<p><strong>ಕಾರವಾರ:</strong> ಜಿಲ್ಲೆಯಲ್ಲಿ ಕುಡಿಯುವ ನೀರಿಗಾಗಿ ಸರ್ಕಾರಿ ಅನುದಾನ ಬಳಸಿ ಈ ವರ್ಷಒಂದೇ ಒಂದು ಕೊಳವೆಬಾವಿ ಕೊರೆದಿಲ್ಲ. ಬದಲಿಗೆ ಈಗಾಗಲೇ ಇರುವ ಯೋಜನೆಗಳ ಪೈಪ್ಲೈನ್ಗಳನ್ನು ವಿಸ್ತರಣೆ ಮಾಡಲಾಗಿದೆ. ಅಂತರ್ಜಲವೃದ್ಧಿಗೆ ಜಿಲ್ಲಾ ಪಂಚಾಯ್ತಿ ಕೈಗೊಂಡ ಈ ಕ್ರಮ ಪ್ರತಿಫಲ ನೀಡುವ ನಿರೀಕ್ಷೆಯಿದೆ.</p>.<p>‘ಈ ಮೊದಲು ಒಂದು ವರ್ಷಕ್ಕೆ ಸುಮಾರು ಒಂದು ಸಾವಿರ ಕೊಳವೆಬಾವಿಗಳನ್ನು ಕೊರೆದಿರುವ ಉದಾಹರಣೆಯೂ ಇದೆ. ಕಳೆದ ವರ್ಷಈ ಬೇಡಿಕೆಯನ್ನುನಿಯಂತ್ರಿಸಿ 390ಕೊಳವೆಬಾವಿಗಳಿಗೆ ಇಳಿಸಲಾಯಿತು. ಈ ವರ್ಷ ಒಂದಕ್ಕೂ ಅನುಮತಿ ನೀಡಿಲ್ಲ. ಬದಲಾಗಿ, ಸಮಸ್ಯೆ ಎದುರಾದ ಪ್ರದೇಶಕ್ಕೆ ಹತ್ತಿರದಲ್ಲಿರುವ ನೀರಿನ ಯೋಜನೆಯಿಂದಲೇ ಪೈಪ್ಲೈನ್ ಅಳವಡಿಸಿ ನಾಗರಿಕರಿಗೆ ಅನುಕೂಲ ಮಾಡಿಕೊಡಲಾಗಿದೆ’ ಎನ್ನುತ್ತಾರೆಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮೊಹಮ್ಮದ್ ರೋಷನ್.</p>.<p>‘ಜಿಲ್ಲೆಯಲ್ಲಿ ಅಂತರ್ಜಲ ವೃದ್ಧಿಗೆ ಆದ್ಯತೆ ನೀಡಲಾಗಿದೆ. ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಯೋಜನೆ (ಎನ್.ಆರ್.ಡಿ.ಡಬ್ಲ್ಯು.ಪಿ) ಅಡಿಯಲ್ಲಿ ಪ್ರತಿ ಕೊಳವೆಬಾವಿಗೆ ಇಂಗುಗುಂಡಿ ನಿರ್ಮಿಸುವುದನ್ನು ಕಳೆದ ವರ್ಷದಿಂದ ಕಡ್ಡಾಯ ಮಾಡಲಾಗಿದೆ. ಒಂದುವೇಳೆ,ಅಂದಾಜು ಪಟ್ಟಿಯಲ್ಲಿ ಇದನ್ನುಸೇರಿಸದಿದ್ದರೆ ಕೊಳವೆಬಾವಿ ಕೊರೆಯಲು ಅನುಮತಿ ನೀಡುವುದಿಲ್ಲ. ಜಿಲ್ಲೆಯಲ್ಲಿ ಈ ವರ್ಷ ಒಟ್ಟು396 ಕೊಳವೆಬಾವಿಗಳಿಗೆಇಂಗುಗುಂಡಿ ನಿರ್ಮಿಸಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.</p>.<p class="Subhead"><strong>ಜಲಮೂಲಗಳ ಅಭಿವೃದ್ಧಿ:</strong> ‘ಉದ್ಯೋಗ ಖಾತ್ರಿ ಯೋಜನೆಯಡಿಜಿಲ್ಲೆಯಲ್ಲಿ ಸಾಂಪ್ರದಾಯಿಕ ಜಲಮೂಲಗಳನ್ನು ಪುನಃಶ್ಚೇತನ ಮಾಡಲಾಗಿದೆ.