<p><strong>ಶಿರಸಿ:</strong> ಸುತ್ತಲೂ ಆಳೆತ್ತರದವರೆಗೆ ಗಿಡಗಂಟಿ ಬೆಳೆದುಕೊಂಡಿದೆ. ಅದರ ನಡುವೆ ತಗಡುಗಳನ್ನು ಜೋಡಿಸಿ ರೂಪಿಸಿದ ತಾತ್ಕಾಲಿಕ ಮನೆ. ಇದು ಅಲೆಮಾರಿ ಕಾರ್ಮಿಕರ ವಾಸಸ್ಥಾನವಲ್ಲ! ನಲ್ವತ್ತಕ್ಕೂ ಹೆಚ್ಚು ಚಿಣ್ಣರು ಕಲಿಯುವ ಅಂಗನವಾಡಿ ಕೇಂದ್ರ.</p>.<p>ಇಲ್ಲಿನ ರಾಜೀವ ನಗರದಲ್ಲಿರುವ 2ನೇ ಅಂಗನವಾಡಿ ಕೇಂದ್ರದ ಚಿತ್ರಣವಿದು. ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಈ ಪ್ರದೇಶದಲ್ಲಿ ಎರಡು ಅಂಗನವಾಡಿ ಕೇಂದ್ರಗಳಿವೆ. ಒಂದು ಅಂಗನವಾಡಿ ಸರ್ಕಾರಿ ಶಾಲೆಯ ಕಟ್ಟಡದಲ್ಲಿ ನಡೆಯುತ್ತಿದೆ. ಇನ್ನೊಂದು ಅಂಗನವಾಡಿ ಕೇಂದ್ರಕ್ಕೆ ತಗಡಿನ ಶೆಡ್ ಆಸರೆಯಾಗಿದೆ.</p>.<p>ಕಳೆದ ಐದು ವರ್ಷಗಳಿಂದಲೂ ಇದೇ ಶೆಡ್ ಒಳಗೆ ಮಕ್ಕಳು ಆಡಿ ನಲಿಯುತ್ತಿದ್ದಾರೆ. ಬಾಲ್ಯದ ಚಟುವಟಿಕೆಗಳಿಗೆ ಈ ಶೆಡ್ ಒಳಗೆ ಕಲ್ಪಿಸಿದ ಸೌಕರ್ಯಗಳು ಆಸರೆಯಾಗಿವೆ. ಮಕ್ಕಳಿಗೆ ಈ ಮಾದರಿಯ ಕಟ್ಟಡದೊಳಗೆ ಕಲಿಕೆ ಹೊಸ ಅನುಭವ ನಿಡುತ್ತಿದ್ದರೆ, ಪಾಲಕರು ಮಾತ್ರ ಆತಂಕದಲ್ಲಿ ಮಕ್ಕಳನ್ನು ಅಂಗನವಾಡಿ ಕೇಂದ್ರಕ್ಕೆ ಕಳಿಸಿಕೊಡುವ ಸನ್ನಿವೇಶ ಎದುರಾಗಿದೆ.</p>.<p>‘ಈ ಪ್ರದೇಶದಲ್ಲಿ ಅಂಗನವಾಡಿ ಕೇಂದ್ರದ ಅಗತ್ಯತೆ ಇದೆ. ಪ್ರತಿ ವರ್ಷ 40ಕ್ಕಿಂತ ಹೆಚ್ಚು ಮಕ್ಕಳು ಪ್ರವೇಶಾತಿ ಪಡೆಯುತ್ತಿದ್ದಾರೆ. ಬಾಡಿಗೆ ಕಟ್ಟಡ ಲಭ್ಯತೆ ಇಲ್ಲದೆ ಪ್ರತ್ಯೇಕ ಕಟ್ಟಡ ನಿರ್ಮಿಸಿಕೊಂಡಿದ್ದೇವೆ’ ಎನ್ನುತ್ತಾರೆ ಅಂಗನವಾಡಿ ಸಿಬ್ಬಂದಿ.</p>.<p>‘ಹತ್ತಾರು ಮಕ್ಕಳು ಓದುವ ಅಂಗನವಾಡಿ ಕೇಂದ್ರಕ್ಕೆ ಸುಸಜ್ಜಿತ ಕಟ್ಟಡ ನೀಡಿಲ್ಲ. ಸಮೀಪವೇ ಗಿಡಗಂಟಿಗಳು, ಪೊಟರೆಗಳಿರುವ ಪರಿಣಾಮ ಸರಿಸೃಪಗಳು ಅಂಗನವಾಡಿಯೊಳಗೆ ನುಗ್ಗುವ ಆತಂಕವಿದೆ. ಮಳೆಗಾಲದಲ್ಲಿ ಈ ಸಮಸ್ಯೆ ಹೆಚ್ಚುತ್ತದೆ. ಇದರಿಂದ ಮಕ್ಕಳ ಸುರಕ್ಷತೆಯ ಕುರಿತು ಭಯ ಮೂಡುತ್ತದೆ’ ಎಂದು ಪಾಲಕ ನಸ್ರುದ್ದೀನ್ ಶೇಖ್ ಹೇಳುತ್ತಾರೆ.