ಘಟನಾ ಸ್ಥಳದಲ್ಲಿಒಟ್ಟು ಐವರುಕೆಲಸ ಮಾಡುತ್ತಿದ್ದರು. ಹಳೆಯ ಸೇತುವೆಯನ್ನು ತೆರವು ಮಾಡುತ್ತಿದ್ದಾಗಅದರ ಒಂದು ಭಾಗ ಅಕಸ್ಮಾತ್ ತುಂಡಾಗಿ ನಾರಾಯಣ ಕೆಳಗೆ ಬಿದ್ದರು. ಅವರ ಮೇಲೆ ಸೇತುವೆಯ ಉಳಿದ ಭಾಗವೂಬಿದ್ದ ಪರಿಣಾಮ ಮೇಲೇಳಲುಸಾಧ್ಯವಾಗಲಿಲ್ಲ.ಅವಶೇಷದಕೆಳಗೆ ಸಿಲುಕಿದ್ದ ಅವರನ್ನುಕೂಡಲೇ ಮೇಲೆತ್ತಿಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಿದರೂ ಫಲಕಾರಿಯಾಗಲಿಲ್ಲ.