<p><strong>ಗೋಕರ್ಣ</strong>: ಇಲ್ಲಿನ ಮೀನು ಪೇಟೆಯ ಹಿಂಬದಿಯಿರುವನಾಲೆಯಹಳೇಕಿರು ಸೇತುವೆ ಗುರುವಾರ ಮುರಿದುಬಿದ್ದು ಕಾರ್ಮಿಕರೊಬ್ಬರು ಮೃತಪಟ್ಟಿದ್ದಾರೆ. ಹೊಸ ಸೇತುವೆ ಸಲುವಾಗಿ ಅದನ್ನು ತೆರವು ಮಾಡುತ್ತಿದ್ದಾಗ ದುರ್ಘಟನೆ ನಡೆದಿದೆ.</p>.<p>ಸಮೀಪದತಾರಮಕ್ಕಿಯ ನಿವಾಸಿ ನಾರಾಯಣ ಗುರವಾ ಗೌಡ (46) ಮೃತರು.</p>.<p>ಹಳೆಯ ಕಿರು ಸೇತುವೆಯನ್ನುಜನರು ನಡೆದುಕೊಂಡು ಹೋಗಲು ಬಳಸುತ್ತಿದ್ದರು. ಅದು ಶಿಥಿಲಾವಸ್ಥೆಗೆ ಬಂದಿದ್ದ ಕಾರಣ ಹೊಸ ಸೇತುವೆಯ ಕಾಮಗಾರಿಯನ್ನು ಗ್ರಾಮ ಪಂಚಾಯ್ತಿ ಆರಂಭಿಸಿತ್ತು. ಕಾರ್ಮಿಕರು ದಿನದಕೆಲಸ ಮುಗಿಸಿ ಮನೆಗೆ ಹೊರಡಲು ಕೆಲವೇ ಸಮಯವಿದ್ದಾಗದುರ್ಘಟನೆ ನಡೆದಿದೆ.</p>.<p>ಘಟನಾ ಸ್ಥಳದಲ್ಲಿಒಟ್ಟು ಐವರುಕೆಲಸ ಮಾಡುತ್ತಿದ್ದರು. ಹಳೆಯ ಸೇತುವೆಯನ್ನು ತೆರವು ಮಾಡುತ್ತಿದ್ದಾಗಅದರ ಒಂದು ಭಾಗ ಅಕಸ್ಮಾತ್ ತುಂಡಾಗಿ ನಾರಾಯಣ ಕೆಳಗೆ ಬಿದ್ದರು. ಅವರ ಮೇಲೆ ಸೇತುವೆಯ ಉಳಿದ ಭಾಗವೂಬಿದ್ದ ಪರಿಣಾಮ ಮೇಲೇಳಲುಸಾಧ್ಯವಾಗಲಿಲ್ಲ.ಅವಶೇಷದಕೆಳಗೆ ಸಿಲುಕಿದ್ದ ಅವರನ್ನುಕೂಡಲೇ ಮೇಲೆತ್ತಿಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಿದರೂ ಫಲಕಾರಿಯಾಗಲಿಲ್ಲ.</p>.<p>ಸೌಮ್ಯ ಸ್ವಭಾವದವರಾಗಿದ್ದ ಅವರು ಪ್ರಾಮಾಣಿಕ ಕೆಲಸಗಾರ ಎಂದು ಎಲ್ಲರಿಗೂ ಪರಿಚಿತರಾಗಿದ್ದರು. ಅವರಿಗೆ ಪತ್ನಿ ಹಾಗೂ ಇಬ್ಬರು ಚಿಕ್ಕ ಮಕ್ಕಳಿದ್ದಾರೆ.</p>.<p>ಸ್ಥಳಕ್ಕೆ ಗ್ರಾಮ ಪಂಚಾಯ್ತಿ ಅಧಿಕಾರಿಗಳು, ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಿ.ಎಸ್.