ಕಲ್ಯಾಣಿ, ಗೋಕಟ್ಟೆ, ಕುಂಟೆಗಳನ್ನು ರಾಷ್ಟ್ರೀಯ ನೈಸರ್ಗಿಕ ಸಂಪನ್ಮೂಲ ದತ್ತಾಂಶನಿರ್ವಹಣಾ ವ್ಯವಸ್ಥೆಯ (ಎನ್.ಆರ್.ಡಿ.ಎಂ.ಎಸ್) ಮೂಲಕ ಮ್ಯಾಪಿಂಗ್ ಮಾಡಿಸಲಾಗಿದೆ’ ಎಂದರು.</p>.<p>‘ಜಿಲ್ಲೆಯಲ್ಲಿ ಒಟ್ಟು 684 ಜಲಮೂಲಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ 409ನ್ನು ಅಭಿವೃದ್ಧಿ ಪಡಿಸಲು ಸಾಧ್ಯ ಎಂದು ನೀಡಿದ ಯೋಜನಾ ವರದಿಗೆ ಸರ್ಕಾರದಿಂದ ಮಂಜೂರಾತಿಯೂ ಸಿಕ್ಕಿದೆ. ಈಗಾಗಲೇ 86 ಕೆಲಸಗಳು ಪ್ರಗತಿಯಲ್ಲಿವೆ. ಈ ಎಲ್ಲ ಜಲಮೂಲಗಳ ಅಭಿವೃದ್ಧಿಯಿಂದ ಅಂದಾಜು 24.29 ಲಕ್ಷ ಕ್ಯುಬಿಕ್ ಮೀಟರ್ ನೀರು ಸಂಗ್ರಹಿಸಬಹುದು’ ಎಂದು ವಿವರಿಸಿದರು.</p>.<p class="Subhead"><strong>ಕಿಂಡಿ ಅಣೆಕಟ್ಟೆ ನಿರ್ಮಾಣ:</strong>‘ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಆರು ತಿಂಗಳಲ್ಲಿ 29 ಕಿಂಡಿಅಣೆಕಟ್ಟೆಗಳನ್ನು ನಿರ್ಮಿಸಲಾಗಿದೆ. ಈ ವರ್ಷ ಕನಿಷ್ಠ 100ನ್ನಾದರೂ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಇದು ಮಳೆ ನೀರು ಸಂಗ್ರಹಕ್ಕೆ ದೊಡ್ಡ ಆಸ್ತಿಯಾಗಬಹುದು’ ಎಂದು ಮೊಹಮ್ಮದ್ ರೋಶನ್ ವಿಶ್ವಾಸ ವ್ಯಕ್ತಪಡಿಸುತ್ತಾರೆ.</p>.<p><strong>ಕಿಂಡಿ ಅಣೆಕಟ್ಟೆ ಯೋಜನೆ</strong></p>.<p>231: ಗ್ರಾಮಗಳಲ್ಲಿ ನಿರ್ಮಾಣಕ್ಕೆ ಯೋಜನೆ</p>.<p>500: ಕಿಂಡಿ ಅಣೆಕಟ್ಟೆ ನಿರ್ಮಿಸುವ ಗುರಿ</p>.<p>82: ಈಗಾಗಲೇ ಆರಂಭವಾಗಿರುವ ಕಾಮಗಾರಿ</p>.<p>29ವರೆಗೆ ನಿರ್ಮಾಣವಾಗಿರುವ ಕಿಂಡಿ ಅಣೆಕಟ್ಟೆ</p>.<p>*<strong> ಆಧಾರ: ಜಿ.