‘ವ್ಯಕ್ತಿಯೊಬ್ಬರಿಗೆ ಸೋಂಕು ದೃಢಪಟ್ಟಾಗ ಇಡೀ ಕುಟುಂಬ ಕ್ವಾರಂಟೈನ್ನಲ್ಲಿ ಇರಬೇಕಾಗುತ್ತದೆ. ಅವರಿಗೆ ದಿನಸಿ, ಹಾಲು, ಅನಾರೋಗ್ಯಕ್ಕೊಳಗಾದವರು ಇದ್ದರೆ ಔಷಧ ಬೇಕಾಗುತ್ತದೆ. ಇಂತಹುದೇ ಘಟನೆ ಸಮೀಪದಲ್ಲೇ ನಡೆಯಿತು. ಆಗ ನಾವು, ಅವರ ಕುಟುಂಬಕ್ಕೆ ಸಾಂತ್ವನ ಹೇಳಿ, ಅವರಿಗೆ ಅಗತ್ಯ ಸಾಮಗ್ರಿಗಳನ್ನು ತಂದು, ಮನೆಯ ಗೇಟಿನ ಬಳಿ ಇಟ್ಟು ಬರುತ್ತಿದ್ದೆವು. ನಮ್ಮ ನಡವಳಿಕೆಯನ್ನು ಕಂಡು, ಸುತ್ತಮುತ್ತಲಿನವರೂ ಸಹ ಕ್ರಮೇಣ ಬದಲಾದರು’ ಎನ್ನುತ್ತಾರೆ ಅವರು.