ನಂತರ ಗಣಪತಿ ಭಟ್ ಅವರು ಸಂಗೀತ ಕಚೇರಿ ನಡೆಸಿಕೊಟ್ಟರು. ರಾಗ್ ಜೋಗ ಹಾಡಿದ ನಂತರ ಅವರು ಭಜನ್, ಭಕ್ತಿಗೀತೆ ಹಾಡಿ, ರಾಗ್ ಭೈರವಿಯೊಂದಿಗೆ ಸಂಗೀತ ಕಚೇರಿ ಪೂರ್ಣಗೊಳಿಸಿದರು. ಗೋಪಾಲಕೃಷ್ಣ ಹೆಗಡೆ ಕಲಭಾಗ್ ತಬಲಾದಲ್ಲಿ, ಸತೀಶ ಭಟ್ಟ ಹೆಬ್ಬಾರ್ ಸಂವಾದಿನಿಯಲ್ಲಿ, ವಿನಾಯಕ ಹಿರೇಹದ್ದ ಮತ್ತು ಸಂಪದಾ ಸತೀಶ ತಂಬೂರಾದಲ್ಲಿ ಸಾಥ್ ನೀಡಿದರು. ಭಟ್ಟರ ಕಂಚಿನ ಕಂಠದ ಗಾಯನವು ಕಿಕ್ಕಿರಿದು ತುಂಬಿದ್ದ ಪ್ರೇಕ್ಷಕರನ್ನು ಹೊಸದೊಂದು ಲೋಕಕ್ಕೆ ಕೊಂಡೊಯ್ದಿತ್ತು.