ಪಂ: </strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರವಾರ:</strong> ಜಿಲ್ಲೆಯಲ್ಲಿ ಕುಡಿಯುವ ನೀರಿಗಾಗಿ ಸರ್ಕಾರಿ ಅನುದಾನ ಬಳಸಿ ಈ ವರ್ಷಒಂದೇ ಒಂದು ಕೊಳವೆಬಾವಿ ಕೊರೆದಿಲ್ಲ. ಬದಲಿಗೆ ಈಗಾಗಲೇ ಇರುವ ಯೋಜನೆಗಳ ಪೈಪ್ಲೈನ್ಗಳನ್ನು ವಿಸ್ತರಣೆ ಮಾಡಲಾಗಿದೆ. ಅಂತರ್ಜಲವೃದ್ಧಿಗೆ ಜಿಲ್ಲಾ ಪಂಚಾಯ್ತಿ ಕೈಗೊಂಡ ಈ ಕ್ರಮ ಪ್ರತಿಫಲ ನೀಡುವ ನಿರೀಕ್ಷೆಯಿದೆ.</p>.<p>‘ಈ ಮೊದಲು ಒಂದು ವರ್ಷಕ್ಕೆ ಸುಮಾರು ಒಂದು ಸಾವಿರ ಕೊಳವೆಬಾವಿಗಳನ್ನು ಕೊರೆದಿರುವ ಉದಾಹರಣೆಯೂ ಇದೆ. ಕಳೆದ ವರ್ಷಈ ಬೇಡಿಕೆಯನ್ನುನಿಯಂತ್ರಿಸಿ 390ಕೊಳವೆಬಾವಿಗಳಿಗೆ ಇಳಿಸಲಾಯಿತು. ಈ ವರ್ಷ ಒಂದಕ್ಕೂ ಅನುಮತಿ ನೀಡಿಲ್ಲ. ಬದಲಾಗಿ, ಸಮಸ್ಯೆ ಎದುರಾದ ಪ್ರದೇಶಕ್ಕೆ ಹತ್ತಿರದಲ್ಲಿರುವ ನೀರಿನ ಯೋಜನೆಯಿಂದಲೇ ಪೈಪ್ಲೈನ್ ಅಳವಡಿಸಿ ನಾಗರಿಕರಿಗೆ ಅನುಕೂಲ ಮಾಡಿಕೊಡಲಾಗಿದೆ’ ಎನ್ನುತ್ತಾರೆಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮೊಹಮ್ಮದ್ ರೋಷನ್.</p>.<p>‘ಜಿಲ್ಲೆಯಲ್ಲಿ ಅಂತರ್ಜಲ ವೃದ್ಧಿಗೆ ಆದ್ಯತೆ ನೀಡಲಾಗಿದೆ. ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಯೋಜನೆ (ಎನ್.ಆರ್.ಡಿ.ಡಬ್ಲ್ಯು.ಪಿ) ಅಡಿಯಲ್ಲಿ ಪ್ರತಿ ಕೊಳವೆಬಾವಿಗೆ ಇಂಗುಗುಂಡಿ ನಿರ್ಮಿಸುವುದನ್ನು ಕಳೆದ ವರ್ಷದಿಂದ ಕಡ್ಡಾಯ ಮಾಡಲಾಗಿದೆ. ಒಂದುವೇಳೆ,ಅಂದಾಜು ಪಟ್ಟಿಯಲ್ಲಿ ಇದನ್ನುಸೇರಿಸದಿದ್ದರೆ ಕೊಳವೆಬಾವಿ ಕೊರೆಯಲು ಅನುಮತಿ ನೀಡುವುದಿಲ್ಲ. ಜಿಲ್ಲೆಯಲ್ಲಿ ಈ ವರ್ಷ ಒಟ್ಟು396 ಕೊಳವೆಬಾವಿಗಳಿಗೆಇಂಗುಗುಂಡಿ ನಿರ್ಮಿಸಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.</p>.<p class="Subhead"><strong>ಜಲಮೂಲಗಳ ಅಭಿವೃದ್ಧಿ:</strong> ‘ಉದ್ಯೋಗ ಖಾತ್ರಿ ಯೋಜನೆಯಡಿಜಿಲ್ಲೆಯಲ್ಲಿ ಸಾಂಪ್ರದಾಯಿಕ ಜಲಮೂಲಗಳನ್ನು ಪುನಃಶ್ಚೇತನ ಮಾಡಲಾಗಿದೆ.