<p><strong>ದಾಂಡೇಲಿ (ಉತ್ತರ ಕನ್ನಡ):</strong> ಇಲ್ಲಿನ ವಿನಾಯಕ ನಗರದ ಗಜಾನನ ಮಂಡಳಿಯ ಗಣೇಶ ವಿಸರ್ಜನಾ ಮೆರವಣಿಗೆಯು ಮಂಗಳವಾರ ರಾತ್ರಿ ಸಾಗುತ್ತಿದ್ದಾಗ ಅನಿರೀಕ್ಷಿತವಾಗಿ ಮಾರ್ಗಮಧ್ಯದಲ್ಲಿ ದರ್ಗಾ ಪ್ರವೇಶಿಸಿದ ಸಂದರ್ಭದಲ್ಲಿ ಮಸೀದಿಯ ಮೌಲ್ವಿ ಗಣೇಶನಿಗೆ ಪೂಜೆ ಸಲ್ಲಿಸಿ ಬೀಳ್ಕೊಟ್ಟರು.</p>.<p>ಐದನೇ ದಿನದ ಗಣೇಶ ವಿಸರ್ಜನಾ ಸಮಯದಲ್ಲಿ ಹಳಿಯಾಳ ರಸ್ತೆಯ ರೋಷನಿ ಮೋಹರಂ ಕಮಿಟಿಯ ದರ್ಗಾದ ಆವರಣದಲ್ಲಿ ಈ ಅಪರೂಪದ ಪ್ರಸಂಗ ನಡೆದಿದೆ.</p>.<p>ಪ್ರತಿ ವರ್ಷವು ತಡ ರಾತ್ರಿಯವರೆಗೆ ಗಣೇಶ ವಿಸರ್ಜನೆಯ ಮೆರವಣಿಗೆ ನಡೆಯುತ್ತಿತ್ತು. ಆದರೆ ಈ ಬಾರಿ ಕೋವಿಡ್ ನಿಯಮಗಳನ್ನು ಪಾಲಿಸುವ ಸಲುವಾಗಿ ಸಂಜೆ 7 ಗಂಟೆಗೇ ಗಣೇಶ ವಿಸರ್ಜನಾ ಮೆರವಣಿಯನ್ನು ಪ್ರಾರಂಭಿಸಲಾಯಿತು. ಗಣೇಶನ ಮೆರವಣಿಗೆ ದರ್ಗಾ ಪ್ರವೇಶಿಸಿದ್ದನ್ನು ಕಂಡು ಮೌಲ್ವಿ ಮುಜಾವರ್ ಇಬ್ರಾಹಿಂ ಗಣಪನಿಗೆ ಕಾಯಿ, ಕರ್ಪೂರ ಅರ್ಪಿಸಿ ಪೂಜೆ ಸಲ್ಲಿಸಿ ಬೀಳ್ಕೊಟ್ಟರು.</p>.<p>ನಗರದಲ್ಲಿ ಇದೇ ಮೊದಲ ಬಾರಿಗೆ ಈ ರೀತಿ ನಡೆದಿದೆ ಎನ್ನಲಾಗಿದ್ದು ಈ ಸೌಹಾರ್ದದ ಕ್ಷಣಕ್ಕೆ ನೂರಾರು ಜನರು ಸಾಕ್ಷಿಯಾದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾಂಡೇಲಿ (ಉತ್ತರ ಕನ್ನಡ):</strong> ಇಲ್ಲಿನ ವಿನಾಯಕ ನಗರದ ಗಜಾನನ ಮಂಡಳಿಯ ಗಣೇಶ ವಿಸರ್ಜನಾ ಮೆರವಣಿಗೆಯು ಮಂಗಳವಾರ ರಾತ್ರಿ ಸಾಗುತ್ತಿದ್ದಾಗ ಅನಿರೀಕ್ಷಿತವಾಗಿ ಮಾರ್ಗಮಧ್ಯದಲ್ಲಿ ದರ್ಗಾ ಪ್ರವೇಶಿಸಿದ ಸಂದರ್ಭದಲ್ಲಿ ಮಸೀದಿಯ ಮೌಲ್ವಿ ಗಣೇಶನಿಗೆ ಪೂಜೆ ಸಲ್ಲಿಸಿ ಬೀಳ್ಕೊಟ್ಟರು.</p>.<p>ಐದನೇ ದಿನದ ಗಣೇಶ ವಿಸರ್ಜನಾ ಸಮಯದಲ್ಲಿ ಹಳಿಯಾಳ ರಸ್ತೆಯ ರೋಷನಿ ಮೋಹರಂ ಕಮಿಟಿಯ ದರ್ಗಾದ ಆವರಣದಲ್ಲಿ ಈ ಅಪರೂಪದ ಪ್ರಸಂಗ ನಡೆದಿದೆ.</p>.<p>ಪ್ರತಿ ವರ್ಷವು ತಡ ರಾತ್ರಿಯವರೆಗೆ ಗಣೇಶ ವಿಸರ್ಜನೆಯ ಮೆರವಣಿಗೆ ನಡೆಯುತ್ತಿತ್ತು. ಆದರೆ ಈ ಬಾರಿ ಕೋವಿಡ್ ನಿಯಮಗಳನ್ನು ಪಾಲಿಸುವ ಸಲುವಾಗಿ ಸಂಜೆ 7 ಗಂಟೆಗೇ ಗಣೇಶ ವಿಸರ್ಜನಾ ಮೆರವಣಿಯನ್ನು ಪ್ರಾರಂಭಿಸಲಾಯಿತು. ಗಣೇಶನ ಮೆರವಣಿಗೆ ದರ್ಗಾ ಪ್ರವೇಶಿಸಿದ್ದನ್ನು ಕಂಡು ಮೌಲ್ವಿ ಮುಜಾವರ್ ಇಬ್ರಾಹಿಂ ಗಣಪನಿಗೆ ಕಾಯಿ, ಕರ್ಪೂರ ಅರ್ಪಿಸಿ ಪೂಜೆ ಸಲ್ಲಿಸಿ ಬೀಳ್ಕೊಟ್ಟರು.</p>.<p>ನಗರದಲ್ಲಿ ಇದೇ ಮೊದಲ ಬಾರಿಗೆ ಈ ರೀತಿ ನಡೆದಿದೆ ಎನ್ನಲಾಗಿದ್ದು ಈ ಸೌಹಾರ್ದದ ಕ್ಷಣಕ್ಕೆ ನೂರಾರು ಜನರು ಸಾಕ್ಷಿಯಾದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>