</p>.<p>‘ಬಡ ಮತ್ತು ಕೂಲಿಕಾರ್ಮಿಕರ ಮಕ್ಕಳೆ ಈ ಅಂಗನವಾಡಿ ಕೇಂದ್ರವನ್ನು ಆಶ್ರಯಿಸಿಕೊಂಡಿದ್ದಾರೆ. ಪಾಲಕರು ಮಕ್ಕಳನ್ನು ಇಲ್ಲಿ ಬಿಟ್ಟು ಕೂಲಿ ಕೆಲಸಕ್ಕೆ ತೆರಳುವ ಪ್ರಸಂಗವೂ ಎದುರಾಗುತ್ತದೆ. ಕೋವಿಡ್ ಸ್ಥಿತಿ ಹೊರತುಪಡಿಸಿ ಉಳಿದ ದಿನಗಳಲ್ಲಿ ಇಡೀ ದಿನ ಮಕ್ಕಳು ಶೆಡ್ ಮಾದರಿಯ ಕಟ್ಟಡದಲ್ಲಿ ಕಳೆಯುವದು ಕಷ್ಟವಾಗುತ್ತಿತ್ತು’ ಎಂದು ಬಾಲವಿಕಾಸ ಸಮಿತಿಯ ಸದಸ್ಯರೊಬ್ಬರು ಹೇಳಿದರು.</p>.<p><strong>ಪಾಲಕರ ವಂತಿಗೆಯಿಂದ ಶೆಡ್: </strong>‘ಬಾಡಿಗೆ ಕಟ್ಟಡವೂ ಸಿಗದಿದ್ದಾಗ ಮಕ್ಕಳಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಹಲವು ಪಾಲಕರೇ ಹಣ ಸಂಗ್ರಹಿಸಿ ತಾತ್ಕಾಲಿಕ ಶೆಡ್ ನಿರ್ಮಿಸಿಕೊಟ್ಟರು. ಸುಮಾರು ₹35 ಸಾವಿರ ವೆಚ್ಚದಲ್ಲಿ ನಿರ್ಮಾಣವಾದ ಕಟ್ಟಡ ಸುರಕ್ಷಿತವಾಗಿ ಐದು ವರ್ಷಗಳಿಂದ ನಡೆಯುತ್ತಿದೆ’ ಎನ್ನುತ್ತಾರೆ ಬಾಲವಿಕಾಸ ಸಮಿತಿಯ ಸದಸ್ಯರು.</p>.<p>ಶೆಡ್ನಲ್ಲಿ ಸೌರವಿದ್ಯುತ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಒಳಾಂಗಣದಲ್ಲಿ ಮಕ್ಕಳಿಗೆ ಅಗತ್ಯ ಪಾಠೋಪಕರಣಗಳ ವ್ಯವಸ್ಥೆಯೂ ಇದೆ.</p>.<p>*<br />ಜಾಗದ ಕೊರತೆಯಿಂದ ತಾತ್ಕಾಲಿಕ ಕಟ್ಟಡದಲ್ಲಿ ಅಂಗನವಾಡಿ ನಡೆಯುತ್ತಿದೆ. ಸೂಕ್ತ ಜಾಗ ಒದಗಿಸಿಕೊಡುವಂತೆ ನಗರಸಭೆಗೂ ಮನವಿ ಮಾಡಿದ್ದೇವೆ.<br /><em><strong>-ದತ್ತಾತ್ರೇಯ ಭಟ್, ತಾಲ್ಲೂಕು ಶಿಶು ಅಭಿವೃದ್ಧಿ ಅಧಿಕಾರ</strong></em></p>.<p>*<br />ಅಂಗನವಾಡಿ ಕೇಂದ್ರಕ್ಕೆ ಸೂಕ್ತ ಜಾಗ ಒದಗಿಸಲು ಪ್ರಯತ್ನಿಸಲಾಗುವುದು.