<p><strong>ಶಿರಸಿ: </strong>ತೂಕ ಇಳಿಸಿಕೊಳ್ಳಲು ಬಂದಿರುವ ಸಾಹಸಿ ಕೋಟೆನಗರಿಯ ಜ್ಯೋತಿರಾಜ್ ಅವರು ಒಂದು ತಿಂಗಳಿನಿಂದ ಇಲ್ಲಿನ ನಿಸರ್ಗ ಮನೆಯಲ್ಲಿ ತಂಗಿದ್ದಾರೆ. ಡಾ. ವೆಂಕಟರಮಣ ಹೆಗಡೆ ಅವರ ಈ ಕೇಂದ್ರದಲ್ಲಿ ಪ್ರಕೃತಿ ಚಿಕಿತ್ಸಾ ಪದ್ಧತಿಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.</p>.<p>‘ಜೋತಿರಾಜ್ ಅವರು ಏಂಜಲ್ ಜಲಪಾತ ಹತ್ತುವ ಬಯಕೆಯಿಂದ ತೂಕ ಇಳಿಸಿಕೊಳ್ಳಲು ಇಲ್ಲಿ ದಾಖಲಾಗಿದ್ದಾರೆ. ಡಾ. ಪ್ರವೀಣ ಜೇಕಬ್ ಮಾರ್ಗದರ್ಶನದಲ್ಲಿ ಅವರಿಗೆ ಪ್ರಕೃತಿ ಚಿಕಿತ್ಸೆ ನೀಡಲಾಗುತ್ತಿದೆ. ಈಗಾಗಲೇ ಅವರ ತೂಕವೂ ಇಳಿದಿದೆ’ ಎಂದು ಡಾ.ವೆಂಕಟರಮಣ ಹೆಗಡೆ ‘ಪ್ರಜಾವಾಣಿ’ ಪ್ರತಿಕ್ರಿಯಿಸಿದರು.</p>.<p>ಶನಿವಾರ ಇಲ್ಲಿ ನಡೆದ ಏಕಲವ್ಯ ಡಾನ್ಸ್ಗ್ರೂಪ್ನ ವಾರ್ಷಿಕೋತ್ಸವದಲ್ಲಿ ಭಾಗವಹಿಸಿದ್ದ ಜ್ಯೋತಿರಾಜ್ ಅವರಿಗೆ, ಇದೇ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.</p>.<p>ಅವರು ಜಲಪಾತವೊಂದನ್ನು ಹತ್ತುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅದು ವೆನೆಜುವೆಲಾದ ಏಂಜಲ್ ಜಲಪಾತವಾಗಿದ್ದು, ಎರಡು ದಿನಗಳ ಹಿಂದಷ್ಟೇ ಜ್ಯೋತಿರಾಜ್ ಅದನ್ನು ಹತ್ತುತ್ತಿರುವ ವಿಡಿಯೊ ಎಂಬ ಸಂದೇಶವೂ ಇದರ ಜೊತೆ ಓಡಾಡುತ್ತಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿರಸಿ: </strong>ತೂಕ ಇಳಿಸಿಕೊಳ್ಳಲು ಬಂದಿರುವ ಸಾಹಸಿ ಕೋಟೆನಗರಿಯ ಜ್ಯೋತಿರಾಜ್ ಅವರು ಒಂದು ತಿಂಗಳಿನಿಂದ ಇಲ್ಲಿನ ನಿಸರ್ಗ ಮನೆಯಲ್ಲಿ ತಂಗಿದ್ದಾರೆ. ಡಾ. ವೆಂಕಟರಮಣ ಹೆಗಡೆ ಅವರ ಈ ಕೇಂದ್ರದಲ್ಲಿ ಪ್ರಕೃತಿ ಚಿಕಿತ್ಸಾ ಪದ್ಧತಿಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.</p>.<p>‘ಜೋತಿರಾಜ್ ಅವರು ಏಂಜಲ್ ಜಲಪಾತ ಹತ್ತುವ ಬಯಕೆಯಿಂದ ತೂಕ ಇಳಿಸಿಕೊಳ್ಳಲು ಇಲ್ಲಿ ದಾಖಲಾಗಿದ್ದಾರೆ. ಡಾ. ಪ್ರವೀಣ ಜೇಕಬ್ ಮಾರ್ಗದರ್ಶನದಲ್ಲಿ ಅವರಿಗೆ ಪ್ರಕೃತಿ ಚಿಕಿತ್ಸೆ ನೀಡಲಾಗುತ್ತಿದೆ. ಈಗಾಗಲೇ ಅವರ ತೂಕವೂ ಇಳಿದಿದೆ’ ಎಂದು ಡಾ.ವೆಂಕಟರಮಣ ಹೆಗಡೆ ‘ಪ್ರಜಾವಾಣಿ’ ಪ್ರತಿಕ್ರಿಯಿಸಿದರು.</p>.<p>ಶನಿವಾರ ಇಲ್ಲಿ ನಡೆದ ಏಕಲವ್ಯ ಡಾನ್ಸ್ಗ್ರೂಪ್ನ ವಾರ್ಷಿಕೋತ್ಸವದಲ್ಲಿ ಭಾಗವಹಿಸಿದ್ದ ಜ್ಯೋತಿರಾಜ್ ಅವರಿಗೆ, ಇದೇ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.</p>.<p>ಅವರು ಜಲಪಾತವೊಂದನ್ನು ಹತ್ತುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅದು ವೆನೆಜುವೆಲಾದ ಏಂಜಲ್ ಜಲಪಾತವಾಗಿದ್ದು, ಎರಡು ದಿನಗಳ ಹಿಂದಷ್ಟೇ ಜ್ಯೋತಿರಾಜ್ ಅದನ್ನು ಹತ್ತುತ್ತಿರುವ ವಿಡಿಯೊ ಎಂಬ ಸಂದೇಶವೂ ಇದರ ಜೊತೆ ಓಡಾಡುತ್ತಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>