ಪಶ್ಚಿಮ ಘಟ್ಟದಲ್ಲಿ ಗೇರು ನೆಡುತೋಪು ನಿರ್ಮಿಸಲು 20 ವರ್ಷಗಳ ಹಿಂದೆ ಅರಣ್ಯ ಇಲಾಖೆಯು ಗೇರು ಅಭಿವೃದ್ಧಿ ನಿಗಮಕ್ಕೆ ಸಾವಿರಾರು ಎಕರೆ ಜಾಗ ನೀಡಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಜಿಲ್ಲೆಗಳ ಕರಾವಳಿ, ಮಲೆನಾಡು ಇಳಿಜಾರು, ನದಿ ಕಣಿವೆಗಳಲ್ಲಿ ಇರುವ ನೆಡುತೋಪುಗಳಲ್ಲಿ ಗೇರು ಗಿಡಗಳ ಜೊತೆ ಸಸ್ಯ ಸಂಕುಲಗಳಿವೆ. ವಿನಾಶದ ಅಂಚಿನಲ್ಲಿರುವ ವೃಕ್ಷಗಳಿವೆ. ಔಷಧ ಸಸ್ಯಗಳು ಸಹ ಇವೆ. ಯಂತ್ರಗಳನ್ನು ಉಪಯೋಗಿಸಿದರೆ, ಇವುಗಳು ನಾಶವಾಗುವ ಸಾಧ್ಯತೆ ಇರುತ್ತದೆ ಎಂದು ಅವರು ಹೇಳಿದ್ದಾರೆ.