ಜಿಲ್ಲಾ ಸಂಘಗಳ ನೋಂದಣಾಧಿಕಾರಿ ಮತ್ತು ಉಪ ನಿಬಂಧಕರರನ್ನು ಮಂಗಳವಾರ ಭೇಟಿ ಮಾಡಿದ ನಾಲ್ವರು ಪದಾಧಿಕಾರಿಗಳು, ಸಮಿತಿಗೆ ರಾಜೀನಾಮೆ ನೀಡಿದ್ದಾಗಿ ಲಿಖಿತವಾಗಿ ತಿಳಿಸಿದ್ದಾರೆ. ಕಾರ್ಯದರ್ಶಿ ಮಹೇಶ ಎನ್.ಗೌಡ, ಕಾರ್ಯಕಾರಿ ಸದಸ್ಯರಾದ ಸುಕ್ರಿ ಬೊಮ್ಮು ಗೌಡ, ವೆಂಕಟೇಶ ಗಣಪತಿ ಗೌಡ, ನಾಗೇಶ ಈರಾ ಅಗೇರ ಸಮಿತಿಯಲ್ಲಿ ಮುಂದುವರಿಯಲು ಇಚ್ಛೆಯಿಲ್ಲ ಎಂದು ಹೇಳಿದ್ದಾರೆ.