<br /><em><strong>-ಗಣಪತಿ ನಾಯ್ಕ, ನಗರಸಭೆ ಅಧ್ಯಕ್ಷ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿರಸಿ:</strong> ಸುತ್ತಲೂ ಆಳೆತ್ತರದವರೆಗೆ ಗಿಡಗಂಟಿ ಬೆಳೆದುಕೊಂಡಿದೆ. ಅದರ ನಡುವೆ ತಗಡುಗಳನ್ನು ಜೋಡಿಸಿ ರೂಪಿಸಿದ ತಾತ್ಕಾಲಿಕ ಮನೆ. ಇದು ಅಲೆಮಾರಿ ಕಾರ್ಮಿಕರ ವಾಸಸ್ಥಾನವಲ್ಲ! ನಲ್ವತ್ತಕ್ಕೂ ಹೆಚ್ಚು ಚಿಣ್ಣರು ಕಲಿಯುವ ಅಂಗನವಾಡಿ ಕೇಂದ್ರ.</p>.<p>ಇಲ್ಲಿನ ರಾಜೀವ ನಗರದಲ್ಲಿರುವ 2ನೇ ಅಂಗನವಾಡಿ ಕೇಂದ್ರದ ಚಿತ್ರಣವಿದು. ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಈ ಪ್ರದೇಶದಲ್ಲಿ ಎರಡು ಅಂಗನವಾಡಿ ಕೇಂದ್ರಗಳಿವೆ. ಒಂದು ಅಂಗನವಾಡಿ ಸರ್ಕಾರಿ ಶಾಲೆಯ ಕಟ್ಟಡದಲ್ಲಿ ನಡೆಯುತ್ತಿದೆ. ಇನ್ನೊಂದು ಅಂಗನವಾಡಿ ಕೇಂದ್ರಕ್ಕೆ ತಗಡಿನ ಶೆಡ್ ಆಸರೆಯಾಗಿದೆ.</p>.<p>ಕಳೆದ ಐದು ವರ್ಷಗಳಿಂದಲೂ ಇದೇ ಶೆಡ್ ಒಳಗೆ ಮಕ್ಕಳು ಆಡಿ ನಲಿಯುತ್ತಿದ್ದಾರೆ. ಬಾಲ್ಯದ ಚಟುವಟಿಕೆಗಳಿಗೆ ಈ ಶೆಡ್ ಒಳಗೆ ಕಲ್ಪಿಸಿದ ಸೌಕರ್ಯಗಳು ಆಸರೆಯಾಗಿವೆ. ಮಕ್ಕಳಿಗೆ ಈ ಮಾದರಿಯ ಕಟ್ಟಡದೊಳಗೆ ಕಲಿಕೆ ಹೊಸ ಅನುಭವ ನಿಡುತ್ತಿದ್ದರೆ, ಪಾಲಕರು ಮಾತ್ರ ಆತಂಕದಲ್ಲಿ ಮಕ್ಕಳನ್ನು ಅಂಗನವಾಡಿ ಕೇಂದ್ರಕ್ಕೆ ಕಳಿಸಿಕೊಡುವ ಸನ್ನಿವೇಶ ಎದುರಾಗಿದೆ.</p>.<p>‘ಈ ಪ್ರದೇಶದಲ್ಲಿ ಅಂಗನವಾಡಿ ಕೇಂದ್ರದ ಅಗತ್ಯತೆ ಇದೆ. ಪ್ರತಿ ವರ್ಷ 40ಕ್ಕಿಂತ ಹೆಚ್ಚು ಮಕ್ಕಳು ಪ್ರವೇಶಾತಿ ಪಡೆಯುತ್ತಿದ್ದಾರೆ. ಬಾಡಿಗೆ ಕಟ್ಟಡ ಲಭ್ಯತೆ ಇಲ್ಲದೆ ಪ್ರತ್ಯೇಕ ಕಟ್ಟಡ ನಿರ್ಮಿಸಿಕೊಂಡಿದ್ದೇವೆ’ ಎನ್ನುತ್ತಾರೆ ಅಂಗನವಾಡಿ ಸಿಬ್ಬಂದಿ.</p>.<p>‘ಹತ್ತಾರು ಮಕ್ಕಳು ಓದುವ ಅಂಗನವಾಡಿ ಕೇಂದ್ರಕ್ಕೆ ಸುಸಜ್ಜಿತ ಕಟ್ಟಡ ನೀಡಿಲ್ಲ. ಸಮೀಪವೇ ಗಿಡಗಂಟಿಗಳು, ಪೊಟರೆಗಳಿರುವ ಪರಿಣಾಮ ಸರಿಸೃಪಗಳು ಅಂಗನವಾಡಿಯೊಳಗೆ ನುಗ್ಗುವ ಆತಂಕವಿದೆ. ಮಳೆಗಾಲದಲ್ಲಿ ಈ ಸಮಸ್ಯೆ ಹೆಚ್ಚುತ್ತದೆ. ಇದರಿಂದ ಮಕ್ಕಳ ಸುರಕ್ಷತೆಯ ಕುರಿತು ಭಯ ಮೂಡುತ್ತದೆ’ ಎಂದು ಪಾಲಕ ನಸ್ರುದ್ದೀನ್ ಶೇಖ್ ಹೇಳುತ್ತಾರೆ.