ಕಲ್ಯಾಣಿ, ಗೋಕಟ್ಟೆ, ಕುಂಟೆಗಳನ್ನು ರಾಷ್ಟ್ರೀಯ ನೈಸರ್ಗಿಕ ಸಂಪನ್ಮೂಲ ದತ್ತಾಂಶನಿರ್ವಹಣಾ ವ್ಯವಸ್ಥೆಯ (ಎನ್.ಆರ್.ಡಿ.ಎಂ.ಎಸ್) ಮೂಲಕ ಮ್ಯಾಪಿಂಗ್ ಮಾಡಿಸಲಾಗಿದೆ’ ಎಂದರು.</p>.<p>‘ಜಿಲ್ಲೆಯಲ್ಲಿ ಒಟ್ಟು 684 ಜಲಮೂಲಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ 409ನ್ನು ಅಭಿವೃದ್ಧಿ ಪಡಿಸಲು ಸಾಧ್ಯ ಎಂದು ನೀಡಿದ ಯೋಜನಾ ವರದಿಗೆ ಸರ್ಕಾರದಿಂದ ಮಂಜೂರಾತಿಯೂ ಸಿಕ್ಕಿದೆ. ಈಗಾಗಲೇ 86 ಕೆಲಸಗಳು ಪ್ರಗತಿಯಲ್ಲಿವೆ. ಈ ಎಲ್ಲ ಜಲಮೂಲಗಳ ಅಭಿವೃದ್ಧಿಯಿಂದ ಅಂದಾಜು 24.29 ಲಕ್ಷ ಕ್ಯುಬಿಕ್ ಮೀಟರ್ ನೀರು ಸಂಗ್ರಹಿಸಬಹುದು’ ಎಂದು ವಿವರಿಸಿದರು.</p>.<p class="Subhead"><strong>ಕಿಂಡಿ ಅಣೆಕಟ್ಟೆ ನಿರ್ಮಾಣ:</strong>‘ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಆರು ತಿಂಗಳಲ್ಲಿ 29 ಕಿಂಡಿಅಣೆಕಟ್ಟೆಗಳನ್ನು ನಿರ್ಮಿಸಲಾಗಿದೆ. ಈ ವರ್ಷ ಕನಿಷ್ಠ 100ನ್ನಾದರೂ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಇದು ಮಳೆ ನೀರು ಸಂಗ್ರಹಕ್ಕೆ ದೊಡ್ಡ ಆಸ್ತಿಯಾಗಬಹುದು’ ಎಂದು ಮೊಹಮ್ಮದ್ ರೋಶನ್ ವಿಶ್ವಾಸ ವ್ಯಕ್ತಪಡಿಸುತ್ತಾರೆ.</p>.<p><strong>ಕಿಂಡಿ ಅಣೆಕಟ್ಟೆ ಯೋಜನೆ</strong></p>.<p>231: ಗ್ರಾಮಗಳಲ್ಲಿ ನಿರ್ಮಾಣಕ್ಕೆ ಯೋಜನೆ</p>.<p>500: ಕಿಂಡಿ ಅಣೆಕಟ್ಟೆ ನಿರ್ಮಿಸುವ ಗುರಿ</p>.<p>82: ಈಗಾಗಲೇ ಆರಂಭವಾಗಿರುವ ಕಾಮಗಾರಿ</p>.<p>29ವರೆಗೆ ನಿರ್ಮಾಣವಾಗಿರುವ ಕಿಂಡಿ ಅಣೆಕಟ್ಟೆ</p>.<p>*<strong> ಆಧಾರ: ಜಿ.ಪಂ: </strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>