ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣಪನಿಗೆ ಮೌಲ್ವಿಯಿಂದ ಪೂಜೆ

ದರ್ಗಾಕ್ಕೆ ಪ್ರವೇಶಿಸಿದ ಗಣೇಶ ವಿಸರ್ಜನಾ ಮೆರವಣಿಗೆ
Last Updated 15 ಸೆಪ್ಟೆಂಬರ್ 2021, 21:05 IST
ಅಕ್ಷರ ಗಾತ್ರ

ದಾಂಡೇಲಿ (ಉತ್ತರ ಕನ್ನಡ): ಇಲ್ಲಿನ ವಿನಾಯಕ ನಗರದ ಗಜಾನನ ಮಂಡಳಿಯ ಗಣೇಶ ವಿಸರ್ಜನಾ ಮೆರವಣಿಗೆಯು ಮಂಗಳವಾರ ರಾತ್ರಿ ಸಾಗುತ್ತಿದ್ದಾಗ ಅನಿರೀಕ್ಷಿತವಾಗಿ ಮಾರ್ಗಮಧ್ಯದಲ್ಲಿ ದರ್ಗಾ ಪ್ರವೇಶಿಸಿದ ಸಂದರ್ಭದಲ್ಲಿ ಮಸೀದಿಯ ಮೌಲ್ವಿ ಗಣೇಶನಿಗೆ ಪೂಜೆ ಸಲ್ಲಿಸಿ ಬೀಳ್ಕೊಟ್ಟರು.

ಐದನೇ ದಿನದ ಗಣೇಶ ವಿಸರ್ಜನಾ ಸಮಯದಲ್ಲಿ ಹಳಿಯಾಳ ರಸ್ತೆಯ ರೋಷನಿ ಮೋಹರಂ ಕಮಿಟಿಯ ದರ್ಗಾದ ಆವರಣದಲ್ಲಿ ಈ ಅಪರೂಪದ ಪ್ರಸಂಗ ನಡೆದಿದೆ.

ಪ್ರತಿ ವರ್ಷವು ತಡ ರಾತ್ರಿಯವರೆಗೆ ಗಣೇಶ ವಿಸರ್ಜನೆಯ ಮೆರವಣಿಗೆ ನಡೆಯುತ್ತಿತ್ತು. ಆದರೆ ಈ ಬಾರಿ ಕೋವಿಡ್ ನಿಯಮಗಳನ್ನು ಪಾಲಿಸುವ ಸಲುವಾಗಿ ಸಂಜೆ 7 ಗಂಟೆಗೇ ಗಣೇಶ ವಿಸರ್ಜನಾ ಮೆರವಣಿಯನ್ನು ಪ್ರಾರಂಭಿಸಲಾಯಿತು. ಗಣೇಶನ ಮೆರವಣಿಗೆ ದರ್ಗಾ ಪ್ರವೇಶಿಸಿದ್ದನ್ನು ಕಂಡು ಮೌಲ್ವಿ ಮುಜಾವರ್ ಇಬ್ರಾಹಿಂ ಗಣಪನಿಗೆ ಕಾಯಿ, ಕರ್ಪೂರ ಅರ್ಪಿಸಿ ಪೂಜೆ ಸಲ್ಲಿಸಿ ಬೀಳ್ಕೊಟ್ಟರು.

ನಗರದಲ್ಲಿ ಇದೇ ಮೊದಲ ಬಾರಿಗೆ ಈ ರೀತಿ ನಡೆದಿದೆ ಎನ್ನಲಾಗಿದ್ದು ಈ ಸೌಹಾರ್ದದ ಕ್ಷಣಕ್ಕೆ ನೂರಾರು ಜನರು ಸಾಕ್ಷಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT