರದೇಶಗಳನ್ನೂ ಯೋಜನೆಗೆ ಸೇರಿಸಬೇಕು ಅಥವಾ ಪ್ರತ್ಯೇಕ ಕಾಮಗಾರಿ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.