</p>.<p>‘ಬಡ ಮತ್ತು ಕೂಲಿಕಾರ್ಮಿಕರ ಮಕ್ಕಳೆ ಈ ಅಂಗನವಾಡಿ ಕೇಂದ್ರವನ್ನು ಆಶ್ರಯಿಸಿಕೊಂಡಿದ್ದಾರೆ. ಪಾಲಕರು ಮಕ್ಕಳನ್ನು ಇಲ್ಲಿ ಬಿಟ್ಟು ಕೂಲಿ ಕೆಲಸಕ್ಕೆ ತೆರಳುವ ಪ್ರಸಂಗವೂ ಎದುರಾಗುತ್ತದೆ. ಕೋವಿಡ್ ಸ್ಥಿತಿ ಹೊರತುಪಡಿಸಿ ಉಳಿದ ದಿನಗಳಲ್ಲಿ ಇಡೀ ದಿನ ಮಕ್ಕಳು ಶೆಡ್ ಮಾದರಿಯ ಕಟ್ಟಡದಲ್ಲಿ ಕಳೆಯುವದು ಕಷ್ಟವಾಗುತ್ತಿತ್ತು’ ಎಂದು ಬಾಲವಿಕಾಸ ಸಮಿತಿಯ ಸದಸ್ಯರೊಬ್ಬರು ಹೇಳಿದರು.</p>.<p><strong>ಪಾಲಕರ ವಂತಿಗೆಯಿಂದ ಶೆಡ್: </strong>‘ಬಾಡಿಗೆ ಕಟ್ಟಡವೂ ಸಿಗದಿದ್ದಾಗ ಮಕ್ಕಳಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಹಲವು ಪಾಲಕರೇ ಹಣ ಸಂಗ್ರಹಿಸಿ ತಾತ್ಕಾಲಿಕ ಶೆಡ್ ನಿರ್ಮಿಸಿಕೊಟ್ಟರು. ಸುಮಾರು ₹35 ಸಾವಿರ ವೆಚ್ಚದಲ್ಲಿ ನಿರ್ಮಾಣವಾದ ಕಟ್ಟಡ ಸುರಕ್ಷಿತವಾಗಿ ಐದು ವರ್ಷಗಳಿಂದ ನಡೆಯುತ್ತಿದೆ’ ಎನ್ನುತ್ತಾರೆ ಬಾಲವಿಕಾಸ ಸಮಿತಿಯ ಸದಸ್ಯರು.</p>.<p>ಶೆಡ್ನಲ್ಲಿ ಸೌರವಿದ್ಯುತ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಒಳಾಂಗಣದಲ್ಲಿ ಮಕ್ಕಳಿಗೆ ಅಗತ್ಯ ಪಾಠೋಪಕರಣಗಳ ವ್ಯವಸ್ಥೆಯೂ ಇದೆ.</p>.<p>*<br />ಜಾಗದ ಕೊರತೆಯಿಂದ ತಾತ್ಕಾಲಿಕ ಕಟ್ಟಡದಲ್ಲಿ ಅಂಗನವಾಡಿ ನಡೆಯುತ್ತಿದೆ. ಸೂಕ್ತ ಜಾಗ ಒದಗಿಸಿಕೊಡುವಂತೆ ನಗರಸಭೆಗೂ ಮನವಿ ಮಾಡಿದ್ದೇವೆ.<br /><em><strong>-ದತ್ತಾತ್ರೇಯ ಭಟ್, ತಾಲ್ಲೂಕು ಶಿಶು ಅಭಿವೃದ್ಧಿ ಅಧಿಕಾರ</strong></em></p>.<p>*<br />ಅಂಗನವಾಡಿ ಕೇಂದ್ರಕ್ಕೆ ಸೂಕ್ತ ಜಾಗ ಒದಗಿಸಲು ಪ್ರಯತ್ನಿಸಲಾಗುವುದು.<br /><em><strong>-ಗಣಪತಿ ನಾಯ್ಕ, ನಗರಸಭೆ ಅಧ್ಯಕ್ಷ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>