ಐ ನವೀನ ನಾಯ್ಕ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗೋಕರ್ಣ</strong>: ಇಲ್ಲಿನ ಮೀನು ಪೇಟೆಯ ಹಿಂಬದಿಯಿರುವನಾಲೆಯಹಳೇಕಿರು ಸೇತುವೆ ಗುರುವಾರ ಮುರಿದುಬಿದ್ದು ಕಾರ್ಮಿಕರೊಬ್ಬರು ಮೃತಪಟ್ಟಿದ್ದಾರೆ. ಹೊಸ ಸೇತುವೆ ಸಲುವಾಗಿ ಅದನ್ನು ತೆರವು ಮಾಡುತ್ತಿದ್ದಾಗ ದುರ್ಘಟನೆ ನಡೆದಿದೆ.</p>.<p>ಸಮೀಪದತಾರಮಕ್ಕಿಯ ನಿವಾಸಿ ನಾರಾಯಣ ಗುರವಾ ಗೌಡ (46) ಮೃತರು.</p>.<p>ಹಳೆಯ ಕಿರು ಸೇತುವೆಯನ್ನುಜನರು ನಡೆದುಕೊಂಡು ಹೋಗಲು ಬಳಸುತ್ತಿದ್ದರು. ಅದು ಶಿಥಿಲಾವಸ್ಥೆಗೆ ಬಂದಿದ್ದ ಕಾರಣ ಹೊಸ ಸೇತುವೆಯ ಕಾಮಗಾರಿಯನ್ನು ಗ್ರಾಮ ಪಂಚಾಯ್ತಿ ಆರಂಭಿಸಿತ್ತು. ಕಾರ್ಮಿಕರು ದಿನದಕೆಲಸ ಮುಗಿಸಿ ಮನೆಗೆ ಹೊರಡಲು ಕೆಲವೇ ಸಮಯವಿದ್ದಾಗದುರ್ಘಟನೆ ನಡೆದಿದೆ.</p>.<p>ಘಟನಾ ಸ್ಥಳದಲ್ಲಿಒಟ್ಟು ಐವರುಕೆಲಸ ಮಾಡುತ್ತಿದ್ದರು. ಹಳೆಯ ಸೇತುವೆಯನ್ನು ತೆರವು ಮಾಡುತ್ತಿದ್ದಾಗಅದರ ಒಂದು ಭಾಗ ಅಕಸ್ಮಾತ್ ತುಂಡಾಗಿ ನಾರಾಯಣ ಕೆಳಗೆ ಬಿದ್ದರು. ಅವರ ಮೇಲೆ ಸೇತುವೆಯ ಉಳಿದ ಭಾಗವೂಬಿದ್ದ ಪರಿಣಾಮ ಮೇಲೇಳಲುಸಾಧ್ಯವಾಗಲಿಲ್ಲ.ಅವಶೇಷದಕೆಳಗೆ ಸಿಲುಕಿದ್ದ ಅವರನ್ನುಕೂಡಲೇ ಮೇಲೆತ್ತಿಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಿದರೂ ಫಲಕಾರಿಯಾಗಲಿಲ್ಲ.</p>.<p>ಸೌಮ್ಯ ಸ್ವಭಾವದವರಾಗಿದ್ದ ಅವರು ಪ್ರಾಮಾಣಿಕ ಕೆಲಸಗಾರ ಎಂದು ಎಲ್ಲರಿಗೂ ಪರಿಚಿತರಾಗಿದ್ದರು. ಅವರಿಗೆ ಪತ್ನಿ ಹಾಗೂ ಇಬ್ಬರು ಚಿಕ್ಕ ಮಕ್ಕಳಿದ್ದಾರೆ.</p>.<p>ಸ್ಥಳಕ್ಕೆ ಗ್ರಾಮ ಪಂಚಾಯ್ತಿ ಅಧಿಕಾರಿಗಳು, ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಿ.ಎಸ್.ಐ ನವೀನ ನಾಯ್ಕ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>