ಪ್ರತಿ ವರ್ಷವು ತಡ ರಾತ್ರಿಯವರೆಗೆ ಗಣೇಶ ವಿಸರ್ಜನೆಯ ಮೆರವಣಿಗೆ ನಡೆಯುತ್ತಿತ್ತು. ಆದರೆ ಈ ಬಾರಿ ಕೋವಿಡ್ ನಿಯಮಗಳನ್ನು ಪಾಲಿಸುವ ಸಲುವಾಗಿ ಸಂಜೆ 7 ಗಂಟೆಗೇ ಗಣೇಶ ವಿಸರ್ಜನಾ ಮೆರವಣಿಯನ್ನು ಪ್ರಾರಂಭಿಸಲಾಯಿತು. ಗಣೇಶನ ಮೆರವಣಿಗೆ ದರ್ಗಾ ಪ್ರವೇಶಿಸಿದ್ದನ್ನು ಕಂಡು ಮೌಲ್ವಿ ಮುಜಾವರ್ ಇಬ್ರಾಹಿಂ ಗಣಪನಿಗೆ ಕಾಯಿ, ಕರ್ಪೂರ ಅರ್ಪಿಸಿ ಪೂಜೆ ಸಲ್ಲಿಸಿ ಬೀಳ್ಕೊಟ್ಟರು.