ಸಮುದಾಯದ ಅಧ್ಯಕ್ಷಅಣ್ಣಪ್ಪ ಮೊಗೇರ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಸಂದರ್ಭದಲ್ಲಿ, ಸೀತಾರಾಮ ಮೊಗೇರ ತಮ್ಮ ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಕಡ್ಡಿ ಗೀರಿ ಆತ್ಮಹತ್ಯೆಗೆ ಯತ್ನಿಸಿದರು. ಅದನ್ನು ಗಮನಿಸಿದ ಅವರ ಹಿಂಬದಿಯಲ್ಲಿದ್ದವರು ತಡೆದರೂ ಪುನಃ ಅದೇ ಪ್ರಯತ್ನಕ್ಕೆ ಮುಂದಾದರು. ಇದರಿಂದ ಸ್ವಲ್ಪ ಹೊತ್ತು ಆತಂಕದ ಸನ್ನಿವೇಶ ಸ್ಥಳದಲ್ಲಿ ಉಂಟಾಯಿತು. ನಂತರ ಅವರನ್ನು ಕರೆದುಕೊಂಡು ಹೋಗಿ ಮೈಮೇಲೆ ನೀರು ಸುರಿದು, ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು.